ಮನೆ ಸ್ಥಳೀಯ ಬಲಮುರಿಯ ನೀರಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಬಲಮುರಿಯ ನೀರಲ್ಲಿ ಮುಳುಗಿ ವಿದ್ಯಾರ್ಥಿ ಸಾವು

0

ಶ್ರೀರಂಗಪಟ್ಟಣ : ತಾಲೂಕಿನ ಪ್ರವಾಸಿ ತಾಣ ಬಲಮುರಿಯ ಕಾವೇರಿ ನದಿಯಲ್ಲಿ ಈಜಲು ನೀರಿಗಿಳಿದ ವಿದ್ಯಾರ್ಥಿಯೋರ್ವ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.


ಮೈಸೂರು ಫರೂಕಿಯ ಕಾಲೇಜು ಪ್ರಥಮ ಪಿ.ಯು.ಸಿ ವಿದ್ಯಾರ್ಥಿ ಮೊಹಮದ್ ಜಯಿನ್(೧೭) ಮೃತಪಟ್ಟ ದುರ್ದೈವಿ.

ಮೈಸೂರು ನಗರದ ಮಂಡಿ ಮೊಹಲ್ಲಾ ನಿವಾಸಿ ಇಂತಿಯಾಜ್ ಪಾಷ ರವರ ಮಗ ಮೊಹಮೊದ್ ಜಯಿನ್ ಭಾನುವಾರ ಸಂಜೆ ನಾಲ್ವರು ಸ್ನೇಹಿತರ ಜೊತೆಗೂಡಿ ಬಲಮುರಿಗೆ ಕಾವೇರಿ ನದಿಯಲ್ಲಿ ಈಜಾಡುವಾಗ ಸುಳಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಪೋಲೀಸ್ ಮುಲಗಳು ತಿಳಿಸಿವೆ.
ಈತ ತನ್ನ ಸ್ನೇಹಿತರ ಜೊತೆಗೂಡಿ ಬಲಮುರಿ ನೋಡಲು ಪ್ರವಾಸಕ್ಕೆ ಆಗಿಮಿಸಿದ ವೇಳೆ ಘಟನೆ ನಡೆದಿದ್ದು, ಜೊತೆಯಲ್ಲಿದ್ದ ಸ್ನೇಹಿತನೊಬ್ಬ ಪೋಷಕರಿಗೆ ಮಾಹಿತಿ ನೀಡಿದ್ದು, ಪೋಷಕರು ಕೆಆರ್‌ಎಸ್ ಪೊಲೀಸರಿಗೆ ದೂರು ನೀಡಿದ್ಧಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೊಹಮದ್ ಜಯಿನ್ ಶವವನ್ನು ನದಿಯಲ್ಲಿ ಹುಡುಕಿ ತೆಗೆದು ಮೈಸೂರು ಕೆ.ಆರ್.ಆಸ್ಪತ್ರೆ ಶವಗಾರದಲ್ಲಿ ಶವಪರಿಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.

ಹಿಂದಿನ ಲೇಖನಮಂಗಳೂರು: ಬ್ರೇಕ್ ವೈಫಲ್ಯದಿಂದ ಪಲ್ಟಿಯಾದ ಹಣ್ಣುಹಂಪಲು ಹೊತ್ತ ಟೆಂಪೊ
ಮುಂದಿನ ಲೇಖನಹಾಸ್ಯ