ಮನೆ ಮನರಂಜನೆ ‘ಆಯುಕ್ತ’ ಚಿತ್ರ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆ

‘ಆಯುಕ್ತ’ ಚಿತ್ರ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆ

0

ಮಂಡ್ಯ: ಮಳವಳ್ಳಿಯ ರಾಜರಾಜೇಶ್ವರಿ ಚಿತ್ರಮಂದಿರಕ್ಕೆ ಚಿತ್ರದ ಪ್ರಮೋಷನ್ ಗಾಗಿ ಆಯುಕ್ತ ಚಿತ್ರ ತಂಡ ನಿರ್ದೇಶಕರೊಂದಿಗೆ, ನಾಯಕ ನಟ ಸೇರಿ ಹಲವು ಕಲಾವಿದರು ಭೇಟಿ ನೀಡಿದರು.

ಮಂಡ್ಯದ ಗ್ರಾಮೀಣ ಪ್ರತಿಭೆ ನಿರ್ದೇಶಕ ಕನಸು ರಮೇಶ್ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು ಚಿತ್ರಮಂದಿರಕ್ಕೆ ಆಗಮಿಸಿದ ಚಿತ್ರತಂಡಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.

ಪಟಾಕಿ, ಸಿಡಿಸಿ,ತಮಟೆ ವಾದ್ಯಗಳೊಂದಿಗೆ ಚಿತ್ರತಂಡಕ್ಕೆ ಭವ್ಯ ಸ್ವಾಗತ ಕೋರಿ ಪ್ರೇಕ್ಷಕರೊಂದಿಗೆ ಕುಳಿತು ಚಿತ್ರತಂಡವು ಜೊತೆಗೆ ಕಲಾವಿದರು ಸಿನಿಮಾ ವೀಕ್ಷಣೆ ಮಾಡಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡರು.

ಸಮಾಜಕ್ಕೆ ಚಿತ್ರದ ಮೂಲಕ ಒಂದು ಒಳ್ಳೆಯ ಸಂದೇಶ ಕೊಟ್ಟ ನಿರ್ದೇಶಕರ ಬಗ್ಗೆ ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ ಸಿಕ್ಕಿತು. ಇಂದಿನಿಂದ ರಾಜ್ಯಾದ್ಯಂತ ಆಯುಕ್ತ ಕನ್ನಡ ಚಿತ್ರ ಬಿಡುಗಡೆಯಾಗುತ್ತಿದ್ದು ,ಚಿತ್ರದಲ್ಲಿ ಹೊಸ ಕಲಾವಿದರು ಹಾಗೂ ಯುವ ಕಲಾವಿದರ ನಟನೆಯ ಕೈಚಳಕವಿದೆ.

ಹಿಂದಿನ ಲೇಖನಪಕ್ಷದ ವರಿಷ್ಠರು ಸೂಚಿಸಿದ್ರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧ: ಸಚಿವ ಕೆ.ಎನ್ ರಾಜಣ್ಣ
ಮುಂದಿನ ಲೇಖನಆರ್ ಸಿಬಿ ಮುಖ್ಯ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ