ಮನೆ ರಾಜಕೀಯ ವೋಟು ಕೇಳಲು ಬರ್ತೀರಾ, ಅಭಿವೃದ್ಧಿ ಮಾಡೋಕಾಗಲ್ವಾ ?: ಹರ್ಷವರ್ಧನ್​ಗೆ ಜನ ತರಾಟೆ

ವೋಟು ಕೇಳಲು ಬರ್ತೀರಾ, ಅಭಿವೃದ್ಧಿ ಮಾಡೋಕಾಗಲ್ವಾ ?: ಹರ್ಷವರ್ಧನ್​ಗೆ ಜನ ತರಾಟೆ

0

ಮೈಸೂರು(Mysuru): ಗ್ರಾಮಕ್ಕೆ ಮೂಲ‌ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಹುಲ್ಲಹಳ್ಳಿ ಹೋಬಳಿಯ ಮಲ್ಲಹಳ್ಳಿ ಗ್ರಾಮಸ್ಥರು ಶಾಸಕ  ಹರ್ಷವರ್ಧರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಸಕ ಬಿ. ಹರ್ಷವರ್ಧನ್‌ ಮಲ್ಲಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟ ವೇಳೆ ಗ್ರಾಮಸ್ಥರು, ಮತಕ್ಕಾಗಿ ಬರ್ತೀರಾ, ಗ್ರಾಮದ ಅಭಿವೃದ್ಧಿ ಮಾಡೋಕಾಗಲ್ವಾ ? ಶಾಲಾ ಮಕ್ಕಳು ಓಡಾಡೋದು ಹೇಗೆ? ಮಳೆ ಬಂದರೆ ರಸ್ತೇಲಿ ಓಡಾಡೋಕೆ ಆಗಲ್ಲ.  ಕುಡಿವ ನೀರು, ಚರಂಡಿ ವ್ಯವಸ್ಥೆಯೂ ಇಲ್ಲ. ನಿಮ್ಮ ಕಾರ್ಯಕ್ರಮಗಳು ಇದ್ದರೆ ಮಾತ್ರ ಇಲ್ಲಿಗೆ ಬರ್ತೀರಾ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಹುಲ್ಲಹಳ್ಳಿ, ನಂಜನಗೂಡು ಭಾಗಕ್ಕೆ ರಸ್ತೆ ಇಲ್ಲ. ದುರಸ್ತಿ ಮಾಡ್ತೀವಿ ಅಂತೀರಾ, ಆ ಮೇಲೆ ಇತ್ತ ತಿರುಗಿಯೂ ನೋಡಲ್ಲ ಎಂದು ರಸ್ತೆಯಲ್ಲೇ ತಡೆದು ನಿಲ್ಲಿಸಿ ಪ್ರಶ್ನಿಸಿದ್ದಾರೆ. ಇದರಿಂದ ಮುಜುಗರಕ್ಕೀಡಾದ ಶಾಸಕರು ರಸ್ತೆಯನ್ನು ಸರಿ ಮಾಡಿಸಿದ ಬಳಿಕ ಮತ ಕೇಳಲು ಬರ್ತೀನಿ ಎಂದು ಹೇಳಿ, ಹೊರಟಿದ್ದಾರೆ.

ಹಿಂದಿನ ಲೇಖನಕ್ರಿಮಿನಲ್ ಗಳನ್ನು ರಾಜಕೀಯದಿಂದ ಹೊರದಬ್ಬಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಿ:  ಇಸಿಐಗೆ ಅಲಹಾಬಾದ್ ಹೈಕೋರ್ಟ್‌ ಸೂಚನೆ
ಮುಂದಿನ ಲೇಖನಮಧುಮೇಹ ಕಂಟ್ರೋಲ್ ನಲ್ಲಿಡಲು ಮೊಳಕೆ ಬಂದ ಮೆಂತ್ಯ ಕಾಳು ಸಹಕಾರಿ