ಮನೆ ಅಪರಾಧ ಸರಕು ಸಾಗಣೆ ಆಟೋ ಪಲ್ಟಿ: ಮೂವರು ಸಾವು

ಸರಕು ಸಾಗಣೆ ಆಟೋ ಪಲ್ಟಿ: ಮೂವರು ಸಾವು

0

ರಾಮನಗರ: ಮಾಗಡಿ ತಾಲ್ಲೂಕಿನ ನಾರಾಯಣಿಪಾಳ್ಯ ಗೇಟ್ ಬಳಿ ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಸೋಮವಾರ ಸರಕು ಸಾಗಣೆ ಆಟೊ ಪಲ್ಟಿಯಾಗಿದ್ದು, ಮೂವರು ಮೃತಪಟ್ಟರು.


ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಗ್ರಾಮದವರಾದ ರತ್ನಮ್ಮ (53), ಲಕ್ಕಮ್ಮ (40) ಹಾಗೂ ಮಂಜುನಾಥ (32) ಮೃತರು.  ನೆಲಮಂಗಲದಲ್ಲಿ ತರಕಾರಿ ತೆಗೆದುಕೊಂಡು ಬೆಳ್ಳೂರಿಗೆ ವಾಪಸ್  ಹೋಗುವಾಗ ಈ ಅಪಘಾತ ಸಂಭವಿಸಿದೆ.
ಇನ್ನೂ ಮೂವರು ಗಾಯಗೊಂಡಿದ್ದು, ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಂದಿನ ಲೇಖನಗುಜರಾತ್ ಚುನಾವಣೆ: ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಪ್ರಧಾನಿ ಮೋದಿ
ಮುಂದಿನ ಲೇಖನವಿಕಲಚೇತನರಿಗೆ ಸುಪ್ರೀಂ ಕೋರ್ಟ್ ಅಂಗಳ ಪ್ರವೇಶ ಸುಗಮಗೊಳಿಸಲು ಪರಿಶೀಲನೆಗೆ ನ್ಯಾ. ಭಟ್ ನೇತೃತ್ವದ ಸಮಿತಿ ರಚಿಸಿದ ಸಿಜೆಐ