ಮನೆ ರಾಜಕೀಯ ಪಠ್ಯದಲ್ಲಿ ಬಿಟ್ಟ ಅಂಶ ಮತ್ತೆ ಸೇರಿಸುತ್ತೇವೆ: ಸಚಿವ ಬಿ.ಸಿ ನಾಗೇಶ್

ಪಠ್ಯದಲ್ಲಿ ಬಿಟ್ಟ ಅಂಶ ಮತ್ತೆ ಸೇರಿಸುತ್ತೇವೆ: ಸಚಿವ ಬಿ.ಸಿ ನಾಗೇಶ್

0

ಬೆಂಗಳೂರು(Bengaluru): ಪಠ್ಯಪುಸ್ತಕ ಪರಿಷ್ಕರಣೆ ವಿವಾದ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪಠ್ಯದಲ್ಲಿ ಬಿಟ್ಟ ಅಂಶವನ್ನು ಮತ್ತೆ ಸೇರಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಪಠ್ಯದಲ್ಲಿ ಬಿಟ್ಟಿರುವ ಬಸವಣ್ಣ. ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗೆಗಿನ ಅಂಶ ಸೇರಿಸುತ್ತೇವೆ. ಸಿಎಂ ಹೇಳಿದ ಮೇಲೂ ಸಿದ್ಧರಾಮಯ್ಯ ಮಾತನಾಡುತ್ತಾರೆ. ರಾಜಕಾರಣಕ್ಕಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಎಲ್ಲವನ್ನೂ  ಜನರ ಮುಂದಿಡುತ್ತೇವೆ. ಸರಿತಪ್ಪು ಯಾವುದು  ಎಂಬುದನ್ನ ಜನರೇ ತೀರ್ಮಾನಿಸಲಿ. ಶೀಘ್ರದಲ್ಲೇ ಪಠ್ಯಪುಸ್ತಕ ಜನರ ಮುಂದಿಡುತ್ತೇವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.