ಮನೆ ರಾಜ್ಯ ಮಳೆ ಬಂದ್ರೆ ಯಾಕೆ ಬಂತು ಅಂತಾ ಕೇಳ್ತೀರಾ, ಬಾರದಿದ್ದರೆ ಯಾಕೆ ಬರಲಿಲ್ಲ ಅಂತೀರಾ ? :...

ಮಳೆ ಬಂದ್ರೆ ಯಾಕೆ ಬಂತು ಅಂತಾ ಕೇಳ್ತೀರಾ, ಬಾರದಿದ್ದರೆ ಯಾಕೆ ಬರಲಿಲ್ಲ ಅಂತೀರಾ ? : ಈಶ್ವರಪ್ಪ ಉಡಾಫೆ ಉತ್ತರ

0

ಶಿವಮೊಗ್ಗ(Shivamogga): ಮಳೆ ಬಂದ್ರೆ ಯಾಕೆ ಬಂತು ಅಂತ ಕೇಳ್ತೀರಾ, ಮಳೆ ಬಾರದೇ ಹೋದರೆ ಯಾಕೆ ಬರಲಿಲ್ಲ ಅಂತೀರ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಮಾಧ್ಯಮಗಳಿಗೆ ಉಡಾಫೆ ಉತ್ತರ ನೀಡಿದ್ದಾರೆ.
ಮಳೆ ಹಾನಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉಡಾಫೆ ಉತ್ತರ ನೀಡಿದ ಸಚಿವರು ನಂತರ ಮಳೆ ಹಾನಿಯ ಬಗ್ಗೆ ಅವಲೋಕನ ಮಾಡಿ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಹರ್ಷ ಹಂತಕ ಆರೋಪಿಗಳಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾಥಿತ್ಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಕೊಲೆ ಮಾಡುವ ಮನಸ್ಥಿತಿಯವರು ಜೈಲಿನ ಸಿಬ್ಬಂದಿಗೂ ಆಮಿಷ ತೋರಿಸಿದ್ದಾರೆ. ಅದು ತಿಹಾರ್ ಜೈಲಿರಬಹುದು ಅಥವಾ ಪರಪ್ಪನ ಅಗ್ರಹಾರ ಇರಬಹುದು. ಈ ಕುತಂತ್ರ ತಕ್ಷಣಕ್ಕೆ ಗೊತ್ತಾಗೋದು ಕಷ್ಟ. ಈ ಕುತಂತ್ರದ ಬಗ್ಗೆ ಗೊತ್ತಾಗಿದೆ. ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಇದನ್ನ ವೈಫಲ್ಯ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದರು.
ಹಿಂದುತ್ವದ ಬಗ್ಗೆ ಇಡೀ ವಿಶ್ವದಲ್ಲಿ ಚರ್ಚೆಯಾಗುತ್ತಿದೆ. ಹಿಂದುತ್ವ ಯಾವಾಗಲೂ ಜೋಡಿಸೋದೇ ವಿನಃ ಒಡೆಯೋದಲ್ಲ..! ಸರ್ವೇ ಜನಾ ಸುಖಿನೋಭವಂತು ಅಂತ ಹೇಳುತ್ತಿದ್ದ ಧರ್ಮ. ಕೆಲವು ದುಷ್ಟ ಶಕ್ತಿಗಳು, ಭಯೋತ್ಪಾದಕರು ಹಿಂದೂ ಯುವಕರನ್ನು ಕೊಲೆ ಮಾಡುತ್ತಿದ್ದಾರೆ. ಕೇವಲ ಸರ್ಕಾರ ಕ್ರಮ ಕೈಗೊಳ್ಳೋದಲ್ಲ, ಹಿಂದೂ ಮುಖಂಡರು ಯುವಕರಿಗೆ ಬುದ್ಧಿವಾದ ಹೇಳಬೇಕು. ಇಂದಲ್ಲಾ ನಾಳೆ, ನಿಮಗೆ ಇದು ತಿರುಗುಬಾಣ ಆಗುತ್ತೆ ಎಂದು ಮುಸ್ಲಿಂ ಯುವಕರಿಗೆ ಸಮುದಾಯದ ಹಿರಿಯರು ಬುದ್ಧಿ ಹೇಳಬೇಕು. ಇಲ್ಲವಾದರೆ ಅವರು ಅನುಭವಿಸುತ್ತಾರೆ. ಕೊಲೆ ಮಾಡುವ ಪ್ರಯತ್ನಕ್ಕಿಂತಲೂ ನೀಚ ಕೆಲಸ ಮತ್ತೊಂದಿಲ್ಲ. ಇದಕ್ಕೆ ಯಾವುದೇ ಸಮಾಜ ಒಪ್ಪೋದಿಲ್ಲ ಎಂದರು.
ರಾಜ್ಯಸಭೆಗೆ ವಿರೇಂದ್ರ ಹೆಗ್ಗಡೆ ಆಯ್ಕೆ: ಪ್ರಧಾನಿ ಮೋದಿಗೆ ಅಭಿನಂದನೆ:
ರಾಜ್ಯ ಸಭೆಗೆ ದಕ್ಷಿಣ ಭಾರತದ ನಾಲ್ವರು ದಿಗ್ಗಜರು ಕರ್ನಾಟಕ ರಾಜ್ಯದ ವಿರೇಂದ್ರ ಹೆಗ್ಗಡೆಯವರನ್ನೂ ಸೇರಿಸಿ ಕೇಂದ್ರ ಸರ್ಕಾರ ನಾಮ ನಿರ್ದೇಶನ ಮಾಡಿದ್ದು, ಇಡೀ ದೇಶವೇ ಸಂತಸ ಪಡುವ ಅಂಶ. ಪ್ರತಿಭೆ ಗುರುತಿಸಿ, ಅವರನ್ನು ರಾಷ್ಟ್ರದ ಶಕ್ತಿಯನ್ನಾಗಿ ಬೆಳೆಸುತ್ತಿರುವುದು ಖುಷಿ ವಿಚಾರ, ಇವರ ಸಾಧನೆ ಇಡೀ ಪ್ರಪಂಚಕ್ಕೆ ಸ್ಪೂರ್ತಿಯಾಗಬೇಕು, ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ ಎಂದರು.