ಮನೆ ಪ್ರವಾಸ ವಾರಾಂತ್ಯದಲ್ಲಿ ಕರ್ನಾಟಕದ ಈ ಕೋಟೆಗಳಿಗೆ ಭೇಟಿ ನೀಡಿ

ವಾರಾಂತ್ಯದಲ್ಲಿ ಕರ್ನಾಟಕದ ಈ ಕೋಟೆಗಳಿಗೆ ಭೇಟಿ ನೀಡಿ

0

ವಾರಾಂತ್ಯವನ್ನು ಸುಂದರವಾಗಿಸಲು ಪ್ರವಾಸ ಕೈಗೊಳ್ಳುವುದು ಉತ್ತಮ. ಅದರಲ್ಲೂ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರವಾಸ ಮಾಡುವುದೆಂದರೆ ಸ್ವರ್ಗಕ್ಕೆ ಸಮಾನ.

ಗಿರಿಧಾಮ, ಜಲಪಾತ, ಉದ್ಯಾನವನ, ಪಾರ್ಕ್ಗಳನ್ನು ಹೊರತು ಪಡಿಸಿ ಕರ್ನಾಟಕದ ಅದ್ಭುತವಾದ ಕೋಟೆಗಳನ್ನು ನೀವು ಅನ್ವೇಷಣೆ ಮಾಡಬಹುದು. ಮುಖ್ಯವಾಗಿ ಕೋಟೆಯ ಪ್ರವಾಸಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡುವುದರಿಂದ ಮತ್ತಷ್ಟು ಖುಷಿ ಪಡೆಯಬಹುದು.

ಬೆಂಗಳೂರು ಕೋಟೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೇ ಅದ್ಭುತವಾದ ಬೆಂಗಳೂರು ಕೋಟೆ ಇದೆ.

ಇದನ್ನು ಟಿಪ್ಪು ಸುಲ್ತಾನ ಕೋಟೆ ಎಂದು ಕೂಡ ಕರೆಯುತ್ತಾರೆ.

ಮೈಸೂರಿನ ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಸುಂದರವಾದ ವಾಸ್ತುಶಿಲ್ಪ ಶೈಲಿಯನ್ನು ಒಳಗೊಂಡಿದೆ.

ಬೆಂಗಳೂರಿನ ಮಂದಿಗೆ ಮಾತ್ರ ಈ ಕೋಟೆಯು ವಾರಾಂತ್ಯ ಪ್ರವಾಸಗಳಲ್ಲಿ ಒಂದಾಗಿದೆ.

ಭಾರತದ ಅತ್ಯಂತ ಜನಪ್ರಿಯವಾದ ಸ್ಮಾರಕಗಳಲ್ಲಿ ಬೆಂಗಳೂರು ಕೋಟೆ ಕೂಡ ಸೇರಿದೆ.

ಕೋಟೆಯ ಒಂದು ವಿಶಿಷ್ಟವಾದ ಲಕ್ಷಣವೆಂದರೆ ಮೂರು ಬೃಹತ್ ಕಬ್ಬಿಣದ ಎತ್ತರದ ಗೇಟ್ಗಳು.

ಕಮಲ, ನವಿಲುಗಳು, ಆನೆಗಳು, ಪಕ್ಷಿಗಳ ಸುಂದರ ಕೆತ್ತನೆಗಳನ್ನು ನೀವು ನೋಡಬಹುದು.

ದೇವನಹಳ್ಳಿ ಕೋಟೆ

ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ದೇವನಹಳ್ಳಿ ಕೋಟೆ ಸೂಕ್ತವಾದ ತಾಣವಾಗಿದೆ.

ಇದೇ ಕೋಟೆಯಲ್ಲಿಯೇ ಟಿಪ್ಪು ಸುಲ್ತಾನ್ ಹುಟ್ಟಿದ್ದು ಎಂದು ಇತಿಹಾಸ ತಿಳಿಸುತ್ತದೆ.

ಇದು ಅತ್ಯಂತ ಸುಂದರವಾದ ವಾಸ್ತುಶಿಲ್ಪ ಹೊಂದಿರುವ ಕೋಟೆಯಾಗಿದ್ದು, ಸುಮಾರು 20 ಎಕರೆ ಪ್ರದೇಶದಲ್ಲಿ ನೆಲೆಸಿದೆ.

ಇದು ಭಾರತದ ಅತಿದೊಡ್ಡ ಕೋಟೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.

ಕೋಟೆಯ ಒಳಭಾಗದಲ್ಲಿ ದೇವಾಲಯಗಳು, ಯುದ್ಧಗಳ ಫಲಕಗಳನ್ನು ನೋಡಬಹುದು.

ಈ ಕೋಟೆಯನ್ನು ಅನ್ವೇಷಿಸಲು ಕರ್ನಾಟಕದ ಪ್ರವಾಸಿಗರು ತಮ್ಮ ರಜಾ ದಿನಗಳಲ್ಲಿ ಭೇಟಿ ನೀಡುತ್ತಿರುತ್ತಾರೆ.

ಸ್ಕಂದಗಿರಿ ಬೆಟ್ಟ

ಸ್ಕಂದಗಿರಿ ಬೆಟ್ಟವು ಅತ್ಯಂತ ಸುಂದರವಾದ ಕರ್ನಾಟಕದ ಬೆಟ್ಟಗಳಲ್ಲಿ ಒಂದಾಗಿದೆ.

ಕಾಳಾವರ ದುರ್ಗ ಎಂದು ಕೂಡ ಈ ಬೆಟ್ಟವನ್ನು ಕರೆಯುತ್ತಾರೆ.

ಬೆಂಗಳೂರಿನಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಈ ಕೋಟೆಯನ್ನು ಸಾಹಸಿಗಳು ಇಷ್ಟಪಡಬಹುದು.

ಏಕೆಂದರೆ ಕೋಟೆಗೆ ತಲುಪಲು ನೀವು ಟ್ರೆಕ್ಕಿಂಗ್ ಮಾಡಬೇಕಾಗಿರುತ್ತದೆ.

ಸಾಹಸ ಚಟುವಟಿಕೆಗಳನ್ನು ಆನಂದಿಸುತ್ತಾ ಐತಿಹಾಸಿಕ ಕೋಟೆಗೆ ತಲುಪಬಹುದು.

ಸೂರ್ಯಾಸ್ತ ಮತ್ತು ಸೂರ್ಯೋದಯದ ಅದ್ಭುತವಾದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಟಿಪ್ಪು ಸುಲ್ತಾನ್ ನಿರ್ಮಿಸಿದ ಕೋಟೆಯ ಅವಶೇಷವನ್ನು ನೀವು ಇಲ್ಲಿ ಕಾಣಬಹುದು.

ಅಂದರೆ ಪ್ರಕೃತಿಯ ಸುಂದರ ನೋಟ ಮತ್ತು ಐತಿಹಾಸಿಕ ಅವಶೇಷಗಳ ಸಮ್ಮಿಶ್ರಣವನ್ನು ಸವಿಯಬಹುದು.

ಚಿತ್ರದುರ್ಗ ಕೋಟೆ

ಕರ್ನಾಟಕದ ಕೋಟೆಗಳು ಎಂದಾಕ್ಷಣ ತಟ್ಟನೆ ನೆನಪಾಗುವುದು ಚಿತ್ರದುರ್ಗದ ಕೋಟೆ.

ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಈ ಕೋಟೆಯನ್ನು ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಚಿತ್ತಾಲ್ ದುರ್ಗ್ ಎಂದೇ ಕರೆಯುತ್ತಿದ್ದರು.

ಕಲ್ಲಿನ ಕೋಟೆಯು ಭವ್ಯವಾದ ಇತಿಹಾಸವನ್ನು ಹೊಂದಿದೆ.

ಈ ಭದ್ರವಾದ ಕೋಟೆಯನ್ನು ಗ್ರಾನೇಟ್ ಅಥವಾ ಖನಿಜ ಕಲ್ಲಿನ ಸಹಾಯದಿಂದ ನಿರ್ಮಿಸಿದ್ದಾರೆ.

ಇಲ್ಲಿ ನೀವು ಬೃಹದಾಕಾರದ ಶಿಲೆಗಳು, ಕಲ್ಲಿನ ಗೋಡೆಗಳನ್ನು ಕಾಣಬಹುದು.

ನಿಮ್ಮ ವಾರಾಂತ್ಯವನ್ನು ಉಕ್ಕಿನ ಕೋಟೆ, ಏಳು ಸುತ್ತಿನ ಕೋಟೆ ಎಂದು ಕರೆಯಲ್ಪಡುವ ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿ.

ಬಳ್ಳಾರಿ ಕೋಟೆ

ಬಳ್ಳಾರಿ ಕೋಟೆಯು ಸುಂದರವಾದ ಬೆಟ್ಟದ ಮೇಲೆ ನೆಲೆಸಿದೆ.

ಇದನ್ನು ಬಳ್ಳಾರಿ ಗುಡ್ಡ ಅಥವಾ ಫೋರ್ಟ್ ಹಿಲ್ ಎಂದೂ ಕೂಡ ಕರೆಯುತ್ತಾರೆ.

ಇಲ್ಲಿ ಮೇಲು ಕೋಟೆ ಮತ್ತು ಕೆಳ ಕೋಟೆಗಳಿರುವುದನ್ನು ನೀವು ಕಾಣಬಹುದು.

ಮೇಲಿರುವ ಕೋಟೆಯನ್ನು ವಿಜಯನಗರ ಸಂಸ್ಥಾನದ ಸಾಮಂತ ರಾಜನಾಗಿದ್ದ ಹನುಮಂತ ನಾಯಕ ಎಂಬುವವರು ನಿರ್ಮಿಸಿದರೆ, ಕೆಳ ಕೋಟೆಯನ್ನು ಹೈದರ ಅಲಿಯು 18 ನೇ ಶತಮಾನದಲ್ಲಿ ನಿರ್ಮಿಸಿದನು ಎನ್ನಲಾಗಿದೆ.

ಕೆಳ ಕೋಟೆಯ ವಿಶೇಷತೆ ಏನೆಂದರೆ, ಫ್ರೆಂಚ್ ಎಂಜಿನಿಯರ್’ನಿಂದ ನಿರ್ಮಿಸಲ್ಪಟ್ಟಿದೆ.

ಹಿಂದಿನ ಲೇಖನಬೆಂಗಳೂರಿನ ಪ್ರವಾಹ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸಿ: ಸುರ್ಜೇವಾಲ ಆಗ್ರಹ
ಮುಂದಿನ ಲೇಖನಕನಿಷ್ಠ ವೇತನ ನಿಯಮ ಪಾಲಿಸಿ: ಕಾರ್ಮಿಕ ಇಲಾಖೆ ಸುತ್ತೋಲೆ