ಮನೆ ಆರೋಗ್ಯ ತ್ರಿಫಲವನ್ನು ಉಪಯೋಗಿಸಿ ಕೈಗೊಳ್ಳಬಹುದಾದ ಕೆಲವು ಸುಲಭ ಚಿಕಿತ್ಸೆಗಳು

ತ್ರಿಫಲವನ್ನು ಉಪಯೋಗಿಸಿ ಕೈಗೊಳ್ಳಬಹುದಾದ ಕೆಲವು ಸುಲಭ ಚಿಕಿತ್ಸೆಗಳು

0

    1. ಇಲ್ಲಿ ಸೂಚಿಸಲಾಗಿರುವ ಕೆಲವು ಸರಳ ಚಿಕಿತ್ಸೆಗಳಿಗೆ ವೈದ್ಯರ ಸಲಹೆ ಅನಗತ್ಯ ಅನುಮಾನಗಳು ಉಂಟಾದಲ್ಲಿ ವೈದ್ಯರ ಸಲಹೆ ಪಡೆದು ಚಿಕಿತ್ಸೆಯನ್ನು ಮುಂದುವರಿಸಬಹುದು.
    2. ಹಲವಾರು ಸಾಮಾನ್ಯ ಹಾಗೂ ಮಾರಣಾಂತಿಕ ಕಾಯಿಲೆಗಳನ್ನು (ಉರಿಮೂತ್ರ ತಡೆಮೂತ್ರ, ವಿಸರ್ಪ, ಗಳಗಂಡ, ಕುಷ್ಠರೋಗ, ಮಧುಮೇಹ, ಮೂಲವ್ಯಾಧಿ, ಭಗಂದರ, ಕಾಮಾಲೆ, ಕ್ಷಯರೋಗ, ಅಪಸ್ಮಾರ, ವಿಷಮ ಜ್ವರ, ತೊನ್ನು, ಪ್ರದರ ಮುಂತಾದ ರೋಗಗಳು) ತ್ರಿಫಲ ಮತ್ತು ತ್ರಿಫಲಯುಕ್ತ ಔಷಧಿಗಳಿಂದ ಚಿಕಿತ್ಸೆ ಮಾಡಬಹುದೆಂದು ಈಗಾಗಲೇ ಅರಿವಿಗೆ ಬಂದಿರುತ್ತದೆ (ಚರಕ, ಧನ್ವಂತರಿ ಮತ್ತು ಸುಶ್ರುತ ಸಂಹಿತೆಯಲ್ಲಿ ವಿವರಿಸಲಾರ ಹಲವಾರು ಚಿಕಿತ್ಸಾ ವಿಧಾನಗಳನ್ನು ಪರಿಶೀಲಿಸಿದಾಗ ಮತ್ತು ಐಮಾರುಕಟ್ಟೆಯಲ್ಲಿ ದೊರೆಯುವ ಹಲವಾರು ತ್ರಿಫಲಯುಕ್ತ ಔಷಧಿಗಳ ಪಟ್ಟಿಯಲ್ಲಿ ಅವುಗಳ ಉಪಯೋಗವನ್ನು ಅವಲೋಕಿಸಿದ ನಂತರ). ಅಂತಹ ಚಿಕಿತ್ಸೆಗಳನ್ನು ಯಾವುದೇ ಕಾರಣಕ್ಕೂ ವೈದ್ಯರ ಗಮನಕ್ಕೆ ತರದೆ ಸ್ವತಃ ಕೈಗೊಳ್ಳಬಾರದು. ಕಾಯಿಲೆಯನ್ನು ಗುರುತಿಸುವಲ್ಲಿ ಮತ್ತು
      ಚಿಕಿತ್ಸೆಗೆ ಔಷಧಿಯನ್ನು ಆಯ್ಕೆ ಮಾಡುವಲ್ಲಿ ಲೋಪ ಉಂಟಾದರೆ ಉದ್ದೇಶಿತ ಗುರಿ ಸಾಧ್ಯವಾಗುವುದಿಲ್ಲ. ಆದುದರಿಂದ ಅಂತಹ ರೋಗಗಳ ಚಿಕಿತ್ಸೆಗೆ ವೈದ್ಯರ ಸಲಹೆ ಸೂಚನೆ ಅತ್ಯಾವಶ್ಯಕ.

    Join Our Whatsapp Group

    3- ತ್ರಿಫಲವನ್ನು ತಯಾರು ಮಾಡಿದ ಒಂದು ವರ್ಷದೊಳಗೆ ಅಥವಾ ತಯಾರಿಕಾ ಕಂಪನಿ ಸೂಚಿಸಿದ ಅವಧಿಯೊಳಗೆ ಉಪಯೋಗಿಸಬೇಕು. ಸಂಗ್ರಹಿಸಿಡುವಾಗ ತೇವಾಂಶ ಸೇರ್ಪಡೆಯಾಗದಂತೆ ಎಚ್ಚರ ವಹಿಸಬೇಕು. ತ್ರಿಫಲ ಚೂರ್ಣವನ್ನು ತಯಾರಿಸುವ ಹಂತದಲ್ಲಾಗಲಿ ಅಥವಾ ಉಪಯೋಗಿಸುವ ಹಂತದಲ್ಲಾಗಲಿ ಎಚ್ಚರ ತಪ್ಪಿದರೆ
    ತೇವಾಂಶದಿಂದಾಗಿ ಸುಮಾರು 20 ಬಗೆಯ ಶಿಲೀಂಧ್ರಗಳು – ಆಸ್ಪರ್ಜಿಲಲ್ ಜಾತಿಗೆ ಸೇರಿದ 8 ಪ್ರಭೇದಗಳು, ಪೆನಿಸಿಲಿಯಂ ಜಾತಿಗೆ ಸೇರಿದ 4 ಪ್ರಭೇದಗಳು, ಹೆಲ್ಲಿಂಥೋಸ್ಪೆರಿಯಂ ಕುರ್ವುಲಾರಿಯ, ಆರ್ಲ್ಟನಾರಿಯ, ಜಿಯೋಟ್ರೈಕಂ ಪ್ರೈವೇರಿಯಂ ರೈಸೋಪಸ್‌, ಪೆಸಿಲೊಮೈಸಿನ್, ಸಿನ್ ಸಿಫೆಲಾಸ್ಟಂ ಜಾತಿಗೆ ಸೇರಿದ ತಲಾ ಒಂದೊಂದು ಪ್ರಭೇದಗಳು ತ್ರಿಫಲದ ಸೋಂಕಿಗೆ ಕಾರಣವಾಗುತ್ತವೆ. ಬೂಷ್ಟು | ಶಿಲೀಂಧ್ರ ಬೆಳೆದ ಚೂರ್ಣವನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಈ ಶಿಲೀಂಧ್ರಗಳು ಚೂರ್ಣಕ್ಕೆ ಅಪ್ಲಟಾಕ್ಸಿನ್ ಎಂಬ ವಿಷ ವಸ್ತುವನ್ನು ಬಿಡುಗಡೆ ಮಾಡಿರುತ್ತವೆ. ಈ ಕ್ರಿಯೆ ತ್ರಿಫಲಾಗೆ ಮಾತ್ರ ಸೀಮಿತವಲ್ಲ, ಬೂಸ್ಟು ಬೆಳೆದಿರುವ ಎಲ್ಲಾ ಆಹಾರ ವಸ್ತುಗಳಲ್ಲೂ ನಡೆದಿರುತ್ತದೆ. ಎಚ್ಚರ ತಪ್ಪಿ ಇಂತಹ ಹಾಳಾದ ತ್ರಿಫಲವನ್ನು ಸೇವಿಸಿದರೆ ಅದರಲ್ಲಿರುವ ಆಫ್ಲಟಾಕ್ಸಿನ್ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ.

    4 ಮೊದಲ ಬಾರಿಗೆ ತ್ರಿಫಲ ಚೂರ್ಣ ಸೇವಿಸಿದಾಗ ಹೊಟ್ಟೆಯ ನುಲಿತ, ಹೊಟ್ಟೆಯಲ್ಲಿ ಗುಳುಗುಳು ಶಬ್ದ ಒಂದು ತರಹ ಕಸಿವಿಸಿ ಕೆಲವರಿಗೆ ಉಂಟಾಗುತ್ತದೆ. ಆದರೆ ಇದು ಕ್ಷಣಿಕ, ಪ್ರತಿಕೂಲ ಪರಿಣಾಮವೆಂದು ಗಾಭರಿಯಾಗಬೇಕಿಲ್ಲ.

    1. ತ್ರಿಫಲ ಚೂರ್ಣವನ್ನು ಹಾಲಿನೊಡನೆ ಸೇವಿಸಬಾರದು. ಇದರಿಂದ ದೇಹಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಚೂರ್ಣವನ್ನು ಹಾಲಿಗೆ ಮಿಶ್ರಣ ಮಾಡಿದಾಗ, ಹಾಲು ಒಡೆದು ಗರಣೆಯಂತಾಗುತ್ತದೆ. ಏಕೆಂದರೆ ತ್ರಿಫಲದಲ್ಲಿ ಬೆಟ್ಟದ ನೆಲ್ಲಿಕಾಯಿ ಒಂದು ಭಾಗವಾಗಿರುವುದರಿಂದ ಅದರ ಆಮ್ಮಿಯ ಘಟಕ ಹಾಲನ್ನು ಒಡೆಯುವಂತೆ ಮಾಡುತ್ತದೆ. ತ್ರಿಫಲವನ್ನು ಹಾಲಿಗೆ ಮಿಶ್ರಣ ಮಾಡುವುದರ ಬದಲು ಅವಶ್ಯವಿದ್ದಲ್ಲಿ ಚೂರ್ಣ ಸೇವಿಸಿದ ಅರ್ಧ ಗಂಟೆಯ ನಂತರ ಕುಡಿಯಬಹುದು.
    2. ತ್ರಿಫಲ ಚೂರ್ಣದ ಪೂರ್ಣ ಪ್ರಯೋಜನ ಪಡೆಯಬೇಕೆನ್ನುವವರು, ಆಯುರ್ವೇದ ಗ್ರಂಥಗಳಲ್ಲಿ ಸೂಚಿಸಿರುವಂತೆ ಆಯಾ ಋತುವಿಗೆ ಸೂಚಿಸಿರುವ ಅನುಪಾನದೊಡನೆ ಸೇವಿಸಬೇಕು. ಸರ್ವ ಋತುಗಳಲ್ಲೂ ಉಗುರು ಬೆಚ್ಚಗಿನ ನೀರಿನೊಡನೆ ತ್ರಿಫಲವನ್ನು ಸೇವಿಸಬಹುದಾಗಿದೆ. ಋತುಗಳು ಅನುಪಾನ
    3. ವಸಂತ ಋತು (Spring)
      —ಜೇನುತುಪ್ಪ

    2 ಗ್ರೀಷ್ಮ ಋತು (Summer)
    —ಬೆಲ್ಲ / ಮಜ್ಜಿಗೆ

    3.ವರ್ಷ ಋತು(Mansoon)
    —ಸೈಂಧ್ರ ಲವಣ

    1. ಶರದ್ ಋತು (Autumn)
      —ಕಲ್ಲು ಸಕ್ಕರೆ
    2. ಹೇಮಂತ ಋತು (Pre-winter)— ಶುಂಠಿ

    6 ಶಿಷಿರ ಋತು (Winter)—
    ಹಿಪ್ಪಲಿ

    (ಅನುಪಾನದ ಪ್ರಮಾಣ 1 ಭಾಗ ತ್ರಿಫಲ; ¾ ಭಾಗ ಶುಂಠಿ / ಹಿಪ್ಪಲಿ / ಸೈಂಧವ ಲವಣ; ಇತರ ದ್ರವ್ಯಗಳು ಒಂದು ಭಾಗ )

    7 ಸಾಮಾನ್ಯವಾಗಿ ಉಪಯೋಗಿಸುವ ತ್ರಿಫಲದಲ್ಲಿ ಬೀಜ ತೆಗೆದ ಅಳಲೆಕಾಯಿ, ತಾರೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು ಸಮ ಪ್ರಮಾಣದಲ್ಲಿ (111) ಮಿಶ್ರಣ ಮಾಡಿರುತ್ತಾರೆ. ಕೆಲವೊಮ್ಮೆ ಕೆಲವು ಕಾಯಿಲೆಗಳ ಚಿಕಿತ್ಸೆಗೆ ಅಥವಾ ರಸಾಯನವಾಗಿ ಉಪಯೋಗಿಸುವ ಉದ್ದೇಶದಿಂದ ಒಂದು ಭಾಗ ಅಳಲೆಕಾಯಿ, ಎರಡು ಭಾಗ ತಾರೆಕಾಯಿ ಮತ್ತು ನಾಲ್ಕು ಭಾಗ ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು (1:24) ಮಿಶ್ರಣ ಮಾಡಿ ಉಪಯೋಗಿಸುತ್ತಾರೆ.)

    ತ್ರಿಫಲ ಸೇವಿಸುವ ಪ್ರಮಾಣ

    1 ಚೂರ್ಣ : 2 4 ಗ್ರಾಂ ದಿನಕ್ಕೆ, ವಿಭಜಿತ ಭಾಗದಲ್ಲಿ,

    2 : 1-2, 2 2 30. (500, 750 2.)

    3 ಕ್ಯಾತ / ಕಷಾಯ : 10-20 ಮಿ.ಲೀ., ದಿನಕ್ಕೆ 2 ಬಾರಿ.

    *ತ್ರಿಫಲ ಕ್ವಾತ / ಕಷಾಯ ತಯಾರಿಸುವ ವಿಧಾನ

    ಒಂದು ಭಾಗ ತ್ರಿಫಲ ಚೂರ್ಣಕ್ಕೆ* 16 ಭಾಗ ಶುದ್ಧ ನೀರು ಸೇರಿಸಿ ಒಂದು ಗಂಟೆ ನೆನೆಸಿಡಬೇಕು. ಅರ್ಧ ಭಾಗ ಕಷಾಯ ಉಳಿಯುವವರೆಗೆ ಮಂದಾಗ್ನಿಯಲ್ಲಿ ಕಾಯಿಸಿ ಸೋಸಿ ಶೇಖರಿಸಿಡಬೇಕು. ಪ್ರತಿ ಬಾರಿ ಉಪಯೋಗಿಸುವಾಗಲೂ ಕಷಾಯವನ್ನು ಹೊಸದಾಗಿ ತಯಾರಿಸಿಕೊಳ್ಳಬೇಕು.

    ತ್ರಿಫಲ ಚೂರ್ಣ ಸೇವನೆಯಿಂದಾಗುವ ಉಪಯೋಗಗಳು

    ತ್ರಿಫಲ ಚೂರ್ಣ, 3 ಫಲಗಳಾದ ಅಳಲೆಕಾಯಿ, ತಾರೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿಗಳ ಮಿಶ್ರಣ. ಪ್ರತ್ಯೇಕವಾಗಿ, ಪ್ರತಿ ಫಲಕ್ಕೂ ಈ ಮೊದಲು ವಿವರಿಸಲಾಗಿರುವ ಔಷಧೀಯ ಗುಣಗಳು ತ್ರಿಫಲದಲ್ಲೂ ಸಂಮ್ಮಿ ಳತವಾಗಿರುತ್ತದೆ ಹಾಗೂ ಪರಿಣಾಮಕಾರಿಯಾದ ರೀತಿಯಲ್ಲಿ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಮತ್ತೊಮ್ಮೆ ಆ ಎಲ್ಲಾ ಉಪಯೋಗಗಳನ್ನು ಪಟ್ಟಿ ಮಾಡುವುದರಿಂದ ಪುನರಾವರ್ತನೆಯಾಗುತ್ತದೆ ಎಂಬ ಕಾರಣದಿಂದ ವಿವರಣೆಯನ್ನು ಕೊಟ್ಟಿರುವುದಿಲ್ಲ. ಆದರೂ ಕೆಲವೊಂದು ಔಷದೀಯ ಉಪಯೋಗಗಳನ್ನು ಸೂಚಿಸಲಾಗಿದೆ.

    ಆಯುಧದಿಂದಾದ ಉಂಟಾದ ಗಾಯಕ್ಕೆ ಚಿಕಿತ್ಸೆ

    ಹರಿತವಾದ ಆಯುಧ / ಚಾಕುವಿನಿಂದ ಕೈ ಕುಯ್ದು ಕೊಂಡಾಗ, ಕೂಡಲೆ ರಕ್ತ ಒಸರುವ ಜಾಗದ ಮೇಲೆ ತ್ರಿಫಲ ಚೂರ್ಣವನ್ನು ಸಿಂಪಡಿಸಬೇಕು. ಗಾಯ ಸ್ವಲ್ಪ ದೊಡ್ಡದಾಗಿದ್ದರೆ ಚೂರ್ಣ ಸಿಂಪಡಿಸಿದ ನಂತರ ಬ್ಯಾಂಡೇಜ್ ಮಾಡಬೇಕು.

    *ಕಣ್ಣಿನ ದೃಷ್ಟಿ ಉತ್ತಮವಾಗಿರುವಂತೆ ಮತ್ತು ಕಣ್ಣಿನ *ಕಾಯಿಲೆಗಳು ಉಂಟಾಗದಂತೆ ತಡೆಯಲು ಚಿಕಿತ್ಸೆ

    ತ್ರಿಫಲ ಚೂರ್ಣ, ಹಸುವಿನ ತುಪ್ಪ ಮತ್ತು ಜೇನುತುಪ್ಪ ಇವುಗಳನ್ನು ಮಿಶ್ರ ಮಾಡಿ ರಾತ್ರಿ ಮಲಗುವ ಮೊದಲು ಆಹಾರ ಸೇವಿಸಿದ ನಂತರ ಸೇವಿಸುವ ಪರಿಪಾಠ ಬೆಳೆಸಿಕೊಂಡರೆ ಕಣ್ಣಿನ ದೋಷಗಳು ಉಂಟಾಗುವ ಸಂಭವ ಕಡಿಮೆ. ಕಣ್ಣಿನ ರೋಗಗಳ ಚಿಕಿತ್ಸೆಗೆ ಹಲವಾರು ತ್ರಿಫಲಯುಕ್ತ ಔಷಧಿಗಳಿವೆ. ಗ್ಲಾಕೋಮ ಕಣ್ಣಿನ ಕಾಯಿಲೆಗೆ ಮಹಾತ್ರಿಪಲಾಧಿ ಘೃತವನ್ನು ಉಪಯೋಗಿಸಲಾಗುತ್ತಿದೆ. ಮದ್ರಾಸ್ ಐ ನಂತಹ ಕಣ್ಣಿನ ಉರಿಯೂತಕ್ಕೆ ತ್ರಿಫಲ ಐ ಡ್ರಾಪ್ ಉಪಯೋಗಿಸಲಾಗುತ್ತಿದೆ. ಕಣ್ಣಿನ ಕಣ್ಣು ರೆಪ್ಪೆಯ ಉರಿಯೂತಕ್ಕೆ ತ್ರಿಫಲ ಕ್ವಾತದಿಂದ ಕಣ್ಣು ತೊಳೆಯುವುದರ ಮೂಲಕ ಚಿಕಿತ್ಸೆ ಮಾಡಬಹುದಾದರೂ, ಕಣ್ಣು ಸೂಕ್ಷ್ಮವಾದ ಅಂಗ, ಕಣ್ಣಿನ ರೋಗಗಳ ಚಿಕಿತ್ಸೆಯು ವೈದ್ಯರಿಂದಲೇ ಮಾಡಿಸಿಕೊಳ್ಳುವುದು ಅತ್ಯಾವಶ್ಯಕ.

    1. ಗಾಯದ ಚಿಕಿತ್ಸೆಗೆ

    ಬಹು ದಿನಗಳಿಂದ ವಾಸಿಯಾಗದ ಗಾಯವನ್ನು ಪ್ರತಿದಿನ ತ್ರಿಫಲ ಕಷಾಯದಿಂದ ತೊಳೆಯುವುದರಿಂದ ಗಾಯ ಬೇಗ ವಾಸಿಯಾಗುತ್ತದೆ.

    ದೇಹಾರೋಗ್ಯವನ್ನು ಕಾಪಾಡಲು ಮತ್ತು ರೋಗ ರಹಿತ ಬದುಕು ನಡೆಸಲು ಅಗತ್ಯವಾದ ಚಿಕಿತ್ಸೆ

    ತ್ರಿಫಲವನ್ನು ರಸಾಯನ ದ್ರವ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಉತ್ತಮ ಆಹಾರ ಸೇವಿಸುತ್ತ ನಿಯಮಿತವಾಗಿ ವ್ಯಾಯಾಮ ಮಾಡುವುದರ ಜೊತೆಗೆ ದಿನಕ್ಕೆ 2 ಬಾರಿ ತ್ರಿಫಲ ಚೂರ್ಣ ಸೇವಿಸುವುದರಿಂದ ದೇಹಾರೋಗ್ಯ ಉತ್ತಮವಾಗುತ್ತದೆ.

    ಆಚಾರ್ಯ ಚರಕ ಮತ್ತು ಧನ್ವಂತರಿಯವರು ಪ್ರತಿದಿನ ಬೆಳಿಗ್ಗೆ ಆಹಾರ ಸೇವಿಸಿದ ನಂತರ ಒಂದು ಅಳಲೆಕಾಯಿಯ ಚೂರ್ಣ, ಮಧ್ಯಾಹ್ನ 2 ತಾರೆಕಾಯಿಗಳ ಚೂರ್ಣ ಮತ್ತು ರಾತ್ರಿ ಊಟದ ನಂತರ 4 ಬೆಟ್ಟದ ನೆಲ್ಲಿಕಾಯಿಯ ಚೂರ್ಣ ಸೇವಿಸುವ ಅಭ್ಯಾಸ ಬೆಳೆಸಿಕೊಂಡರೆ, ರೋಗ ರುಜಿನಗಳ ತೊಂದರೆಯಿಲ್ಲದೆ ದೀರ್ಘಕಾಲ ಬದುಕಿರಬಹುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.