ನಿಜವಾಗುತ್ತಿದೆ ಸಿದ್ದು ಮುತ್ಯಾ ಕಾಲಜ್ಞಾನ, ಕೋಡಿಶ್ರೀ, ಮೈಲಾರ ಭವಿಷ್ಯ

0

580 ವರ್ಷಗಳ ನಂತರ ಸಂಭವಿಸಿದ ಅತಿ ದೊಡ್ದ ಚಂದ್ರ ಗ್ರಹಣ ಮತ್ತು ಮುಂದಿನ ಒಂದು ದಿನದಲ್ಲಿ ಸಂಭಸಿಲಿರುವ ಖಗ್ರಾಸ ಸೂರ್ಯ ಗ್ರಹಣ, ಅಪಶಕುನದ ಮುನ್ಸೂಚನೆ ಎಂದು ಹಲವು ಜ್ಯೋತಿಷಿಗಳು, ಸ್ವಾಮೀಜಿಗಳು ಹಿಂದೆನೇ ಭವಿಷ್ಯವನ್ನು ನುಡಿದಿದ್ದರು. ಆರೋಗ್ಯ ಮತ್ತು ನೈಸರ್ಗಿಕ ವಿಕೋಪದ ವಿಚಾರದಲ್ಲಿ ವಿಶ್ವದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ, ಇನ್ನೇನು ಅನಾಹುತ ಕಾದಿದೆಯೋ ಎಂದು ಅಪಾಯದ ದಿನವನ್ನು ಎದುರು ನೋಡುವಂತೆ ಮಾಡಿದೆ ಇವರುಗಳ ಭವಿಷ್ಯ.

ಕೊರೊನಾ ವಿಚಾರದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಿದ್ದು ಮುತ್ಯಾ ಕಾಲಜ್ಞಾನವನ್ನು ನುಡಿದಿದ್ದರು, ಜೊತೆಗೆ, ಕೋಡಿಮಠದ ಶ್ರೀಗಳೂ ಭವಿಷ್ಯವನ್ನು ನುಡಿದಿದ್ದರು. ಅವರು ಹಿಂದೆ ಹೇಳಿದ್ದ ಭವಿಷ್ಯವೇನು, ಈಗ ಆಗುತ್ತಿರುವುದನ್ನು ಅವಲೋಕಿಸಿದಾಗ. ಕೊರೊನಾ ರೂಪಾಂತರಗೊಂಡು ಇನ್ನೂ ಮೂರ್ನಾಲ್ಕು ವರ್ಷ ಮನುಕುಲವನ್ನು ಕಾಡಲಿದೆ.

“ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತಿದೆ. ಹೀಗಾಗಿ, ಸಾವು ಹೆಚ್ಚಾಗಲಿದೆ. ಕೊರೊನಾ ರೂಪಾಂತರಗೊಂಡು ಇನ್ನೂ ಮೂರ್ನಾಲ್ಕು ವರ್ಷ ಮನುಕುಲವನ್ನು ಕಾಡಲಿದೆ. ಲೋಕ ಕಲ್ಯಾಣವಾಗಲು ಇನ್ನೂ ಸ್ವಲ್ಪದಿನ ಕಳೆಯಬೇಕು, ಜಗಳಗಳು, ಕಾಯಿಲೆಗಳು, ಯುದ್ದಗಳು ಇನ್ನು ಶುರುವಾಗುತ್ತದೆ” ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ನುಡಿದ ಭವಿಷ್ಯವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಕೊರೊನಾ ಮೂರನೇ ಅಲೆ ಬರುವುದಿಲ್ಲ ಎಂದಿದ್ದ ಮೈಲಾರ ಭವಿಷ್ಯವಾಣಿ: “ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್” ಎನ್ನುವ ಭವಿಷ್ಯವಾಣಿಯನ್ನು ನುಡಿಯಲಾಗಿತ್ತು. ದೈವ ದೊರೆಯದಿತಲೇ ಎಂದರೆ, ಕೊರೊನಾ ಮೂರನೇ ಅಲೆ ಬರುವುದಿಲ್ಲ ಎಂದೂ ವ್ಯಾಖ್ಯಾನಿಸಬಹುದು. ಈ ಭವಿಷ್ಯವಾಣಿಯನ್ನು ರಾಜಕೀಯವಾಗಿ ಹೇಳುವುದಾದರೆ, ಜನತೆ ಮತ್ತು ದೈವ ಮೆಚ್ಚುವಂತಹ ಆಡಳಿತವನ್ನು ಈ ಸರಕಾರ ನೀಡುತ್ತದೆ ಎಂದೂ ಹೇಳಬಹುದು” ಎಂದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಗೊರವಯ್ಯನವರು ನುಡಿದ ಭವಿಷ್ಯವನ್ನು ದೇವಾಲಯದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ವಿವರಿಸಿದ್ದರು. ಇವರು ಮೂರನೇ ಅಲೆ ಬರುವುದಿಲ್ಲ ಎಂದು ಹೇಳಿದ್ದನ್ನು ಇಲ್ಲಿ ತಪ್ಪು ಎಂದು ಅಂಡರ್ಲೈನ್ ಮಾಡಿಟ್ಟುಕೊಳ್ಳಬಹುದು.

ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ಗೂಳಿ ರೇಸ್‌ಗೆ ಸುಪ್ರೀಂಕೋರ್ಟ್ ಅನುಮತಿ
ಮುಂದಿನ ಲೇಖನಆಪರೇಶನ್ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್ ಆಗಿ ಡ್ರಗ್ ಪೆಡ್ಲರ್