ಮನೆ ಅಪರಾಧ ಮಹದೇಶ್ವರ ಬೆಟ್ಟದ ಮಳಿಗೆಯಲ್ಲಿ ಅಗ್ನಿ ಆಕಸ್ಮಿಕ: ಲಕ್ಷಾಂತರ ರೂ.ನಷ್ಟ

ಮಹದೇಶ್ವರ ಬೆಟ್ಟದ ಮಳಿಗೆಯಲ್ಲಿ ಅಗ್ನಿ ಆಕಸ್ಮಿಕ: ಲಕ್ಷಾಂತರ ರೂ.ನಷ್ಟ

0

ಚಾಮರಾಜನಗರ(Chamarajanagar): ಮಹದೇಶ್ವರ ಬೆಟ್ಟದ ಅಂತರಗಂಗೆ ಬಳಿ‌ ನಿರ್ಮಿಸಿರುವ, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಮಳಿಗೆಗಳಲ್ಲಿ ಗುರುವಾರ ಬೆಳಿಗ್ಗೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಹನುಮಂತು ಎಂಬುವವರು ಗುತ್ತಿಗೆಗೆ ಪಡೆದಿದ್ದ ಮೂರು ಮಳಿಗೆಗಳು ಬೆಂಕಿಗೆ ಆಹುತಿಯಾಗಿದೆ. ಮಾರಾಟಕ್ಕೆ ಇಟ್ಟಿದ್ದ ಬಟ್ಟೆಗಳು ಸೇರಿದಂತೆ ಎಲ್ಲ ವಸ್ತುಗಳು ಸುಟ್ಟು‌ಕರಕಲಾಗಿದೆ.

ಅಂತರಗಂಗೆ ಬಳಿ ನಿರ್ಮಾಣ ಮಾಡಿರುವ ಮಳಿಗೆಗಳು ತಗಡಿನಿಂದ ನಿರ್ಮಿಸಲಾಗಿದ್ದು, ಬೆಂಕಿಗಾಹುತಿಯಾಗಿರುವ ಮಳಿಗೆಯ ಹಿಂದೆ ಕಸದ ರಾಶಿ ಇತ್ತು. ಕಸಕ್ಕೆ ಹಾಕಿದ ಬೆಂಕಿ, ಮಳಿಗೆಯ ಒಳಭಾಗದಲ್ಲಿ ಹಾಕಲಾಗಿದ್ದ ಬಟ್ಟೆಗೆ ತಗುಲಿ ಅನಾಹುತ‌ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.