ಭೂಮಿ ಮೇಲೆ ಸಿಗುವಂತಹ, ಹಲವಾರು ಬಗೆಯ ಹಸಿರೆಲೆ ಸೊಪ್ಪುಗಳು-ತರಕಾರಿಗಳನ್ನು, ನಮ್ಮ ದೈನಂದಿನ ಆಹಾರಕ್ರಮದಲ್ಲಿ ಬಳಸಿ ಕೊಂಡರೆ ಅದರಿಂದ ಆರೋಗ್ಯಕ್ಕೆ ಲಾಭವು ಅಪಾರ. ಆರೋಗ್ಯ ತಜ್ಞರೇ ಹೇಳುವ ಪ್ರಕಾರ, ಇಂತಹ ಹಸಿರೆಲೆ ತರಕಾರಿಗಳೆಲ್ಲಾ ನೈಸರ್ಗಿಕವಾಗಿದ್ದು, ಇದರಲ್ಲಿ ಹಲವಾರು ಬಗೆಯ ಪೋಷಕಾಂಶಗಳು, ವಿಮಿನ್ಸ್ ಗಳು, ಖನಿಜಾಂಗಳು, ಸಿಗುವುದರಿಂದ, ದೇಹದ ಆರೋಗ್ಯವನ್ನು ವೃದ್ಧಿಸುವಲ್ಲಿ ಇವುಗಳ ಪಾತ್ರ ಮರೆಯುವ ಹಾಗಿಲ್ಲ. ಇಂತಹ ಹಸಿರೆಲೆ ತರಕಾರಿಯಲ್ಲಿ ಹರಿವೆ ಸೊಪ್ಪು ಕೂಡ ಒಂದು…
ಸಾಮಾನ್ಯವಾಗಿ, ಬೇರೆಯೆಲ್ಲಾ ಸೊಪ್ಪಿನ ಹಾಗೆ ಈ ಹರಿವೆ ಸೊಪ್ಪು ಮಾರ್ಕೆಟ್ ನಲ್ಲಿ ಕಾಣಲು ಸಿಗುವುದು ತುಂಬಾನೇ ಅಪರೂಪ, ಆದರೆ ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಈ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು…
ಪೋಷಕಾಂಶಗಳ ಆಗರ
• ಯಾವುದೇ ಬಗೆಯ ಹಸಿರು ಎಲೆ ತರಿಕಾರಿಗಳು ಕೂಡ ಅಷ್ಟೇ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಕೂಡ ಇವುಗಳಲ್ಲಿ ಸಿಗುತ್ತದೆ ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಅದು ಹರಿವೆ ಸೊಪ್ಪು.
• ಹೌದು ಈ ಹರಿವೆ ಸೊಪ್ಪಿನಲ್ಲಿಯೂ ಕೂಡ ಅಷ್ಟೇ, ಬಸಳೆ, ಪಾಲಕ್ ಸೊಪ್ಪಿನಂತೆ, ಈ ಸೊಪ್ಪಿನಲ್ಲಿ ಯೂ ಕೂಡ ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ಗಳು ಲಭ್ಯವಿದ್ದು, ದೀರ್ಘಕಾಲದ ಉರಿಯೂತ ಸಮಸ್ಯೆಯನ್ನು ದೂರ ಮಾಡುವುದು ಮಾತ್ರವಲ್ಲದೆ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳನ್ನು ಕೂಡ ನೀಡುವುದು.
ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಕಂಡು ಬರುತ್ತದೆ
• ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಇರುವ ಯಾವುದೇ ಬಗೆಯ ಆಹಾರ ಪದಾರ್ಥಗಳು ಆಗಿರಲಿ ಅಥವಾ ಹಸಿರೆಲೆ ತರಕಾರಿಗಳು ಆಗಿರಲಿ, ಆರೋಗ್ಯಕ್ಕೆ ಒಳ್ಳೆಯದು ಅದರಲ್ಲೂ ತೂಕ ಇಳಿಸಲು ಬಯಸುವವರಿಗೆ, ಇಂತಹ ಆಹಾರಗಳು ಬಹಳ ಒಳ್ಳೆಯದು. ಇನ್ನು ಹರಿವೆ ಸೊಪ್ಪಿನ ಬಗ್ಗೆ ಹೇಳುವುದಾದರೆ, ನೂರು ಗ್ರಾಂ ಹರಿವೆ ಸೊಪ್ಪಿನಲ್ಲಿ, ಕೇವಲ 23 ಶೇಕಡದಷ್ಟು ಕ್ಯಾಲೋರಿ ಅಂಶಗಳು ಮಾತ್ರ ಸಿಗುತ್ತದೆಯಂತೆ!
• ಇದರ ಜೊತೆಗೆ ಈ ಸೊಪ್ಪಿನಲ್ಲಿ ಕಡಿಮೆ ಪ್ರಮಾಣದಲ್ಲಿ ಕೊಬ್ಬಿನಾಂಶ ಹಾಗೂ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ನಿವಾರಿಸುವ ಎಲ್ಲಾ ಗುಣಲಕ್ಷಣಗಳು ಕೂಡ ಈ ಸೊಪ್ಪಿನಲ್ಲಿ ಸಿಗುವುದರಿಂದ, ತೂಕ ಇಳಿಸಲು ಬಯಸುವವರಿಗೆ, ಈ ಸೊಪ್ಪನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು.
ನಾರಿನಾಂಶ ಅಧಿಕ
• ಮನುಷ್ಯನ ಆರೋಗ್ಯಕ್ಕೆ ನಾರಿನಾಂಶ ಹೆಚ್ಚಿರುವ ಆಹಾರ ಪದಾರ್ಥಗಳು ಬಹಳ ಒಳ್ಳೆಯದು. ಇದರ ಮುಖ್ಯ ಉದ್ದೇಶ ಏನೆಂದ್ರೆ, ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಲು ಇಂತಹ ಆಹಾರಗಳು, ತುಂಬಾನೇ ಅನುಕೂಲ ಮಾಡಿಕೊಡುತ್ತದೆ. ಇದರಿಂದಾಗಿ ಅಜೀರ್ಣ, ಮಲಬದ್ಧತೆ ಸಮಸ್ಯೆಗಳು ದೂರವಾಗುತ್ತದೆ.
• ಇನ್ನು ಹರಿವೆ ಸೊಪ್ಪಿನಲ್ಲಿ ಕೂಡ ಕರಗುವ ಹಾಗೂ ಕರಗದ ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿ ಕಂಡು ಬರುತ್ತದೆ. ಹೀಗಾಗಿ ಇಂತಹ ತರಕಾರಿಯನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ನಡೆಯುವುದು ಮಾತ್ರವಲ್ಲದೆ, ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಕಡಿಮೆಯಾಗಿ ಹೃದಯದ ಕಾಯಿಲೆ ನಿವಾರಣೆ ಮಾಡಲು ನೆರವಾ ಗುವುದು.
ರಕ್ತಹೀನತೆಗೆ
• ದೇಹದ ರಕ್ತದಲ್ಲಿ ಕೆಂಪು ರಕ್ತ ಕಣಗಳಿರುವ ಅಂಶಗಳು ಸರಿಯಾಗಿ ಉತ್ಪತ್ತಿ ಆಗದೆ ಇದ್ದರೆ, ಹಾಗೂ ಕಬ್ಬಿಣಾಂಶದ ಕೊರತೆ ಕಂಡು ಬಂದ್ರೆ, ರಕ್ತಹೀನತೆಯ ಎಲ್ಲಾ ಲಕ್ಷಣಗಳು ಮನುಷ್ಯನಲ್ಲಿ ಕಂಡು ಬರಲು ಶುರುವಾಗುತ್ತದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಅಂಶವನ್ನು ಒಳಗೊಂಡ ಆಹಾರ ಪದಾರ್ಥ ಗಳನ್ನು ಸೇವನೆ ಮಾಡಬೇಕು. ವೈದ್ಯರೂ ಕೂಡ ಇದನ್ನೇ ಹೇಳುತ್ತಾರೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಹರಿವೆ ಸೊಪ್ಪು!
• ಹೌದು ಈ ಸೊಪ್ಪಿನಲ್ಲಿ ಇರುವಂತಹ ಕಬ್ಬಿನಾಂಶವು, ಮನುಷ್ಯನ ಕೆಂಪು ರಕ್ತಕಣಗಳನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ರಕ್ತಹೀನತೆ ಸಮಸ್ಯೆಯನ್ನು ಕೂಡ ದೂರಮಾಡುವುದು. ಹೀಗಾಗಿ ರಕ್ತಹೀನತೆ ಸಮಸ್ಯೆ ಇದ್ದವರು, ಹರಿವೆ ಸೊಪ್ಪಿನ ಖಾದ್ಯಕ್ಕೆ, ಅರ್ಧ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ, ಸೇವನೆ ಮಾಡುತ್ತಾ ಬಂದ್ರೆ, ರಕ್ತಹೀನತೆ ಸಮಸ್ಯೆ ಬಹಳ ಬೇಗನೇ ಕಡಿಮೆಯಾಗುತ್ತದೆ.
ವಿಟಮಿನ್ ಕೆ
• ಬೇರೆಲ್ಲಾ ಬಗೆಯ ಹಸಿರೆಲೆ ತರಕಾರಿಗಳಿಗೆ ಹೋಲಿಸಿದರೆ, ಈ ಸೊಪ್ಪಿನಲ್ಲಿ ವಿಟಮಿನ್ ಕೆ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೀಗಾಗಿ ವಿಟಮಿನ್ ಕೆ ಅಂಶ ಇರುವ ಇಂತಹ ಸೊಪ್ಪನ್ನು ಸೇವನೆ ಮಾಡುವುದರಿಂದಾಗಿ, ಕೀಲು ಮತ್ತು ಮೂಳೆಗಳ ನೋವಿನ ಸಮಸ್ಯೆಯಿಂದ ದೂರ ಇರಬಹುದು.
• ಇದರ ಜೊತೆಗೆ ಮುಟ್ಟಿನ ಸಮಯದಲ್ಲಿ ಅಧಿಕ ರಕ್ತ ಸ್ರಾವದ ಸಮಸ್ಯೆ ಯನ್ನು ಅನುಭವಿಸುವರು, ಇಲ್ಲಾಂದ್ರೆ ಆಗಾಗ ಮೂಗಿನಲ್ಲಿ ರಕ್ತಸ್ರಾವ ಸಮಸ್ಯೆಯನ್ನು ಎದುರಿಸುವವರು, ಹರಿವೆ ಸೊಪ್ಪನ್ನು ತಮ್ಮ ಆಹಾರಪದ್ಧತಿಯಲ್ಲಿ ಸೇರಿಸಿಕೊಂಡರೆ ಪರಿಹಾರ ಕಾಣಬಹುದು. ಇದಕ್ಕೆ ಮುಖ್ಯ ಕಾರಣ ಈ ಸೊಪ್ಪಿನಲ್ಲಿ ಕಂಡು ಬರುವ ಅಧಿಕ ಪ್ರಮಾಣದಲ್ಲಿ ವಿಟಮಿನ್ ಕೆ ಅಂಶ ಎಂದು ಹೇಳಬಹುದು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.