ಬೆಂಗಳೂರು : ನೀಟ್ ಮರು ಪರೀಕ್ಷೆ ತಕ್ಷಣವೇ ಆಗಲಿ ಅಂತ ಬಿಜೆಪಿ ನಾಯಕ,ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಒತ್ತಾಯ ಮಾಡಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಮರು ಪರೀಕ್ಷೆ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೀಟ್ ಪರೀಕ್ಷೆ ವಿಚಾರದಲ್ಲಿ ಪೇಪರ್ ಲೀಕ್ ಆಗಿದೆ ಅಂತ ಕೆಲ ಪ್ರದೇಶದಲ್ಲಿ ವರದಿಯಾಗಿದೆ.
ಮರು ಪರೀಕ್ಷೆ ಮಾಡೋದಾಗಿ NTA ಹೇಳಿದೆ. ರೀ ಷಡ್ಯೂಲ್ ಮಾಡಿ ಸಮಯ ವ್ಯರ್ಥವಾಗದಂತೆ ಮಾಡಿ ಎಂದರು. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರೋರ ಮೇಲೆ ಕಠಿಣ ಕ್ರಮ ಆಗಲಿ. ಮೆರಿಟ್ಗೆ ಕಾಂಪ್ರಮೈಸ್ ಆಗಬಾರದು. ಸಮಸ್ಯೆ ಉದ್ಬವ ಆಗ್ತಿದೆ. ಮೆರಿಟ್ ಸ್ಟೂಡೆಂಟ್ಗೆ ಅನ್ಯಾಯ ಆಗಬಾರದು. ಎಲ್ಲರೂ ಸಹಕರಿಸಿ, ಮರು ಪರೀಕ್ಷೆ ತಕ್ಷಣ ಆಗಲಿ ಅಂತ ಒತ್ತಾಯ ಮಾಡಿದ್ರು.
















