ಮನೆ ಅಪರಾಧ ಕೆಎಸ್’ಆರ್’ಟಿಸಿ ಬಸ್ – ಬೈಕ್ ನಡುವೆ ಅಪಘಾತ: ಮೂವರ ಸಾವು

ಕೆಎಸ್’ಆರ್’ಟಿಸಿ ಬಸ್ – ಬೈಕ್ ನಡುವೆ ಅಪಘಾತ: ಮೂವರ ಸಾವು

0

ಚಿತ್ರದುರ್ಗ(Chitradurga): ಕೆಎಸ್’ಆರ್.ಟಿಸಿ ಬಸ್ ಹಾಗೂ ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದ್ದು ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಳಲ್ಕೆರೆಯ ಕುಕ್ಕವಾಡೇಶ್ವರ ದೇವಸ್ಥಾನ ಬಳಿ ನಡೆದಿದೆ.

ಹೊಳಲ್ಕೆರೆ ತಾಲೂಕಿನ ಮಾಳೇನಹಳ್ಳಿ ಗ್ರಾಮದ ಮನು (28), ಸತೀಶ (30), ರಂಗಾಪುರ ಗ್ರಾಮದ ಚಂದ್ರು (32) ಮೃತ ದುರ್ದೈವಿಗಳಾಗಿದ್ದಾರೆ.

ಕೆಎಸ್​ಆರ್​ಟಿಸಿ ಬಸ್​ನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗ್ತಿದೆ. ಕೆಎಸ್’ಆರ್.ಟಿಸಿ ಬಸ್ ಬೇರೆ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಈ  ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಬಸ್  ವೇಗವಾಗಿ ಚಲಾಯಿಸಿದ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಎದುರು ಬರುತ್ತಿದ್ದ 2 ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ಬೈಕ್ ಗಳಿಗೆ ಡಿಕ್ಕಿ ಹೊಡೆದ ಬಳಿಕ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಬಸ್​ ಒಳಗಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಹೊಳಲ್ಕೆರೆ ಸಿಪಿಐ ರವೀಶ್ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ.

ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಕ್ಯಾಂಟೀನ್ ಉದ್ಘಾಟನೆ: ಸ್ತಬ್ಧಚಿತ್ರಗಳ ಪರಿಶೀಲನೆ
ಮುಂದಿನ ಲೇಖನದೇಹದ ಆರೋಗ್ಯ ವೃದ್ಧಿಸುವಲ್ಲಿ ಹರಿವೆ ಸೊಪ್ಪು ಉತ್ತಮ