ಮನೆ ಅಪರಾಧ ಕೆ.ಆರ್.ಪೇಟೆ: ದುಷ್ಕರ್ಮಿಗಳಿಂದ ರೌಡಿಯ ಕೊಲೆ

ಕೆ.ಆರ್.ಪೇಟೆ: ದುಷ್ಕರ್ಮಿಗಳಿಂದ ರೌಡಿಯ ಕೊಲೆ

0

ಕೆ.ಆರ್.ಪೇಟೆ (K.R.Pete): ರೌಡಿಯೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಅರುಣ್‌ ಅಲಿಯಾಸ್‌ ಅಲ್ಲು (38) ರೌಡಿಯನ್ನು ಕೊಲೆ ಮಾಡಲಾಗಿದೆ. ಗಡಿಪಾರು ಶಿಕ್ಷೆ ಅನುಭವಿಸಿ ಕೆ.ಆರ್.ಪಟ್ಟಣಕ್ಕೆ ಹಿಂದಿರುಗಿದ್ದ ಅರುಣ್‌ ನನ್ನು ಈಶ್ವರ ದೇವಸ್ಥಾನದ ಬಳಿ ಐವರು ದುಷ್ಕರ್ಮಿಗಳ ಗುಂಪೊಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಅರುಣ್‌ ಹಲವಾರು ಕ್ರಿಮಿನಲ್‌ ಪ್ರಕರಣದಲ್ಲಿ ಭಾಗಿಯಾಗಿದ್ದನು. ಜೈಲಿನಲ್ಲಿ ಇದ್ದುಕೊಂಡೇ ಮಾರ್ವಾಡಿಯೊಬ್ಬನನ್ನು ಅಪಹರಿಸಿದ್ದನು. ಈ ಪ್ರಕರಣದಲ್ಲಿ ಶಾಮೀಲಾಗಿದ್ದ ಜೈಲು ಸಿಬ್ಬಂದಿಗೂ ಶಿಕ್ಷೆಯಾಗಿತ್ತು.

ರಾಜಕಾರಣಿಗಳು, ವ್ಯಾಪಾರಸ್ಥರುಗಳಿಂದ ಹಪ್ತಾ ವಸೂಲಿ ಮಾಡುತ್ತಿದ್ದ ಅರುಣ್‌ ಜೈಲಿನಿಂದ ಬಿಡುಗಡೆಯಾದ ಬಳಿಕ ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು. ಇಂದು ದೇವಸ್ಥಾನದ ಬಳಿ ಬಂದಾಗ ಕೊಲೆಯಾಗಿದ್ದಾನೆ. ಈ ಸಂಬಂಧ ಕೆ.ಆರ್.ಪೇಟೆ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.