ಮನೆ ರಾಜಕೀಯ ಅಂದಿನ ಸಿಎಂ ಬೊಮ್ಮಾಯಿ ಶಿರಹಟ್ಟಿ MLA ಬಿಜೆಪಿ ಟಿಕೆಟ್ ದುಡ್ಡಿಗೆ ಮಾರಿದ್ದಾರೆ: ರಾಮಣ್ಣ ಲಮಾಣಿ ಆರೋಪ

ಅಂದಿನ ಸಿಎಂ ಬೊಮ್ಮಾಯಿ ಶಿರಹಟ್ಟಿ MLA ಬಿಜೆಪಿ ಟಿಕೆಟ್ ದುಡ್ಡಿಗೆ ಮಾರಿದ್ದಾರೆ: ರಾಮಣ್ಣ ಲಮಾಣಿ ಆರೋಪ

0

ಗದಗ: ಶಿರಹಟ್ಟಿ MLA ಬಿಜೆಪಿ ಟಿಕೆಟ್ ದುಡ್ಡಿಗೆ ಮಾರಾಟ ಮಾಡಿದ್ದಾರೆ. ಹಣಕ್ಕಾಗಿ ಅಂದಿನ ಸಿಎಂ ಬೊಮ್ಮಾಯಿ ಬಿಜೆಪಿ ಟಿಕೆಟ್​​ ಮಾರಿದ್ದರು ಎಂದು ಬೊಮ್ಮಾಯಿ ವಿರುದ್ಧ ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ ಗಂಭೀರ ಆರೋಪ ಮಾಡಿದ್ದಾರೆ.

Join Our Whatsapp Group

ಗದಗ ಜಿಲ್ಲೆಯಲ್ಲಿ   ಮಾತನಾಡಿದ ಮಾಜಿ ಶಾಸಕ ರಾಮಣ್ಣ ಲಮಾಣಿ, ಶಿರಹಟ್ಟಿ ಕ್ಷೇತ್ರದ MLA ಟಿಕೆಟ್ ಬಿಜೆಪಿ ದುಡ್ಡಿಗಾಗಿ ಮಾರಾಟ ಮಾಡಿದೆ. ಆಗಿನ ಸಿಎಂ ಬಸವರಾಜ್ ಬೊಮ್ಮಾಯಿ ಅವ್ರೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ನಮ್ಮ ಕ್ಷೇತ್ರದ ಅಲ್ಲದವ್ರಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ. ಬಿಜೆಪಿಯಲ್ಲಿ ಶ್ರಮಪಟ್ಟು ಪಕ್ಷ ಕಟ್ಟಿದ್ದೆ. ಟಿಕೆಟ್ ತಪ್ಪಿದ ಬಳಿಕ ಕಾಂಗ್ರೆಸ್ ತತ್ವ ಸಿದ್ದಾಂತ ಒಪ್ಪಿ ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ. ಬಸವರಾಜ್ ಬೊಮ್ಮಾಯಿ ಅವ್ರಿಂದ ಶಿರಹಟ್ಟಿ ತಾಲೂಕಿಗೆ ಅನ್ಯಾಯವಾಗಿದೆ. ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಜಾಲವಾಡಗಿ ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ ಮಾಡಿದ್ರು. ಅನುದಾನ ನೀಡುವುದಾಗಿ ಹೇಳಿದ್ರು. ಆದ್ರೆ ಅನುದಾನ ನೀಡಿಲ್ಲ. ಮೊನ್ನೆ ಸಿಎಂ ಸಿದ್ದರಾಮಯ್ಯ 290 ಕೋಟಿ ಘೋಷಣೆ ಮಾಡಿದ್ದಾರೆ.

ಶೀಘ್ರದಲ್ಲೇ ಕೆರೆಗಳು ತುಂಬಿಸುತ್ತೇವೆ. ದಮ್ಮು, ತಾಕತ್ತು ಇದ್ರೆ ಬಸವರಾಜ್ ಬೊಮ್ಮಾಯಿ ಗೆಲ್ಲಲಿ. ಬೊಮ್ಮಾಯಿ ಅವರನ್ನ ಸೋಲಿಸುತ್ತೇವೋ ಇಲ್ವೋ ಗೊತ್ತಿಲ್ಲ. ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಆರಿಸಿ ತರ್ತೀನಿ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ವಿರುದ್ಧ ರಾಮಣ್ಣ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಹಿಂದಿನ ಲೇಖನತುಂಗಾ ನದಿಯಲ್ಲಿ ಈಜಲು ತೆರಳಿದ್ದ  ಮೂವರು ಬಾಲಕರು ಸಾವು
ಮುಂದಿನ ಲೇಖನಯಾರು ಏನೇ ಕುತಂತ್ರ ಮಾಡಿದರೂ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಸರ್ಕಾರ ಬರೋದು ಖಚಿತ: ಎಚ್. ಡಿ. ದೇವೇಗೌಡ ಭವಿಷ್ಯ