ಮನೆ ರಾಜಕೀಯ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಿವೃತ್ತ ಸೂಪರಿಂಟೆಂಡೆಂಟ್ಆಫ್ ಪೊಲೀಸ್ ಎನ್​.ನಾಗರಾಜಸ್ಪರ್ಧೆ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಿವೃತ್ತ ಸೂಪರಿಂಟೆಂಡೆಂಟ್ಆಫ್ ಪೊಲೀಸ್ ಎನ್​.ನಾಗರಾಜಸ್ಪರ್ಧೆ

0

ಬೆಂಗಳೂರು: ಇದೇ ಡಿಸೆಂಬರ್​ 12ಕ್ಕೆ ನಡೆಯಲಿರುವ ರಾಜ್ಯ ಒಕ್ಕಲಿಗ ಸಂಘದ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ನಿನ್ನೆಯೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 35 ನಿರ್ದೇಶಕ ಸ್ಥಾನಗಳಿಗೆ ಬರೋಬ್ಬರಿ 312 ನಾಮಪತ್ರಗಳು ಸಲ್ಲಿಕೆಯಾಗಿವೆ. ನಿವೃತ್ತ ಪೊಲೀಸ್​ ಅಧಿಕಾರಿ​​ ಎನ್​.ನಾಗರಾಜ ಅವರು ಇದೇ ಮೊದಲ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ. ರಾಜ್ಯ ಒಕ್ಕಲಿಗ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಶಪಥದೊಂದಿಗೆ ಡಾ. ಟಿ.ಹೆಚ್.ಆಂಜನಪ್ಪ ಹಾಗೂ ಪ್ರೊ.ಕೆ.ನಾರಾಯಣಗೌಡ ನೇತೃತ್ವದಲ್ಲಿ ನಿನ್ನೆ ಎನ್​.ನಾಗರಾಜ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿವಿ ಪುರಂನಲ್ಲಿರುವ ಒಕ್ಕಲಿಗರ ಸಂಘದ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಾಗಿದೆ.

ನಿವೃತ್ತ ಸೂಪರಿಂಟೆಂಡೆಂಟ್ ಆಫ್​ ಪೊಲೀಸ್​ ಆಗಿರುವ ಎನ್​.ನಾಗರಾಜ ಮೂಲತಃ ದೇವನಹಳ್ಳಿಯವರು. ವೃತ್ತಿ ಜೀವನದಲ್ಲಿ ಅವರು ತೋರಿದ ಅತ್ಯುತ್ತಮ ಸೇವೆಗಾಗಿ ಎರೆಡು ಬಾರಿ ರಾಷ್ಟ್ರಪತಿ ಪದಕ ಪಡೆದ ಕೆಲವೇ ಅಧಿಕಾರಿಗಳಲ್ಲಿ ಇವರೂ ಒಬ್ಬರು. ಅಲ್ಲದೇ ಕಾಡುಗಳ್ಳ ವೀರಪ್ಪನ್ ಕಾರ್ಯಪಡೆಯಲ್ಲಿ ಸುಮಾರು 5 ವರ್ಷಗಳಕಾಲ​ ಅಧಿಕಾರಿಗಳ ತಂಡವನ್ನ ಮುನ್ನಡೆಸಿದ್ದಾರೆ. ಇನ್ನು ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಬಹಳ ಗೌರವ ಸ್ಥಾನವಾದ ಮಾನವ ಹಕ್ಕುಗಳ ಪ್ರಾದೇಶಿಕ  ಮುಖ್ಯಸ್ಥರಾಗಿದ್ದರು. ಅಲ್ಲದೇ ಈ ಅವಧಿಯಲ್ಲಿ ಜನಾಂಗೀಯ ಕಲಹದಿಂದ ಬೇಸತ್ತಿದ್ದ ಯುರೋಪಿನ ಬೋಸ್ನಿಯಾದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸಲು ನಿಯೋಜಿತರಾದರು. ಈ ಕಾರ್ಯದಲ್ಲಿ ಎರೆಡು ಬಾರಿ ವಿಶ್ವಸಂಸ್ಥೆ ಪದಕ ಪಡೆದಿರುವುದು ಗಮನಾರ್ಹವಾಗಿದೆ. ಸದ್ಯ ಎನ್​.ನಾಗರಾಜ ಅವರು ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕೆಂಬ ಸಂಕಲ್ಪವನ್ನ ಇಟ್ಟುಕೊಂಡು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ. ಡಾ.ಟಿ.ಹೆಚ್​.ಆಂಜನಪ್ಪ ಹಾಗೂ ಪ್ರೊ, ಕೆ.ನಾರಾಯಣಗೌಡ ತಂಡದಲ್ಲಿ ಗುರುತಿಸಿಕೊಂಡಿರುವ ನಾಗರಾಜ ಅವರು, ಗೆದ್ದು ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗುವ ಆತ್ಮವಿಶ್ವಾಸದಲ್ಲಿದ್ದಾರೆ. 

 

ಹಿಂದಿನ ಲೇಖನವ್ಯಕ್ತಿ ಸ್ವಾತಂತ್ರ್ಯ ಕುರಿತಂತೆ ನ್ಯಾ. ಡಿ ವೈ ಚಂದ್ರಚೂಡ್‌ ನಿರ್ಧರಿಸಿದ ಐದು ಪ್ರಕರಣಗಳು ಇವು
ಮುಂದಿನ ಲೇಖನಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಎ.ಮಂಜು ಗಂಭೀರ ಆರೋಪ