ಮನೆ ಸಾಹಿತ್ಯ ನಾಳೆ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕ

ನಾಳೆ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕ

0

ಮೈಸೂರು:  ದಸರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ದಸರಾ ಉಪಸಮಿತಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ಅ. 16ರಂದು ಸಂಜೆ 7 ಗಂಟೆಗೆ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕದ ಪ್ರದರ್ಶನವಿದೆ.

ನಗರದ ಕಲಾಮಂದಿರ ಪಕ್ಕದ‌ ಕಿರು‌ ರಂಗಮಂದಿರದಲ್ಲಿ ‌ನಾಟಕ‌ ಪ್ರದರ್ಶನಗೊಳ್ಳಲಿದೆ. ಲೇಖಕ ಗಣೇಶ ಅಮೀನಗಡ ರಚಿಸಿರುವ ಈ ನಾಟಕವನ್ನು,  ಹಿರಿಯ ರಂಗಕರ್ಮಿ ಮೈಮ್ ರಮೇಶ್ ಅವರ ಜಿಪಿಐಇಆರ್ ತಂಡ‌ ಪ್ರಸ್ತುತಪಡಿಸಲಿದೆ.

ಒಂದೂವರೆ ಗಂಟೆಯ ಈ ನಾಟಕವು, ಕುವೆಂಪು ಅವರ ಮಂತ್ರ ಮಾಂಗಲ್ಯ ಆಧರಿಸಿದೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರಬೇಕೆಂದು ತಂಡದ ಸಂಚಾಲಕ ಹರಿದತ್ತ ಪ್ರಕಟಣೆಯಲ್ಲಿ ಕೋರಿದ್ದಾರೆ.

ಹಿಂದಿನ ಲೇಖನಅ.18 ರಂದು ಮಕ್ಕಳ ದಸರಾ ಉದ್ಘಾಟನಾ ಕಾರ್ಯಕ್ರಮ
ಮುಂದಿನ ಲೇಖನಪ್ರೀತಿಸೋ ಎನ್ನ ಮನ್ನಿಸೋ ನನ್ನ