ಮನೆ ರಾಷ್ಟ್ರೀಯ ತೆಲಂಗಾಣ: ಕಾಗಿಣಾ ನದಿಯ ಪ್ರವಾಹಕ್ಕೆ ಸಿಲುಕಿ ದಂಪತಿ ಸಾವು

ತೆಲಂಗಾಣ: ಕಾಗಿಣಾ ನದಿಯ ಪ್ರವಾಹಕ್ಕೆ ಸಿಲುಕಿ ದಂಪತಿ ಸಾವು

0

ತೆಲಂಗಾಣ: ತಾಲ್ಲೂಕಿನ ಜಟ್ಟೂರು ಗ್ರಾಮದ ಬಳಿ ಕಾಗಿಣಾ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಮಂತಟ್ಟಿ ಗ್ರಾಮದ ದಂಪತಿಗಳು ಶವವಾಗಿ ಪತ್ತೆಯಾಗಿದ್ದಾರೆ.

ಬುಗ್ಗಪ್ಪ ನರಸಮ್ಮ (60) ಮತ್ತು ಯಾದಮ್ಮ ಬುಗ್ಗಪ್ಪ (55) ನದಿ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರು.

ತರಕಾರಿ ಮಾರಲು ಬಶೀರಾಬಾದ್ ಗೆ ತೆರಳಿದ್ದ ದಂಪತಿಗಳು, ಮರಳಿ ಮಂತಟ್ಟಿಗೆ ಬುರುತ್ತಿದ್ದಾಗ ಕಾಗಿಣಾ ನದಿ ಪ್ರವಾಹಕ್ಕೆ ಸಿಲುಕಿ ಅವರು ಕೊಚ್ಚಿಕೊಂಡು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವರ ಪೈಕಿ ಮಹಿಳೆಯ ದೇಹ ಕಾಣಿಸಿಕೊಂಡಿತ್ತು. ಆದರೆ ಪೊಲೀಸರು ತೆರಳುವಷ್ಟರಲ್ಲಿ ಅದು ಕೊಚ್ಚಿಕೊಂಡು ಮುಂದಕ್ಕೆ ಹೋಗಿತ್ತು. ಬುಧವಾರ ಜಟ್ಟೂರು ಸಮೀಪದಲ್ಲಿ ಬೆಳಿಗ್ಗೆ ಪ್ರವಾಹ ಇಳಿಮುಖವಾಗಿದ್ದರಿಂದ ದಂಪತಿಯ ಮೃತದೇಹಗಳು ಸಿಕ್ಕದ್ದವು. ಮೃತರ ಪುತ್ರರಾದ ವೆಂಕಪ್ಪ ಅವರು ದೇಹಗಳನ್ನು ಗುರುತಿಸಿದರು ಎಂದು ಹೇಳಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಸುಲೇಪೇಟ್ ನ ಸಬ್ ಇನ್ ಸ್ಪೆಕ್ಟರ್ ಸುಖಾನಂದ ಸಿಂಗೆ ಅವರು ಪರಿಶೀಲನೆ ನಡೆಸಿದ್ದಾರೆ. ಸುಲೇಪೇಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.