ದಾಳಿಂಬೆ ಹಣ್ಣು ಒಂದು ಆರೋಗ್ಯಕರವಾದ ಹಣ್ಣಾಗಿದ್ದು, ಲೈಂಗಿಕ ವಿಚಾರದಲ್ಲಿ ಉದ್ರೇಕ ವನ್ನು ಹೆಚ್ಚು ಮಾಡು ವಲ್ಲಿ ಇದು ಪ್ರಮುಖವಾಗಿ ಕೆಲಸ ಮಾಡಬಲ್ಲದು ಎಂದು ಹೇಳುತ್ತಾರೆ. ಇದರ ಜೊತೆಗೆ ಮಹಿಳೆಯರ ಸ್ತನ ಕ್ಯಾನ್ಸರ್ ನಿವಾರಣೆಯಲ್ಲಿ ಕೂಡ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿದು ಬಂದಿದೆ.
ಮಹಿಳೆಯರಿಗೆ ದಾಳಿಂಬೆ ಹಣ್ಣು
ಮಾರುಕಟ್ಟೆಯಲ್ಲಿ ಸಿಗುವ ದಾಳಿಂಬೆ ಹಣ್ಣಿನ ಆರೋಗ್ಯಕರ ಪ್ರಯೋಜನಗಳನ್ನು ನೀವು ಸಹ ಉಪಯೋಗಿಸಿಕೊಳ್ಳಬಹುದು. ಯುವ ಮಹಿಳೆಯರಿಗೆ ಹಾಗೂ ಮಧ್ಯ ವಯಸ್ಸು ದಾಟಿದ ಮಹಿಳೆಯರಿಗೆ ದಾಳಿಂಬೆ ಹಣ್ಣು ತುಂಬಾ ಪ್ರಯೋಜನಕಾರಿ.
ಫೈಟೋ ಕೆಮಿಕಲ್ ಅಂಶ
• ದಾಳಿಂಬೆ ಹಣ್ಣಿನ ಜ್ಯೂಸ್ ನಲ್ಲಿ ಫೈಟೋ ಕೆಮಿಕಲ್ ಎಂಬ ಅಂಶಗಳ ಪ್ರಮಾಣ ಅಪಾರವಾಗಿರುವುದರಿಂದ ಸ್ತನ ಕ್ಯಾನ್ಸರ್ ಅಭಿವೃದ್ಧಿಯಾಗುವುದನ್ನು ಇದು ತಡೆ ಯುತ್ತದೆ.
• ಸ್ತನಗಳ ಭಾಗ ದಲ್ಲಿ ಕ್ಯಾನ್ಸರ್ ಜೀವಕೋಶಗಳ ಅಭಿವೃದ್ಧಿ ಆಗದಂತೆ ಇದು ತಡೆಯುತ್ತದೆ ಮತ್ತು ಈಸ್ಟ್ರೋಜನ್ ಪ್ರಮಾಣ ಹೆಚ್ಚಾಗಿ ಉತ್ಪತ್ತಿ ಆಗದಂತೆ ನೋಡಿಕೊಳ್ಳುತ್ತದೆ.
ಆಂಟಿ ಆಕ್ಸಿಡೆಂಟ್
• ದಾಳಿಂಬೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಸಹ ಇರುವು ದರಿಂದ ಹೃದಯದ ಕಾಯಿಲೆ ಬರದಂತೆ ತಡೆಯುತ್ತದೆ ಮತ್ತು ದಾಳಿಂಬೆ ಹಣ್ಣು ಆಂಟಿ ಕ್ಯಾನ್ಸರ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ಇದರಿಂದ ಹೇಳ ಬಹುದು.
• ಮುಖ್ಯವಾಗಿ ಬೊಜ್ಜಿನ ಪ್ರಮಾಣ ಇರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.
ಅಧ್ಯಯನ ಹೇಳುವ ಹಾಗೆ
• ಒಂದು ಅಧ್ಯಯನ ಹೇಳುವ ಹಾಗೆ ಕಿಮೋಥರಪಿ ಮಾಡಿಸಿ ಕೊಂಡಿರುವ ಮಹಿಳೆಯರಿಗೆ ಈಸ್ಟ್ರೋಜನ್ ಉತ್ಪತ್ತಿ ಆಗದಂತೆ ದಾಳಿಂಬೆ ಹಣ್ಣಿನ ಜ್ಯೂಸ್ ನೋಡಿಕೊಳ್ಳುತ್ತದೆ.
• ಏಕೆಂದರೆ ಹಾರ್ಮೋನ್ ಹೆಚ್ಚಾಗಿ ಸ್ರವಿಸುವುದರಿಂದ ಕೂಡ ಕ್ಯಾನ್ಸರ್ ಗಡ್ಡೆಗಳು ಹೆಚ್ಚಾಗಿ ರೂಪುಗೊಳ್ಳುವ ಸಾಧ್ಯತೆ ಇರುತ್ತದೆ.
ದಾಳಿಂಬೆ ಹಣ್ಣು ಸಿಪ್ಪೆ , ಬೀಜಗಳು ಎಲ್ಲವೂ ಆರೋಗ್ಯಕಾರಿ
ಆದ್ದರಿಂದ ದಾಳಿಂಬೆ ಹಣ್ಣಿನ ಜ್ಯೂಸ್, ಸಿಪ್ಪೆ ಮತ್ತು ಒಳಗಿನ ಬೀಜಗಳು ಸಹ ಔಷಧೀಯ ಲಕ್ಷಣಗಳನ್ನು ಹೊಂದಿದ್ದು, ವಾಸಿ ಮಾಡುವ ಗುಣಗಳನ್ನು ಸಹ ಪಡೆದಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಇದು ಸ್ತನ ಕ್ಯಾನ್ಸರ್ ನಿವಾರಣೆಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಬಹುದು.
ದಾಳಿಂಬೆ ಹಣ್ಣಿನ ಜ್ಯೂಸ್ ತಯಾರಿ ಹೇಗೆ?
• ಮೊದಲಿಗೆ ಒಂದು ಅಥವಾ ಎರಡು ದಾಳಿಂಬೆ ಹಣ್ಣುಗಳನ್ನು ತೆಗೆದುಕೊಳ್ಳಿ. ಅವುಗಳನ್ನು ಚೆನ್ನಾಗಿ ತೊಳೆದು,
• ಚಾಕುವಿನಿಂದ ಕತ್ತರಿಸಿ ಒಳಗಿನ ಬೀಜಗಳನ್ನು ಬಿಡಿಸಿ ಒಂದು ಬ್ಲೆಂಡರ್ ನಲ್ಲಿ ಸುರಿದುಕೊಳ್ಳಿ.
• ಇದನ್ನು ಚೆನ್ನಾಗಿ ರುಬ್ಬಿಕೊಂಡು ಆನಂತರ ಒಂದು ಕಂಟೇನರ್ ಗೆ ಸೋಸಿಕೊಳ್ಳಿ.
ಕೊನೆಗೆ ಹೀಗೆ ಮಾಡಿ
• ಈಗ ಒಂದು ಸ್ಪೂನ್ ನಿಂದ ಇದನ್ನು ಮತ್ತಷ್ಟು ಹಿಂಡಿ ರಸ ತೆಗೆದುಕೊಂಡು ಬಳಸಿ ಕೊಳ್ಳಬಹುದು. ನೀವು ಒಂದು ಲೋಟ ದಾಳಿಂಬೆ ಹಣ್ಣಿನ ಜ್ಯೂಸ್ ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ಎರಡು ದಾಳಿಂಬೆ ಹಣ್ಣುಗಳನ್ನು ಉಪಯೋಗಿಸಬೇಕಾಗುತ್ತದೆ.
• ಮಹಿಳೆಯರ ಹೃದಯಕ್ಕೆ ಮತ್ತು ಸ್ತನಗಳ ಆರೋಗ್ಯಕ್ಕೆ ತುಂಬಾ ಅವಶ್ಯಕವಾದ ಮತ್ತು ಅಷ್ಟೇ ಆರೋಗ್ಯಕರವಾದ ಜ್ಯೂಸ್ ಇದಾಗಿದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.