ಮನೆ ಸುದ್ದಿ ಜಾಲ ಮಗು ಎದೆ ಹಾಲು ಕುಡಿಯುತ್ತಿಲ್ಲವೆಂದು ನೊಂದ ತಾಯಿ ಆತ್ಮಹತ್ಯೆಗೆ ಶರಣು

ಮಗು ಎದೆ ಹಾಲು ಕುಡಿಯುತ್ತಿಲ್ಲವೆಂದು ನೊಂದ ತಾಯಿ ಆತ್ಮಹತ್ಯೆಗೆ ಶರಣು

0

ಮೈಸೂರು: ತನ್ನ ಮಗು ಎದೆ ಹಾಲು ಕುಡಿಯುತ್ತಿಲ್ಲ ಎಂದು  ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಗುಂಡೂರಾವ್ ನಗರದಲ್ಲಿ ನಡೆದಿದೆ.

ಗುಂಡೂರಾವ್ ನಗರದ ನಿವಾಸಿ  ವೈದ್ಯೆ ಅರ್ಪಿತಾ ಆತ್ಮಹತ್ಯೆ ಮಾಡಿಕೊಂಡ ತಾಯಿಯಾಗಿದ್ದು, ಕಳೆದ ೫ ವರ್ಷಗಳ ಹಿಂದೆ ವೈದ್ಯ ವೃತ್ತಿ ಮಾಡುತ್ತಿದ್ದವರನ್ನೇ ಮದುವೆಯಾಗಿದ್ದರು.

೪ ವರ್ಷಗಳ ನಂತರ ಮಗುವಾಗಿದ್ದು, ಆ ಮಗುವಿಗೆ ಈಗ ೯ ತಿಂಗಳು. ಮಗು ಕಳೆದ ೧೫ ದಿನಗಳಿಂದ ಎದೆ ಹಾಲು ಕುಡಿಯುತ್ತಿರಲಿಲ್ಲ ಎಂದು ತಾಯಿ ಅರ್ಪಿತಾ ಬೇಸರಗೊಂಡಿದ್ದರು. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಈ ಸಂಬಂಧ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ, ನಗರದ ವಿದ್ಯಾರಣ್ಯಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು,  ತನಿಖೆ ಕೈಗೊಂಡಿದ್ದಾರೆ..

ಹಿಂದಿನ ಲೇಖನಲಾಲ್ ಬಹದ್ಧೂರ್ ಶಾಸ್ತ್ರೀ ಅವರ ಪುಣ್ಯತಿಥಿ: ಪುಷ್ಪನಮನ ಸಲ್ಲಿಸಿದ ಸಚಿವ ಅಶ್ವಥ್ ನಾರಾಯಣ್
ಮುಂದಿನ ಲೇಖನಸಿಎಂ ಸೇರಿದಂತೆ ಸಂಪುಟದ ನಾಲ್ವರು ಸಚಿವರಿಗೆ ಕೊರೋನಾ: ಇಂದು ಸಿಎಂ ಮಹತ್ವದ ಸಭೆ