ಮನೆ ಸುದ್ದಿ ಜಾಲ ಅರಕೆರೆಯಲ್ಲಿ ತಾತ್ಕಾಲಿಕ ಸೇತುವೆ ಕುಸಿತ: ಮೈಸೂರು-ಹಾಸನ ನಡುವೆ ವಾಹನ ಸಂಚಾರ ಬಂದ್‌

ಅರಕೆರೆಯಲ್ಲಿ ತಾತ್ಕಾಲಿಕ ಸೇತುವೆ ಕುಸಿತ: ಮೈಸೂರು-ಹಾಸನ ನಡುವೆ ವಾಹನ ಸಂಚಾರ ಬಂದ್‌

0

ಕೃಷ್ಣರಾಜನಗರ(Krishnaraja nagara): ತಾಲೂಕಿನ ಮೈಸೂರು ರಸ್ತೆಯ ಅರಕೆರೆ ಗ್ರಾಮದ ಬಳಿ ಮೈಸೂರು-ಹಾಸನ ಮುಖ್ಯರಸ್ತೆಯ ಸೇತುವೆ ಕುಸಿತಗೊಂಡಿದ್ದು, ಪಕ್ಕದಲ್ಲೇ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆಯೂ ಮಳೆಯಿಂದಾಗಿ ಕುಸಿದಿರುವ ಕಾರಣ ಮೈಸೂರು-ಹಾಸನ ನಡುವೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ನೂತನ ಸೇತುವೆ ನಿರ್ಮಾಣ ಮಾಡಲು ಕಾಮಗಾರಿ ಪ್ರಾರಂಭವಾಗಿದ್ದು, ಭಾರಿ ಮಳೆಗೆ ರಾತ್ರೋರಾತ್ರಿ ಕಾಲುವೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ನುಗ್ಗಿದ ಪರಿಣಾಮ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಯಂತ್ರ ನೀರಿನಲ್ಲಿ ಮುಳುಗಿದೆ.

ಶಿಥಿಲಗೊಂಡ ಸೇತುವೆಯ ಮೇಲೆ ವಾಹನಗಳು ಸಂಚರಿಸುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗುತ್ತಿಗೆದಾರ ಜಯಚಂದ್ರೇಗೌಡ, ನೀರಾವರಿ ಇಲಾಖೆ ಎಇ ಈರಣ್ಣ, ಎಇಇ ಗುರುರಾಜು ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ಬಂದ್‌ ಮಾಡಿ ವಾಹನಗಳು ಬೇರೆ ಮಾರ್ಗದಲ್ಲಿ ಸಂಚರಿಸಲು ಅನುವು ಮಾಡಿಕೊಟ್ಟರು.

ಸಂಚಾರಕ್ಕೆ ಬದಲಿ ಮಾರ್ಗ

ಮೈಸೂರಿನಿಂದ ಹಾಸನಕ್ಕೆ ತೆರಳುವ ವಾಹನಗಳು ಪಟ್ಟಣದಿಂದ ಡೋರ್ನಹಳ್ಳಿ, ದೊಡ್ಡೇಕೊಪ್ಪಲು ಮಾರ್ಗವಾಗಿ ಹಾಗೂ ಪಟ್ಟಣದಿಂದ ಮುಳ್ಳೂರು, ದೊಡ್ಡೇಕೊಪ್ಪಲು ಮಾರ್ಗವಾಗಿ ಸಂಚಾರ ಮಾಡಲು ಬದಲಿ ಮಾರ್ಗ ಸೂಚಿಸಲಾಗಿದೆ.

ಹಿಂದಿನ ಲೇಖನಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಆನ್ ಲೈನ್ ನಲ್ಲಿ ವೀಕ್ಷಿಸುವುದು ಹೇಗೆ?
ಮುಂದಿನ ಲೇಖನಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ರಾಜ್ಯಕ್ಕೆ 9 ಸಾವಿರ ಕೋಟಿ ಮಂಜೂರು