ಮನೆ ರಾಷ್ಟ್ರೀಯ ರಾಜ್ಯದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದ ಪದಕ

ರಾಜ್ಯದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದ ಪದಕ

0

ಬೆಂಗಳೂರು: ರಾಜ್ಯದ ಆರು ಮಂದಿ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದ 2022ನೇ ಸಾಲಿನ ಪದಕ ಲಭಿಸಿದೆ.

ಲೋಕಾಯುಕ್ತ ಎಸ್ಪಿ ಕೆ. ಲಕ್ಷ್ಮಿ ಗಣೇಶ್, ಹೆಸ್ಕಾಂ ಎಸ್ಪಿ ಶಂಕರ್ ಕೆ. ಮರಿಹಾಳ, ಸಿಂಧನೂರು ಉಪವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ, ಲೋಕಾಯುಕ್ತ ಡಿವೈಎಸ್ಪಿ ಎಂ.ಆರ್. ಗೌತಮ್, ಸಿಐಡಿ ಡಿವೈಎಸ್ಪಿ (ಕಲಬುರಗಿ) ಶಂಕರಗೌಡ ಪಾಟೀಲ ಹಾಗೂ ದಾವಣಗೆರೆ ಬಸವನಗರ ಠಾಣೆ ಇನ್‌ಸ್ಪೆಕ್ಟರ್ ಎಚ್. ಗುರು ಬಸವರಾಜ್ ಅವರು ಪದಕಕ್ಕೆ ಪಾತ್ರರಾಗಿದ್ದಾರೆ.

ಆಸ್ತಿ ಜಪ್ತಿ ಮಾಡಿಸಿದ್ದ ರಾಜ್ಯದ ಮೊದಲ ಪ್ರಕರಣ: ಗಾಂಜಾ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದ ಪೆಡ್ಲರ್ ಅಜಯ್‌ ಕುಮಾರ್ ಸಿಂಗ್ (54) ಎಂಬಾತನನ್ನು ಬಂಧಿಸಿದ್ದ ಲಕ್ಷ್ಮಿ ಗಣೇಶ್, ಆರೋಪಿ ಅಕ್ರಮವಾಗಿ ಸಂಪಾದಿಸಿದ್ದ ₹ 1.68 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಸಿದ್ದರು. ಎನ್‌ಡಿಪಿಎಸ್ ಕಾಯ್ದೆಯಡಿ ಆಸ್ತಿ ಜಪ್ತಿ ಮಾಡಿದ ರಾಜ್ಯದ ಮೊದಲ ಪ್ರಕರಣ ಇದಾಗಿತ್ತು.

ರಾಮನಗರ ಜಿಲ್ಲೆಯ ಹಾರೋಹಳ್ಳಿ ಠಾಣೆ ವ್ಯಾಪ್ತಿಯ ಭೀಮೇಗೌಡನ ದೊಡ್ಡಿಯಲ್ಲಿ ವಾಸವಿದ್ದ ಮಾರೇಗೌಡ (70), ಅವರ ಮಗಳು ಗೌರಮ್ಮ (50) ಮತ್ತು ಮೊಮ್ಮೊಗಳು ಸುಕನ್ಯಾ (15) ಅವರನ್ನು 2016ನೇ ಇಸವಿ ಜನವರಿ 5ರಂದು ಕೊಲೆ ಮಾಡಲಾಗಿತ್ತು.

ಅಂದು ರಾಮನಗರ ಡಿವೈಎಸ್ಪಿ ಆಗಿದ್ದ ಲಕ್ಷ್ಮಿ ಗಣೇಶ್ ಕೆ., ಆರೋಪಿ ಮರಳವಾಡಿ ಹೋಬಳಿಯ ಚಿಕ್ಕ ಬೆಜ್ಜಲಹಟ್ಟಿ ನಿವಾಸಿ ಬಸವರಾಜ ಬೋವಿ (41) ಎಂಬಾತನನ್ನು ಬಂಧಿಸಿದ್ದರು.

ಈತನಿಗೆ ಮರಣ ದಂಡನೆ ಆಗಿತ್ತು. ಮಂಗಳೂರು ಡಿಸಿಪಿ ಆಗಿದ್ದ ಲಕ್ಷ್ಮಿ ಗಣೇಶ್, 2020ರಲ್ಲಿ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿತ್ತು. ಬಜ್ಪೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಲಕ್ಷ್ಮಿ ಗಣೇಶ್, ಆರೋಪಿಯನ್ನು ಬಂಧಿಸಿದ್ದರು.

ಹಿಂದಿನ ಲೇಖನರಾಜ್ಯದ ಹಿತದೃಷ್ಟಿಯಿಂದ ಲೋಕಾಯುಕ್ತ ಬಳಸಿ: ಹೆಚ್.ವಿಶ್ವನಾಥ್
ಮುಂದಿನ ಲೇಖನಒಂದು ದಿನದ ಪ್ರವಾಸದಲ್ಲಿ ಕೂರ್ಗ್‌ನಲ್ಲಿ ಇಷ್ಟೆಲ್ಲಾ ತಾಣಗಳನ್ನು ನೋಡಬಹುದು