ಮನೆ ಅಪರಾಧ ಮನೆ ಹಿಂಬಾಗಿಲು ಮುರಿದು 5 ಲಕ್ಷ ರೂ.ದೋಚಿದ ಕಳ್ಳರು

ಮನೆ ಹಿಂಬಾಗಿಲು ಮುರಿದು 5 ಲಕ್ಷ ರೂ.ದೋಚಿದ ಕಳ್ಳರು

0

ಹಲಗೂರು:ಇಲ್ಲಿಗೆ ಸಮೀಪದ ಯತ್ತಂಬಾಡಿ ಗ್ರಾಮದಲ್ಲಿ ತಡರಾತ್ರಿ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಮನೆಯಲ್ಲಿದ್ದ ಚಿನ್ನಾಭಾರಣಗಳನ್ನ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.


ಯತ್ತಂಬಾಡಿ ಗ್ರಾಮದ ಪ್ರೇಮಾ ಎಂಬವರು ಮನೆಯವರೆಲ್ಲ ರಾತ್ರಿ ಊಟ ಮುಗಿಸಿ ಮಲಗಿದ್ದ ವೇಳೆ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳ ನುಗ್ಗಿರುವ ಕಳ್ಳರು ಬೀರುವಿನ ಬಾಗಿಲು ತೆಗೆದು ಸುಮಾರು ೫ ಲಕ್ಷ ರೂ.ಬೆಲೆ ಬಾಳುವ ಚಿನ್ನಾಭರಣಗಳನ್ನ ದೊಚಿ ಪರಾರಿಯಾಗಿದ್ದಾರೆ ಎಂದು ಮನೆಯ ಮಾಲೀಕರಾದ ಪ್ರೇಮ ತಿಳಿಸಿದರು.
ಸ್ಥಳಕ್ಕೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಪಿಎಸ್‌ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದರು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನ10 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಬಗೆಹರಿಯದ ಕೊಡಗು ಜಿಲ್ಲೆಯ ಸಮಸ್ಯೆ : ಎಎಪಿ
ಮುಂದಿನ ಲೇಖನಮುಖ್ಯಮಂತ್ರಿಗಳ ಜನಸ್ಪಂದನ – 02 ಕಾರ್ಯಕ್ರಮದಲ್ಲಿ ಒಟ್ಟು 12372 ಅರ್ಜಿಗಳ ಸ್ವೀಕಾರ