ಮನೆ ರಾಜ್ಯ ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ಗೊತ್ತಾಗಬೇಕು – ಆರ್‌. ಅಶೋಕ್

ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ಗೊತ್ತಾಗಬೇಕು – ಆರ್‌. ಅಶೋಕ್

0

ಬೆಂಗಳೂರು : ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅನ್ನೋದು ತನಿಖೆ ಆಗಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಎಸ್‌ಐಟಿಯಿಂದ ಮಾಸ್ಕ್ ಮ್ಯಾನ್ ಬಂಧನದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಕೇಸ್ ಆದಾಗಿನಿಂದ ಷಡ್ಯಂತ್ರ ಅಂತ ಹೇಳಿದ್ದೆವು. ಸರ್ಕಾರ ಆತುರದ ನಿರ್ಧಾರ ಮಾಡಿತು. ದೂರು ಕೊಟ್ಟವನ ಪೂರ್ವಪರಿತೆ ನೋಡದೆ ಯೋಚನೆ ಮಾಡದೇ ಸಿಎಂ ಜೊತೆ ಇರುವ ಪ್ರಗತಿಪರರ ಮಾತು ಕೇಳಿ ಎಸ್‌ಐಟಿ ಮಾಡಿದರು.

ಎಸ್‌ಐಟಿ ತನಿಖೆಯಿಂದ ಬುರುಡೆ ಬಂತು ಅಷ್ಟೇ. ಸಿಎಂ ಕಾಮನ್ ಸೆನ್ಸ್ ಉಪಯೋಗ ಮಾಡಬೇಕಿತ್ತು. ಧರ್ಮಸ್ಥಳದ ಭಕ್ತರ ಭಾವನೆಗೆ ನೋವು ಆಗಿದೆ. ಇದನ್ನ ಸಿದ್ದರಾಮಯ್ಯ ವಾಪಸ್ ಕೊಡಲು ಆಗುತ್ತಾ? ಈ ಸರ್ಕಾರದ ತಪ್ಪು ಅಂತ ಆಯ್ತು. ಮಾಸ್ಕ್ ಮ್ಯಾನ್ ಬಗ್ಗೆ ಮೊದಲೇ ತನಿಖೆ ಮಾಡಿದ್ರೆ ಮುಗಿದು ಹೋಗ್ತಿತ್ತು ಎಂದು ಕಿಡಿಕಾರಿದರು.

ಅನನ್ಯ ಭಟ್‌ದು ಸುಳ್ಳು ಅಂತ ಗೊತ್ತಾಗಿದೆ. ಎಲ್ಲರೂ ದುಡ್ಡು ತಗೊಂಡು ಮಾಡಿದ್ದಾರೆ. ಮಾಸ್ಕ್ ಮ್ಯಾನ್ ಹಿಂದೆ ಇರೋನು ಸಮೀರ್. ಸಮೀರ್ ಇದರ ಸೂತ್ರಧಾರ. ಎಲ್ಲರನ್ನು ಜೊತೆಗಾರ ಮಾಡಿಕೊಳ್ಳುತ್ತಾನೆ. ಪ್ರಗತಿ ಪರರ ಟೀಂ ಸೆಟಪ್ ಮಾಡಿಕೊಳ್ತಾನೆ. ಡ್ರಾಮಾ ಮಾಡೋಕೆ ಮಾಸ್ಕ್ ಮ್ಯಾನ್, ಅನನ್ಯ ಭಟ್ ಹುಡುಕುತ್ತಾರೆ. ತನಿಖೆ ಹೇಗೆ ಮಾಡಬೇಕು ಅಂತ ಅದನ್ನು ಇವರೇ ನಿರ್ಧಾರ ಮಾಡ್ತಾರೆ. ಭದ್ರತೆ ಕೊಡಬೇಕು ಅಂತ ಹೇಳ್ತಾರೆ. ಸಿಎಂಗೂ ಇಷ್ಟು ಸೆಕ್ಯುರಿಟಿ ಇರಲಿಲ್ಲ, 25 ದಿನ ಮಾಸ್ಕ್ ಮ್ಯಾನ್‌ಗೆ ಇತ್ತು. ಸಿಎಂಗಿಂತ ಹೈ ಸೆಕ್ಯುರಿಟಿ ಕೊಟ್ರು, ಯಾಕೆ ಕೊಟ್ರು ಎಂದು ಪ್ರಶ್ನಿಸಿದರು.

ಮಂಜುನಾಥ್‌ನನ್ನ ಅವಹೇಳನ ಮಾಡಬೇಕು, ಇದು ಮತಾಂತರ ಷಡ್ಯಂತ್ರ. ಇಲ್ಲ ಅಂದರೆ ಸಾಬಿ ಸಮೀರ್ ಯಾಕೆ ಬರುತ್ತಾರೆ? ಧರ್ಮಸ್ಥಳದ ಬಗ್ಗೆ ಕೇಳೋಕೆ ಇವರು ಯಾರು? ಬೇಕಾದ ಮಸೀದಿ ಮೇಲೆ ದೂರು ಬಂದಿದೆ. ಯಾವುದಾದರೂ ಮಸೀದಿ ಅಗೆದ್ರಾ? ಹಿಂದೂಗಳನ್ನು ಟಾರ್ಗೆಟ್ ಮಾಡುವುದು ಸಿಎಂ, ಸಿಎಂ ಸಂಪುಟದ ಕೆಲಸ. ಡಿಕೆ ವೋಟ್ ಬ್ಯಾಂಕ್‌ಗೆ ಮಾತಾಡ್ತಿದ್ದಾರೆ ಅಷ್ಟೇ. ಇಷ್ಟೆಲ್ಲಾ ಕೇಸ್ ಆಗೋಕೆ ಸಿಎಂ ಕಾರಣ. ಪೊಲೀಸರ ಕೆಲಸ ಬಿಟ್ಟು ಬುರುಡೆ ಹುಡುಕೋಕೆ ಬಿಟ್ಟರು. ತನಿಖೆಗೆ ಕೊಟ್ಯಂತರ ರೂಪಾಯಿ ಖರ್ಚು ಆಗಿದೆ. ಯಾರು ಕೊಡ್ತಾರೆ? ಬೆಟ್ಟ ಅಗೆದು ಇಲಿಯೂ ಸಿಗಲಿಲ್ಲ.

ಕರ್ನಾಟಕದ ಇತಿಹಾಸದಲ್ಲಿ ಇಂತಹ ಪ್ರಹಸನ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಕ್ಷಮೆ ಕೇಳಬೇಕು. ಬಿಜೆಪಿ ಅವರು ಮೊದಲು ಮಾತಾಡಿಲ್ಲ ಅಂದರು. ನಾನೇ ಮಾತಾಡಿದ್ದೇ ಮೈಸೂರಿನಲ್ಲಿ. ತನಿಖೆ ಮಾಡಿ ಇದು ಷಡ್ಯಂತ್ರ ಅಂತ ಹೇಳಿದ್ದೆ. ಬಿಜೆಪಿ ಹೋರಾಟ ಮಾಡಿರಲಿಲ್ಲ ಅಂದರೆ ಬುರುಡೆ ತಂದು ಇದೇ ನಿಜ ಅಂತ ಮಾಡೋರು. ನಾವು ಹೋರಾಟ ಮಾಡಿದ್ದಕ್ಕೆ ಇದು ಇಲ್ಲಿಗೆ ಬಂದು ನಿಂತಿದೆ. ಧರ್ಮಸ್ಥಳಕ್ಕೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಈಗ ಸರ್ಕಾರಕ್ಕೆ ಮಂಗಳಾರತಿ ಆಯಿತು ಎಂದು ಟೀಕಿಸಿದರು.