ಮನೆ ರಾಷ್ಟ್ರೀಯ ಸಹೋದ್ಯೋಗಿಗಳು ಸಿಡಿಸಿದ ಗುಂಡಿನಿಂದ ಇಬ್ಬರು ಯೋಧರು ಮೃತ, ಇಬ್ಬರಿಗೆ ಗಾಯ

ಸಹೋದ್ಯೋಗಿಗಳು ಸಿಡಿಸಿದ ಗುಂಡಿನಿಂದ ಇಬ್ಬರು ಯೋಧರು ಮೃತ, ಇಬ್ಬರಿಗೆ ಗಾಯ

0

ಶ್ರೀನಗರ (Srinagar): ತಮ್ಮ ಪಡೆಯ ಸೈನಿಕರು ಸಿಡಿಸಿದ ಗುಂಡೇಟಿನಿಂದ ಇಬ್ಬರು ಯೋಧರು ಮೃತಪಟ್ಟು, ಮತ್ತಿಬ್ಬರು ಯೋಧರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ನಡೆದಿದೆ.

ಸುರಾನ್‌ಕೋಟೆ ಗಡಿಯಲ್ಲಿನ ಸೇನಾ ಶಿಬಿರದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ಚಕಮಕಿಯ ಹಿಂದಿನ ಕಾರಣ ತಿಳಿದುಬಂದಿಲ್ಲ.

ಮೃತರು ಮತ್ತು ಗಾಯಾಳು ಯೋಧರು ಪ್ರಾದೇಶಿಕ ಸೇನೆಯವರು. ರಸ್ತೆ ಸಂಚಾರ ಮುಕ್ತಗೊಳಿಸುವ ಕಾರ್ಯಕ್ಕೆ ನಿಯೋಜಿಸಿದ್ದಾಗ ಈ ಘಟನೆ ನಡೆದಿದೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.