ಮನೆ ಸುದ್ದಿ ಜಾಲ ಶೇ.05 ರಷ್ಟು ಸಿಗುವ ಅನುದಾನವನ್ನು ವಿಕಲಚೇತನರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಿ:  ಡಾ. ಕೆ.ವಿ. ರಾಜೇಂದ್ರ

ಶೇ.05 ರಷ್ಟು ಸಿಗುವ ಅನುದಾನವನ್ನು ವಿಕಲಚೇತನರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಿ:  ಡಾ. ಕೆ.ವಿ. ರಾಜೇಂದ್ರ

0

ಮೈಸೂರು(Mysuru): ವಿಕಲಚೇತನರಿಗೆ ಶೇ. 05 ರಷ್ಟು ಸಿಗುವಂತಹ ಯಾವುದೇ ರೀತಿಯ ಅನುದಾನವನ್ನು ಕೂಡ ಅವರ ಕೆಲಸಗಳಿಗಾಗಿಯೇ ಬಳಕೆ ಮಾಡಬೇಕು ಹಾಗೂ ಎಲ್ಲಾ ವಿಕಲಚೇತನರು ಕೂಡ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರಿಗಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ದಸರಾ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
 ನಾನು ಪ್ರೀತಿಯಿಂದ ಇಷ್ಟಪಟ್ಟು ಭಾಗವಹಿಸುವಂತಹ ಕಾರ್ಯಕ್ರಮದಲ್ಲಿ ಈ ವಿಕಲಚೇತನರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಒಂದು, ಈ ಬಾರಿ ಚುನಾವಣಾ ಆಯೋಗದಲ್ಲಿ ವಿಕಲಚೇತನರಿಗೆ ಸಾಲಿನಲ್ಲಿ ನಿಲ್ಲುವ ಪ್ರಕ್ರಿಯೆ ಇರುವುದಿಲ್ಲ. ನೇರವಾಗಿ ಹೋಗಿ ಮತದಾನ ಮಾಡುವ ಪ್ರಕ್ರಿಯೆ ಇರುತ್ತದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಮಂಜುನಾಥ್ ಸ್ವಾಮಿ ಅವರು ಕೆಲವು ದಿನಗಳ ಹಿಂದೆ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳು ಭಾಗವಹಿಸಿ ನಮ್ಮಲ್ಲಿ ಯಾವುದೇ ರೀತಿಯ ಕೊರತೆ ಇಲ್ಲ ಅನ್ನುವುದನ್ನು ಆಟ ಆಡುವುದರ ಮೂಲಕ ತೋರಿಸಿ ಕೊಟ್ಟಿದ್ದರು ಎಂದು ತಿಳಿಸಿದರು.
 ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ ಗೌಡ ಅವರು ಮಾತನಾಡಿ ಯಾರು ಸಹ ಯಾರಿಗೂ ಕಡಿಮೆ ಇಲ್ಲ. ನಾವು ಸಹ ನಿಮಗೆ ಸರಿಸಮಾನರು ಎಂಬ ಕಾರ್ಯಕ್ರಮ ವಿಶ್ವದ ಎಲ್ಲೆಡೆ ನಡೆಯುತ್ತಿದೆ ಎಂದು ತಿಳಿಸಿದ ಅವರು ವಿಕಲ ಚೇತನ ಮಕ್ಕಳು ಯಾವುದಕ್ಕೂ ಕೂಡ ಕಡಿಮೆ ಇಲ್ಲ ಎಲ್ಲಾ ರೀತಿಯ ಪ್ರತಿಭೆ ನಿಮ್ಮಲ್ಲಿದೆ ನೀವು ಸಾಧಿಸುತ್ತೀರಾ ಎಂದು ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಆರ್.ಮಾಲಿನಿ, ಸುಬೇಧರ್ ಭಗತ್‌ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. .

ಹಿಂದಿನ ಲೇಖನಅಂಗನವಾಡಿ, ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ: ಎನ್.ಜಯರಾಮ್
ಮುಂದಿನ ಲೇಖನಚರ್ಮಗಂಟು ರೋಗ: ಮೈಸೂರು ಜಿಲ್ಲೆಯಲ್ಲಿ 86 ರಾಸುಗಳು ಸಾವು