ವಿಶ್ವ ದಾಖಲೆ ನಿರ್ಮಿಸಿದ ಭಾರತೀಯ ಬಾಲಕಿ…
ವಿಮಾನದಲ್ಲಿ ನಮಾಜ್
ಬಿಡುಗಡೆಯಾಗಿದೆ, ಜಗತ್ತಿನ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ
ನಟಿ ಹರ್ಷಿಕ ಪೂರ್ಣಚ್ಚ ಹಾಗೂ ನಟ ಭುವನ್ ಮೇಲೆ ಹಲ್ಲೆ.
ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾಗೆ ಎದುರಾಗಿದೆ ಸಂಕಷ್ಟ
ಮತದಾನದ ನಂತರ ಸಾವನಪ್ಪಿದ ವೃದ್ಧ….
ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ…
ಜೈ ಶ್ರೀ ರಾಮ್ ಎಂದು ಕೂಗಿದ್ದಕ್ಕೆ, ಮುಸ್ಲಿಂ ಯುವಕರಿಂದ ಹಲ್ಲೆ
ಖ್ಯಾತ ಯೂಟ್ಯೂಬರ್ ಅಭ್ರಾದೀಪ್ ಸಹ ಇನ್ನಿಲ್ಲ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಮೈಸೂರು(Mysuru): ಜಿಲ್ಲೆಯಲ್ಲೂ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, 86 ರಾಸುಗಳು ಮೃತಪಟ್ಟಿದ್ದು, ಸರಗೂರು ತಾಲ್ಲೂಕು ಒಂದರಲ್ಲೇ 39 ರಾಸುಗಳು ಸಾವಿಗೀಡಾಗಿವೆ ಎಂದು ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಕೆ.ಷಡಕ್ಷರಮೂರ್ತಿ ತಿಳಿಸಿದರು.
ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಂದೇಗಾಲ ಹೋಬಳಿಯಲ್ಲಿ ಕೆಲವರು ಗುಜರಾತ್ನಿಂದ ‘ಗೀರ್’ ತಳಿಯ ಹಸುಗಳನ್ನು ತಂದಿದ್ದರು. ರೋಗದಿಂದ ಅವು ಸತ್ತು ಹೋದ ನಂತರ ಇತರ ಕಡೆಗೂ ಹರಡಿದೆ ಎಂದು ಹೇಳಿದರು.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದಿದ್ದರಿಂದ ಮತ್ತು ಲಸಿಕೆ ಲಭ್ಯವಿರಲಿಲ್ಲವಾದ್ದರಿಂದ ಆರಂಭದಲ್ಲಿ ರೋಗ ನಿಯಂತ್ರಣ ಸಾಧ್ಯವಾಗಿರಲಿಲ್ಲ. ಈಗ ಲಸಿಕೆ ನೀಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ. 4 ತಿಂಗಳು ಮೇಲ್ಪಟ್ಟ ರಾಸುಗಳಿಗೆ ಲಸಿಕೆ ಕೊಡಲಾಗಿದೆ. ಅದಕ್ಕಿಂತ ಚಿಕ್ಕ ವಯಸ್ಸಿನವಕ್ಕೆ ಲಸಿಕೆ ಕೊಡಲಾಗುತ್ತಿರಲಿಲ್ಲ. ಅವುಗಳಿಗೂ ಇತ್ತೀಚೆಗೆ ನೀಡಲಾರಂಭಿಸಿದ್ದೇವೆ ಎಂದರು.
ಒಟ್ಟು 5 ಲಕ್ಷ ರಾಸುಗಳಲ್ಲಿ ಈವರೆಗೆ 2.87 ಲಕ್ಷಕ್ಕೆ ಲಸಿಕೆ ಹಾಕಲಾಗಿದೆ. ಜಿಲ್ಲೆಯ ಗಡಿ ಪ್ರದೇಶದಲ್ಲಿನ ರಾಸುಗಳಿಗೆ ಆದ್ಯತೆ ಕೊಡಲಾಗಿದೆ. ಮತ್ತೆರಡು ಲಕ್ಷ ಡೋಸ್ ಲಸಿಕೆ ಬಂದಿದ್ದು, ಅದನ್ನು ಕೊಡಲಾಗುತ್ತಿದೆ. ಉಳಿದವುಗಳಿಗೆ ಇನ್ನೊಂದು ವಾರದೊಳಗೆ ನೀಡಲಾಗುವುದು. ಜಿಲ್ಲೆಯಲ್ಲಿ 390 ಮಂದಿ ಲಸಿಕೆದಾರರಿದ್ದಾರೆ ಎಂದು ಮಾಹಿತಿ ನೀಡಿದರು.
2,209 ರಾಸುಗಳಿಗೆ ರೋಗ ಬಂದಿತ್ತು. ಅವುಗಳಲ್ಲಿ 830ಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. 60ರಿಂದ 70 ರಾಸುಗಳು ಗಂಭೀರ ಸ್ಥಿತಿಯಲ್ಲಿವೆ ಎಂದು ತಿಳಿಸಿದರು.
ರಾಸುಗಳು ಸಾವಿಗೀಡಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಲಸಿಕೆ ಕಾರ್ಯಕ್ರಮವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ರಾಸುಗಳು ರೋಗದಿಂದ ಸಾವಿಗೀಡಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಬೇಕಾದ ಸಹಕಾರವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದಲೂ ನೀಡಬೇಕು. ರಾಸುಗಳು ಮೃತಪಟ್ಟರೆ ಹೈನುಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಅಧಿಕಾರಿಗಳಿಗೆ ಸೂಚಿಸಿದರು.