ಮನೆ ಅಪರಾಧ ತುಂಗಾ ನದಿಯಲ್ಲಿ ಈಜಲು ತೆರಳಿದ್ದ  ಮೂವರು ಬಾಲಕರು ಸಾವು

ತುಂಗಾ ನದಿಯಲ್ಲಿ ಈಜಲು ತೆರಳಿದ್ದ  ಮೂವರು ಬಾಲಕರು ಸಾವು

0

ಶಿವಮೊಗ್ಗ: ಈಜಲು ತೆರಳಿದ್ದ ಮೂವರು ಬಾಲಕರು ತುಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

Join Our Whatsapp Group

ತೀರ್ಥಹಳ್ಳಿಯ ರಾಮ ಮಂಟಪದ ಬಳಿ ನದಿಗೆ ಈಜಲು ತೀರ್ಥಹಳ್ಳಿ ಪಟ್ಟಣದ ನಿವಾಸಿಗಳಾದ ರಫನ್, ಇಯನ್ ಹಾಗೂ ಸಮ್ಮದ್ ತೆರಳಿದ್ದರು. ಈ ವೇಳೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೂವರು ಬಾಲಕರು ರಂಜಾನ್ ಉಪವಾಸ ಮುಗಿಸಿ ಸೋಮವಾರ ಸಂಜೆ ನದಿಗೆ ಈಜಲು ತೆರಳಿದ್ದರು. ಘಟನೆ ತಿಳಿಯುತ್ತಿದ್ದಂತಯೇ ತೀರ್ಥಹಳ್ಳಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸತತ ಒಂದು ಗಂಟೆ ಕಾಲ ಹುಡುಕಾಟ ನಡೆಸಿದ ನಂತರ ಮೃತದೇಹಗಳು ಪತ್ತೆಯಾಗಿವೆ.

ಮೃತ ಬಾಲಕರು ಎಸ್​ಎಸ್​​ಎಲ್​​ಸಿ ವಿದ್ಯಾರ್ಥಿಗಳಾಗಿದ್ದಾರೆ. ಮಕ್ಕಳ ಮೃತದೇಹಗಳು ಪತ್ತೆಯಾಗುತ್ತಿದ್ದಂತೆಯೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಅಕ್ರಮ ವಾಸವಾಗಿದ್ದ ವಿದೇಶಿ ಪ್ರಜೆಗಳ ಮನೆ ಮೇಲೆ ಸಿಸಿಬಿ ದಾಳಿ
ಮುಂದಿನ ಲೇಖನಅಂದಿನ ಸಿಎಂ ಬೊಮ್ಮಾಯಿ ಶಿರಹಟ್ಟಿ MLA ಬಿಜೆಪಿ ಟಿಕೆಟ್ ದುಡ್ಡಿಗೆ ಮಾರಿದ್ದಾರೆ: ರಾಮಣ್ಣ ಲಮಾಣಿ ಆರೋಪ