ಮನೆ ರಾಜಕೀಯ ಭಯೋತ್ಪಾದಕರೊಂದಿಗೆ ಬಿಜೆಪಿ ನಂಟು: ೨೨ ನಗರಗಳಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಯೋತ್ಪಾದಕರೊಂದಿಗೆ ಬಿಜೆಪಿ ನಂಟು: ೨೨ ನಗರಗಳಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

0

ನವದೆಹಲಿ(New Delhi): ಭಯೋತ್ಪಾದನೆ ಮತ್ತು ಭಯೋತ್ಪಾದಕರೊಂದಿಗೆ ಆಡಳಿತಾರೂಢ ಬಿಜೆಪಿ ಪಕ್ಷ ಹೊಂದಿರುವ ನಂಟನ್ನು ಬಹಿರಂಗಪಡಿಸುವ ಉದ್ದೇಶದೊಂದಿಗೆ ದೇಶದ ೨೨ ನಗರಗಳಲ್ಲಿ ಪಕ್ಷದ ೨೨ ನಾಯಕರು ಸರಣಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮಾಹಿತಿ ನೀಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಸಂಬಂಧ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಈ ಸುದ್ದಿಗೋಷ್ಟಿಯಲ್ಲಿ, ಬಿಜೆಪಿಯ ನಕಲಿ ರಾಷ್ಟ್ರೀಯತೆಗೆ ತಿರುಗೇಟು ನೀಡುವುದು, ಘೋರ ಅಪರಾಧಗಳಲ್ಲಿ ತೊಡಗಿರುವವರು ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳೊಂದಿಗೆ ಆಡಳಿತ ಪಕ್ಷ ಸಂಪರ್ಕ ಹೊಂದಿದೆ ಎಂಬ ಸಂದೇಶವನ್ನು ತಳ ಮಟ್ಟಕ್ಕೆ ಕೊಂಡೊಯ್ಯುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ೨೨ ಹಿರಿಯ ನಾಯಕರು ಮತ್ತು ವಕ್ತಾರರು ೨೨ ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಭಯೋತ್ಪಾದಕರ ಜತೆಗಿನ ಬಿಜೆಪಿ ನಂಟುಗಳನ್ನು ಬಹಿರಂಗಪಡಿಸಲಿದ್ದಾರೆ. ಭಯೋತ್ಪಾದಕರೊಂದಿಗೆ ಬಿಜೆಪಿ ನಂಟು ಹೊಂದಿದೆ ಎಂಬುದಕ್ಕೆ ಇಂದು ಪುರಾವೆ ಸಿಗಲಿದೆ. ಬಿಜೆಪಿಗೆ ಭಯೋತ್ಪಾದಕರೊಂದಿಗೆ ಸಂಪರ್ಕವಿದೆ. ಈ ಸಂಬಂಧವನ್ನು ಏನೆಂದು ಕರೆಯುತ್ತಾರೆ? ಎಂದು ಟ್ವೀಟ್‌ನಲ್ಲಿ ಅವರು ಪ್ರಶ್ನಿಸಿದ್ದಾರೆ.