ಮನೆ ಅಪರಾಧ ಹಲ್ಲುಜ್ಜದೇ ಮುತ್ತು ಕೊಡಬೇಡ ಎಂದ ಪತ್ನಿಯನ್ನು ಕೊಂದ ಪತಿ

ಹಲ್ಲುಜ್ಜದೇ ಮುತ್ತು ಕೊಡಬೇಡ ಎಂದ ಪತ್ನಿಯನ್ನು ಕೊಂದ ಪತಿ

0

ಕೇರಳ (Kerala): ಹಲ್ಲುಜ್ಜದೇ ಮುತ್ತುಕೊಡಬೇಡ ಎಂದ ಪತ್ನಿಯನ್ನು ಪತಿ ಹತ್ಯೆಗೈದಿರುವ ಘಟನೆ ಕೇರಳದಲ್ಲಿ ನಡೆದಿದೆ.

ದೀಪಿಕಾ ಹತ್ಯೆಯಾದ ಮಹಿಳೆ. ಹಲ್ಲುಜ್ಜದೇ ತಮ್ಮ ಪುಟ್ಟ ಮಗುವಿಗೆ ಮುತ್ತಿಡಲು ಬಂದ ಪತಿ ಅವಿನಾಶ್‌ ನನ್ನು ದೀಪಿಕಾ ತಡೆದಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಅವಿನಾಶ್‌ ಚಾಕುವಿನಿಂದ ದೀಪಿಕಾ ಮೇಲೆ ಹಲ್ಲೆ ನಡೆಸಿದ್ದಾನೆ.

ಆಕೆಯ ಚೀರಾಟ ಕೇಳಿ ನೆರೆ ಹೊರೆಯವರು ದೀಪಿಕಾಳ ರಕ್ಷಣೆಗೆ ಧಾವಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಪೆರಿಂತಲ್ಮನ್ನಾ ಬಳಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾರೆ. ಸದ್ಯ ಪೊಲೀಸರು ಆರೋಪಿ ಅವಿನಾಶ್‌ ನನ್ನು ವಶಕ್ಕೆ ಪಡೆದಿದ್ದಾರೆ.