ಮನೆ ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆ: ಅಕ್ಕಮಹಾದೇವಿ, ಕನಕದಾಸರು, ಪುರಂದರದಾಸರ ಪರಿಚಯಕ್ಕೂ ಕತ್ತರಿ

ಪಠ್ಯಪುಸ್ತಕ ಪರಿಷ್ಕರಣೆ: ಅಕ್ಕಮಹಾದೇವಿ, ಕನಕದಾಸರು, ಪುರಂದರದಾಸರ ಪರಿಚಯಕ್ಕೂ ಕತ್ತರಿ

0

ಬೆಂಗಳೂರು(Bengaluru): 7 ನೇ ತರಗತಿ ಸಮಾಜ ವಿಜ್ಞಾನದ ಭಾಗ–1 ರಲ್ಲಿದ್ದ ಸಂತ ಶಿಶುನಾಳ ಶರೀಫರು, ಕನಕದಾಸರು, ಅಕ್ಕಮಹಾದೇವಿ ಮತ್ತು ಪುರಂದರ ದಾಸರ ವಿವರಗಳನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣಾ ಸಮಿತಿಯು ತೆಗೆದುಹಾಕಿದೆ ಎಂಬ ಟೀಕೆ ಕೇಳಿಬಂದಿದೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಪರಿಷ್ಕರಣಾ ಸಮಿತಿ ಇದರಲ್ಲಿ ‘ಭಕ್ತಿಪಂಥ ಮತ್ತು ಸೂಫಿ ಪರಂಪರೆ’ ಎಂಬ ಪಾಠವನ್ನು ಸೇರಿಸಿತ್ತು. ಚಕ್ರತೀರ್ಥ ಸಮಿತಿಯು 7 ನೇ ತರಗತಿಯಲ್ಲಿದ್ದ ಇಡೀ ಪಾಠವನ್ನೇ ಕೈಬಿಟ್ಟಿದೆ.

6 ನೇ ತರಗತಿಯ ಸಮಾಜ ವಿಜ್ಞಾನ ಭಾಗ–2 ರಲ್ಲಿ ಚಕ್ರತೀರ್ಥ ಸಮಿತಿ ಭಕ್ತಿ ಪಂಥದ ಬಗ್ಗೆ ಪಾಠವೊಂದನ್ನು ಸೇರಿಸಿದ್ದರೂ ಅಲ್ಲಿ ಕರ್ನಾಟಕದವರಿಗೆ ಸ್ಥಾನವಿಲ್ಲ ಮತ್ತು ಇವರ ಬಗ್ಗೆ ಬರೆದಿಲ್ಲ. 9 ನೇ ತರಗತಿ ಸಮಾಜ ವಿಜ್ಞಾನ ಭಾಗ–2 ರಲ್ಲಿ ಎರಡೇ ವಾಕ್ಯದಲ್ಲಿ ಕನಕದಾಸರು ಮತ್ತು ಪುರಂದರದಾಸರ ಪ್ರಸ್ತಾಪವಿದೆ. ಬರಗೂರು ಪರಿಷ್ಕರಣೆಯ 9 ನೇ ತರಗತಿ ಸಮಾಜ ವಿಜ್ಞಾನ ಭಾಗ– 2 ರಲ್ಲಿ ಕನಕದಾಸರು, ಪುರಂದರ ದಾಸರು ಮತ್ತು ಶಿಸುನಾಳ ಶರೀಫರ ಬಗ್ಗೆ ಆಸಕ್ತಿದಾಯಕ ವಿವರಗಳಿದ್ದವು. ಅದನ್ನು ತೆಗೆದುಹಾಕಲಾಗಿದೆ. 6 ನೇ ತರಗತಿ ಮತ್ತು 9 ನೇ ತರಗತಿ ಪಠ್ಯಗಳಲ್ಲಿ ಉತ್ತರಭಾರತದ ಭಕ್ತಿ ಪಂಥದವರ ಬಗ್ಗೆ ಬರೆದು ಕರ್ನಾಟಕ ಭಕ್ತಿಪಂಥಕ್ಕೆ ಕತ್ತರಿ ಹಾಕಲಾಗಿದೆ.

ಹಿಂದಿನ ಲೇಖನದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ವಶ: ಯುವಕನ ಬಂಧನ
ಮುಂದಿನ ಲೇಖನಮಹದೇಶ್ವರ ಬೆಟ್ಟದ ಮಳಿಗೆಯಲ್ಲಿ ಅಗ್ನಿ ಆಕಸ್ಮಿಕ: ಲಕ್ಷಾಂತರ ರೂ.ನಷ್ಟ