ಮನೆ ಕಾನೂನು ವಿಜಯಪಥ ಸಂಪಾದಕರ ವಿರುದ್ಧ ಬಿಎಂಟಿಸಿ ಜಯನಗರ ಡಿಪೋ ವ್ಯವಸ್ಥಾಪಕ ಪ್ರಶಾಂತ್‌ ದಾಖಲಿಸಿದ್ದ ಪ್ರಕರಣಕ್ಕೆ ಹೈ ಕೋರ್ಟ್‌...

ವಿಜಯಪಥ ಸಂಪಾದಕರ ವಿರುದ್ಧ ಬಿಎಂಟಿಸಿ ಜಯನಗರ ಡಿಪೋ ವ್ಯವಸ್ಥಾಪಕ ಪ್ರಶಾಂತ್‌ ದಾಖಲಿಸಿದ್ದ ಪ್ರಕರಣಕ್ಕೆ ಹೈ ಕೋರ್ಟ್‌ ತಡೆ

0

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು 2021ರ ಏಪ್ರಿಲ್‌ 7ರಿಂದ ಸುಮಾರು 14 ದಿನಗಳವರೆಗೂ ನಡೆಸಿದ ಮುಷ್ಕರದ ವೇಳೆ ವಿಜಯಪಥ ಮುಖ್ಯ ಸಂಪಾದಕರ ವಿರುದ್ಧ ದಾಖಲಿಸಿದ್ದ ಪ್ರಕರಣವೊಂದಕ್ಕೆ ಕರ್ನಾಟಕ ಹೈ ಕೋರ್ಟ್‌ ತಡೆಯಾಜ್ಞೆ ನೀಡಿದೆ.

Join Our Whatsapp Group

ಈ ಮೂಲಕ ಸುಖ ಸುಮ್ಮನೇ ಆರೋಪ ಮಾಡಿ ಅಂದು ಬಿಎಂಟಿಸಿ ಜಯನಗರದ 4ನೇ ಘಟಕದ ವ್ಯವಸ್ಥಾಪಕ ಪ್ರಶಾಂತ್‌, ಘಟಕದ ನಿರ್ವಾಹಕ ಎಸ್‌.ಜೆ. ಮೇಟಿಯನ್ನು ವಿಜಯಪಥ ಸಂಪಾದಕರು ಡ್ಯೂಟಿ ಮಾಡುತ್ತಿದ್ದಾಗ ಅವರನ್ನು ತಡೆದು ಡ್ಯೂಟಿ ಮಾಡದಂತೆ ಬೆದರಿಕೆ ಹಾಕಿದ್ದರು ಎಂದು ಸುಳ್ಳು ದೂರು ನೀಡಿದ್ದರು.

ಆ ಬಗ್ಗೆ ಸರಿಯಾಗಿ ವಿಚಾರಣೆ ಮಾಡದ ತಿಲಕ್‌ನಗರ ಪೊಲೀಸ್‌ ಠಾಣೆ ಐಒ ವಿಜಯಪಥ ಸಂಪಾದಕರ ಫೋನ್‌ ನಂಬರ್‌ ಮಾಹಿತಿಯನ್ನು ಏರ್‌ಟೆಲ್‌ ಕಚೇರಿಯಿಂದ ಪಡೆದು ಅದರಲ್ಲಿ ಅಂದು ಯಾರ ಜತೆ ಮಾತನಾಡಿದ್ದಾರೆ ಎಂಬುದನ್ನು ಪರಿಶೀಲಿಸಿದ್ದಾರೆ. ಆ ವೇಳೆ ಪ್ರಶಾಂತ್‌ ಮತ್ತು ಎಸ್‌.ಜೆ. ಮೇಟಿ ಅವರ ಜತೆ ಯಾವುದೇ ಸಂಭಾಷಣೆ ನಡೆಸಿರುವುದು ಕಂಡು ಬರದಿದ್ದರು ಡ್ಯೂಟಿ ಮಾಡುವುದಕ್ಕೆ ಅಡ್ಡಿ ಪಡಿಸಿದರು ಎಂಬ ದೂರಿನ ಆಧಾರದ ಮೇರೆಗೆ ಎಫ್‌ ಐಆರ್‌ ದಾಖಲಿಸಿಕೊಂಡು ಬಳಿಕ ಚಾರ್ಜ್‌ಶೀಟ್‌ಕೂಡ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇದರ ವಿರುದ್ಧ ಹೈ ಕೋರ್ಟ್‌ ಮೆಟ್ಟಿಲೇರಿದ ವಿಜಯಪಥ ಸಂಪಾದಕರ ಪರವಾಗಿ ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್.ಬಿ.ಶಿವರಾಜು ಅವರು ಉಚಿತವಾಗಿಯೇ ವಕಾಲತು ವಹಿಸಿ ವಾದ ಮಂಡಿಸಿದರು.

ಈ ವೇಳೆ ಪತ್ರಕರ್ತರ ವಿರುದ್ಧ ದಾಖಲಿಸಿದ್ದ ಪ್ರಕರಣವೊಂದಕ್ಕೆ ಸುಪ್ರೀಂಕೋರ್ಟ್‌  ನೀಡಿದ ಆದೇಶವನ್ನು ನ್ಯಾಯಪೀಠದ ಗಮನಕ್ಕೆ ತಂದು ಒಬ್ಬ ಪತ್ರಕರ್ತರ ವಿರುದ್ಧ ಈ ರೀತಿ ದೂರು ದಾಖಲಿಸುವುದು ಸರಿಯಲ್ಲ ಎಂದು ಬಲವಾಗಿ ವಾದ ಮಂಡನೆ ಮಾಡಿದರು.

ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಅವರು ಪ್ರಕರಣಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ.

ಇನ್ನು ಪ್ರಕರಣದಲ್ಲಿ ಯಾವುದೇ ಸತ್ಯಾಸತ್ಯತೆ ಮೇಲ್ನೋಟಕ್ಕೆ ಕಂಡು ಬರದ ಹಿನ್ನೆಲೆಯಲ್ಲಿ ಹಾಗೂ ದೂರು ದಾಖಲಿಸಿರುವುದು ಸುಳ್ಳು ಎಂಬುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ.

ಇನ್ನು ತಿಲಕನಗರ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸುವ ಮುನ್ನ ಎಸ್‌.ಜೆ.ಮೇಟಿ ಎಂಬ ನಿರ್ವಾಹಕ ಡ್ಯೂಟಿ ಮಾಡಿದ್ದಾನೆ ಎಂದು ತೋರಿಸಿದ್ದಾರೆ. ಆದರೆ, ನಿಜ ಹೇಳಬೇಕು ಎಂದರೆ ಆತ ಅಂದು ಚಾರ್ಜ್‌ ಶೀಟ್‌ ನಲ್ಲಿ ತೋರಿಸಿರುವುದನ್ನು ಗಮನಿಸಿದರೆ ದೂರು ದಾಖಲಿಸುವುದಕ್ಕೆ ಸೃಷ್ಟಿಸಿರುವ ಟ್ರಿಪ್‌ ಶೀಟ್‌ ನಂತೆ ಕಂಡು ಬಂದಿದೆ.

ಎಸ್‌.ಜೆ.ಮೇಟಿ ಅಂದು ಡ್ಯೂಟಿ ಮಾಡಿದ್ದರೆ ಡಿಪೋನಿಂದ ಎಷ್ಟು ಗಂಟೆಗೆ ಬಸ್‌ ಔಟ್‌ ಮಾಡಿದರು ಎಷ್ಟು ಗಂಟೆಗೆ ಇನ್‌ ಮಾಡಿದರು ಎಂಬುದನ್ನು ಸರಿಯಾಗಿ ತೋರಿಸಿಲ್ಲ. ಜತೆಗೆ ಅಂದು ಇವರು ಮಾಡಿರುವ ಡ್ಯೂಟಿ ರೂಟ್‌ ಮೇಲೆ ಕನಿಷ್ಠ ಎಂದರೂ 8-10 ಟ್ರಿಪ್‌ ಕಾರ್ಯಾಚರಣೆ ಮಾಡಬೇಕು. ಆದರೆ ಆತ ಮಾಡಿರುವುದು ಕೇವಲ 4 ಟ್ರಿಪ್‌ ಮಾತ್ರ ಅಂದರೆ ಮಧ್ಯಾಹ್ನ 2 ಗಂಟೆಗೆ ಡ್ಯೂಟಿಗೆ ಬಂದರೂ 8ಗಂಟೆವರೆಗೇ ಡ್ಯೂಟಿ ಎಂದರೂ ಆತ ರಾತ್ರಿ 10 ಗಂಟೆವರೆಗೆ ಡ್ಯೂಟಿ ಮಾಡಿದ ಬಳಿಕ ಡಿಪೋಗೆ ಬರಬೇಕಿತ್ತು. ಆದರೆ ಆತನ 9 ಗಂಟೆಗೆ ಡಿಪೋನಲ್ಲಿ ಇದ್ದನು ಎಂದು ಚಾರ್ಜ್‌ ಶೀಟ್‌ ನಲ್ಲಿ ತೋರಿಸಲಾಗಿದೆ.

ಇನ್ನು ವಿಜಯಪಥ ಸಂಪಾದಕರ ಫೋನ್‌ ನಂಬರ್‌ ಮಾತ್ರ ಚಾರ್ಜ್‌ ಶೀಟ್‌ ನಲ್ಲಿ ಹಾಕಿದ್ದು ದೂರುದಾರ ಘಟಕ ವ್ಯವಸ್ಥಾಪಕ ಅವರ ಜತೆ ಮಾತನಾಡಿರುವುದನ್ನಾಗಲಿ ಇಲ್ಲ ನಿರ್ವಾಹಕ ಎಸ್‌.ಜೆ. ಮೇಟಿಯ ಜತೆ ಸಂಭಾಷಣೆ ನಡೆಸಿರುವ ಬಗ್ಗೆ ಆತನ ಫೋನ್‌ ನಂಬರ್‌ ರನ್ನಾಗಲಿ ಚಾರ್ಜ್‌ ಶೀಟ್‌ ನಲ್ಲಿ ತೋರಿಸಿಲ್ಲ. ಆದರೂ ಚಾರ್ಜ್‌ ಶೀಟ್‌ ನಲ್ಲಿ ವಿಜಯಪಥ ಸಂಪಾದಕರ ಫೋನ್‌ ನಂಬರ್‌ಅನ್ನು ಪದೇ ಪದೆ ತೋರಿಸಿದ್ದಾರೆ.

ಈ ಎಲ್ಲವನ್ನು ಗಮನಿಸಿದರೆ ಇದು ಉದ್ದೇಶ ಪೂರ್ವಕವಾಗಿ ದಾಖಲಿಸಿರುವ ದೂರು ಎಂಬುವುದು ಗೊತ್ತಾಗಲಿದೆ. ಆದರೂ ತಿಲಕ್‌ನಗರ ಪೊಲೀಸರು ಎಸ್‌.ಜೆ.ಮೇಟಿಯ ಫೋನ್‌ ನಂಬರ್‌ ತೋರಿಸಿದೆ ಆರೋಪ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಈ ಪೊಲೀಸರು ಅರ್ಥ ಮಾಡಿಕೊಳ್ಳಬೇಕು.

ಒಬ್ಬರ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಮತ್ತು ಸಾಕ್ಷಿ, ಘಟನೆ ನಡೆದಿರುವುದು ನಿಜವೆ? ಎಲ್ಲಿ ಅವರು ತೊಂದರೆ ಕೊಟ್ಟರು, ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದ್ದು ನಿಜವೆ? ಎಂಬ ಬಗ್ಗೆ ತೀವ್ರ ತನಿಖೆ ಮಾಡಬೇಕಿತ್ತು, ಆದರೆ ಅದಾವುದನ್ನು ಮಾಡದೆ ತಿಲಕ್‌ ನಗರ ಪೊಲೀಸರು ಚಾರ್ಜ್‌ ಶೀಟ್‌ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಹಿಂದಿನ ಲೇಖನರೆಸಾರ್ಟ್ ​ನಲ್ಲಿ ಶಾಮನೂರು ಶಿವಶಂಕರಪ್ಪ ಭೇಟಿ: ಮಾಜಿ ಸಿಎಂ ಬೊಮ್ಮಾಯಿ ಸ್ಪಷ್ಟನೆ
ಮುಂದಿನ ಲೇಖನಮಣಿಪುರದಲ್ಲಿ ಮತ್ತೆ ಹಿಂಸಾಚಾರ: 9 ಮಂದಿ ಸಾವು, ಹಲವರಿಗೆ ಗಾಯ