ಮನೆ ಅಪರಾಧ ನದಿಯಲ್ಲಿ ಈಜಲು ಹೋದ ಇಬ್ಬರು ಬಾಲಕಿಯರ ಸಾವು

ನದಿಯಲ್ಲಿ ಈಜಲು ಹೋದ ಇಬ್ಬರು ಬಾಲಕಿಯರ ಸಾವು

0

ಮಧುಗಿರಿ: ತಾಲೂಕಿನ ವೀರಾಪುರದಲ್ಲಿ ಜೀವನದಿ ಜಯಮಂಗಲಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆಸಿದೆ.

ಗ್ರಾಮದ ಬಳಿ ಹರಿಯುವ ಜಯಮಂಗಲಿ ನದಿಗೆ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಚೆಕ್ ಡ್ಯಾಂನಲ್ಲಿದ್ದ ನೀರಿನಲ್ಲಿ ಈಜಲು ಹೋಗಿದ್ದ ಐವರು ಪೈಕಿ ಮೂವರನ್ನು ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ರಕ್ಷಿಸಿದ್ದಾರೆ. ಆದರೆ ಉಳಿದ ಇಬ್ಬರು ಈಜು ಬರದೆ ನದಿಯಲ್ಲಿ ಮುಳುಗಿದ್ದಾರೆ.

ದುರ್ದೈವಿಗಳನ್ನು ಪ್ರಿಯಾಂಕಾ(8) ಮತ್ತು (9)ಬಿಂದು ಎಂದು ಗುರುತಿಸಿದ್ದು ಇಬ್ಬರೂ ಸಹೋದರಿಯರಾಗಿದ್ದಾರೆ.

ಕೆಂಪಾಪುರ ಗ್ರಾಮದ ಬಾಬು ಹಾಗೂ ಲಕ್ಷ್ಮೀನಾರಾಯಣ್ ಅವರ ಮಕ್ಕಳಾಗಿದ್ದು, ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದೆ. ಕೊಡಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಿಂದಿನ ಲೇಖನಕೋವಿಡ್: ಮುಂದಿನ 40 ದಿನ ಭಾರತಕ್ಕೆ ನಿರ್ಣಾಯಕ
ಮುಂದಿನ ಲೇಖನಶಾಲೆಗಳು ಎಲ್ಲಾ ಮಕ್ಕಳಿಗೂ ಸುರಕ್ಷಿತ ಸ್ಥಳವಾಗಬೇಕು: ಡಾ. ಕೆ ವಿ ರಾಜೇಂದ್ರ