ಮನೆ ಅಪರಾಧ ಉದ್ಯಮಿಯಿಂದ 25 ಲಕ್ಷ ಹಣ ವಸೂಲಿ: ವಿವಿಪುರಂ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಎಫ್’ಐಆರ್

ಉದ್ಯಮಿಯಿಂದ 25 ಲಕ್ಷ ಹಣ ವಸೂಲಿ: ವಿವಿಪುರಂ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಎಫ್’ಐಆರ್

0

ಬೆಂಗಳೂರು(Bengaluru): ಉದ್ಯಮಿಯಿಂದ 25 ಲಕ್ಷ ಹಣ ವಸೂಲಿ ಮಾಡಿರುವ ಆರೋಪದಡಿ ವಿವಿಪುರಂ ಪೊಲೀಸ್‌ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ದೆಹಲಿಯ ಸೀಮಾಪುರಿಯಲ್ಲಿ ಎಫ್’ಐಆರ್ ದಾಖಲಾಗಿದೆ.

ವಿವಿಪುರಂ ಪೊಲೀಸ್ ಠಾಣೆಯ ಮುತ್ತುರಾಜ್, ಸತೀಶ್ ಹಾಗೂ ಬಸವರಾಜ್ ಪಾಟೀಲ್ ಎಂಬುವರ ಮೇಲೆ ಎಫ್’​ಐಆರ್ ಆಗಿದೆ.

ಪ್ರಕರಣವೊಂದರ ಸಂಬಂಧ ಉದ್ಯಮಿ ಪಂಕಜ್ ಸಿಂಗ್ ಎಂಬುವರಿಗೆ ಆರೋಪಿತ ಮೂವರು ಪೊಲೀಸರು ನೋಟಿಸ್ ಕೊಡಲು ತೆರಳಿದ್ದರು‌.

ಈ ವೇಳೆ ಪಂಕಜ್ ಸಿಂಗ್’​ನಿಂದ ಚೆಕ್ ಹಾಗೂ ನಗದು ರೂಪದಲ್ಲಿ 25 ಲಕ್ಷ ಹಣ ವಸೂಲಿ‌ ಮಾಡಿರುವುದಾಗಿ ಆರೋಪಿಸಿ, ದೆಹಲಿ ಸೀಮಾಪುರಿ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿಂದಿನ ಲೇಖನಕಾರು- ಬಸ್ ನಡುವೆ ಅಪಘಾತ: 10 ಮಂದಿ ದುರ್ಮರಣ
ಮುಂದಿನ ಲೇಖನಹಾಸನ: ಚಿನ್ನ, ವಿದೇಶಿ ಹಣದ ಆಮಿಷಕ್ಕೆ ಒಳಗಾಗಿ 18 ಲಕ್ಷ ರೂ.ಕಳೆದುಕೊಂಡ ವ್ಯಕ್ತಿ