ಮನೆ ರಾಜಕೀಯ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಗುದ್ದಾಟ ನಡೆದಿದೆ: ತೇಜಸ್ವಿ ಸೂರ್ಯ

ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಗುದ್ದಾಟ ನಡೆದಿದೆ: ತೇಜಸ್ವಿ ಸೂರ್ಯ

0

ಬೀದರ್ : ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಗುದ್ದಾಟ ನಡೆದಿದೆ. ಇನ್ನೂ ಟಿಕೆಟ್ ವಂಚಿತರು ಬಂಡಾಯ ಆಗೋದು ಸಾಮಾನ್ಯ. ಇದು ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

Join Our Whatsapp Group

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಮಾತ್ರವಲ್ಲ ಮುಖ್ಯಮಂತ್ರಿ ಅಭ್ಯರ್ಥಿಗಳ ಮಧ್ಯವೂ ಬಂಡಾಯ ಇದೆ.  ಅವರವರೇ ಕಿತ್ತಾಡಿಕೊಂಡು ಈ ಚುನಾವಣೆಯಲ್ಲಿ ನಶಿಸಿ ಹೋಗುತ್ತಾರೆ ಎಂದು ಹೇಳಿದರು.

ಎಸ್ ಡಿಪಿಐ ಹಾಗೂ ಪಿಎಫ್’ಐ ಒಂದೇ ನಾಣ್ಯದ ಎರಡು ಮುಖಗಳು. ಎಷ್ಟೋ ಚುನಾವಣೆಯಲ್ಲಿ ಕಾಂಗ್ರೆಸ್ ಎಸ್ ಡಿಪಿಐ ಹಾಗೂ ಪಿಎಫ್’ಐ ಜೊತೆ ಕೈಜೋಡಿಸಿದೆ. ಕಾಂಗ್ರೆಸ್ ನ ಬಿ ಟೀಮನಂತೆ ಆ ಸಂಘಟನೆಗಳು ಕೆಲಸ ಮಾಡುತ್ತಿವೆ. ಬ್ಯಾನ್ ಆಗಿರುವ ಪಿಎಫ್’ ಐ ನ ಕಾರ್ಯಕರ್ತರು ಎಸ್ ಡಿಪಿಐ ಸೇರೋದು ಜಗಜ್ಜಾಹೀರಾಗಿದೆ. ಈ ಸಮಯದಲ್ಲೂ ಕಾಂಗ್ರೆಸ್ ಮಾತನಾಡುತ್ತಿಲ್ಲ ಅಂದರೆ ಆ ಪಕ್ಷದ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಏನೆಂದು ಮೊತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದರು.

ಹಿಂದಿನ ಲೇಖನಬೇಸಿಗೆಯಲ್ಲಿ ಸರಿಯಾಗಿ ನೀರು ಕುಡಿಯದಿದ್ರೆ ಈ ಸಮಸ್ಯೆಗಳೆಲ್ಲಾ ಕಾಣಿಸಿಕೊಳ್ಳುತ್ತೆ ಎಚ್ಚರ!
ಮುಂದಿನ ಲೇಖನನಟ ಕೋಮಲ್‌ ಅಭಿನಯದ ‘ಉಂಡೆನಾಮ’ ಸಿನಿಮಾದ ಟ್ರೈಲರ್‌ ಬಿಡುಗಡೆ