ಬೆಂಗಳೂರು: ರಾಜ್ಯದ ಆರು ಮಂದಿ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದ 2022ನೇ ಸಾಲಿನ ಪದಕ ಲಭಿಸಿದೆ.
ಲೋಕಾಯುಕ್ತ ಎಸ್ಪಿ ಕೆ. ಲಕ್ಷ್ಮಿ ಗಣೇಶ್, ಹೆಸ್ಕಾಂ ಎಸ್ಪಿ ಶಂಕರ್ ಕೆ. ಮರಿಹಾಳ, ಸಿಂಧನೂರು ಉಪವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ, ಲೋಕಾಯುಕ್ತ ಡಿವೈಎಸ್ಪಿ ಎಂ.ಆರ್. ಗೌತಮ್, ಸಿಐಡಿ ಡಿವೈಎಸ್ಪಿ (ಕಲಬುರಗಿ) ಶಂಕರಗೌಡ ಪಾಟೀಲ ಹಾಗೂ ದಾವಣಗೆರೆ ಬಸವನಗರ ಠಾಣೆ ಇನ್ಸ್ಪೆಕ್ಟರ್ ಎಚ್. ಗುರು ಬಸವರಾಜ್ ಅವರು ಪದಕಕ್ಕೆ ಪಾತ್ರರಾಗಿದ್ದಾರೆ.
ಆಸ್ತಿ ಜಪ್ತಿ ಮಾಡಿಸಿದ್ದ ರಾಜ್ಯದ ಮೊದಲ ಪ್ರಕರಣ: ಗಾಂಜಾ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದ ಪೆಡ್ಲರ್ ಅಜಯ್ ಕುಮಾರ್ ಸಿಂಗ್ (54) ಎಂಬಾತನನ್ನು ಬಂಧಿಸಿದ್ದ ಲಕ್ಷ್ಮಿ ಗಣೇಶ್, ಆರೋಪಿ ಅಕ್ರಮವಾಗಿ ಸಂಪಾದಿಸಿದ್ದ ₹ 1.68 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಸಿದ್ದರು. ಎನ್ಡಿಪಿಎಸ್ ಕಾಯ್ದೆಯಡಿ ಆಸ್ತಿ ಜಪ್ತಿ ಮಾಡಿದ ರಾಜ್ಯದ ಮೊದಲ ಪ್ರಕರಣ ಇದಾಗಿತ್ತು.
ರಾಮನಗರ ಜಿಲ್ಲೆಯ ಹಾರೋಹಳ್ಳಿ ಠಾಣೆ ವ್ಯಾಪ್ತಿಯ ಭೀಮೇಗೌಡನ ದೊಡ್ಡಿಯಲ್ಲಿ ವಾಸವಿದ್ದ ಮಾರೇಗೌಡ (70), ಅವರ ಮಗಳು ಗೌರಮ್ಮ (50) ಮತ್ತು ಮೊಮ್ಮೊಗಳು ಸುಕನ್ಯಾ (15) ಅವರನ್ನು 2016ನೇ ಇಸವಿ ಜನವರಿ 5ರಂದು ಕೊಲೆ ಮಾಡಲಾಗಿತ್ತು.
ಅಂದು ರಾಮನಗರ ಡಿವೈಎಸ್ಪಿ ಆಗಿದ್ದ ಲಕ್ಷ್ಮಿ ಗಣೇಶ್ ಕೆ., ಆರೋಪಿ ಮರಳವಾಡಿ ಹೋಬಳಿಯ ಚಿಕ್ಕ ಬೆಜ್ಜಲಹಟ್ಟಿ ನಿವಾಸಿ ಬಸವರಾಜ ಬೋವಿ (41) ಎಂಬಾತನನ್ನು ಬಂಧಿಸಿದ್ದರು.
ಈತನಿಗೆ ಮರಣ ದಂಡನೆ ಆಗಿತ್ತು. ಮಂಗಳೂರು ಡಿಸಿಪಿ ಆಗಿದ್ದ ಲಕ್ಷ್ಮಿ ಗಣೇಶ್, 2020ರಲ್ಲಿ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿತ್ತು. ಬಜ್ಪೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಲಕ್ಷ್ಮಿ ಗಣೇಶ್, ಆರೋಪಿಯನ್ನು ಬಂಧಿಸಿದ್ದರು.
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
ಕಾಂಗ್ರೆಸ್ ಯುವ ಮುಖಂಡರಾದ ರಮೇಶ್ ಗೌಡರವರ ಹುಟ್ಟುಹಬ್ಬವನ್ನು ಶಾಸಕರ ಕಚೇರಿಯಲ್ಲಿ, ಆಚರಿಸಿದರು….
ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್ ವರ್ಗಾವಣೆ
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.