ಮನೆ ಅಪರಾಧ ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳರ ಬಂಧನ: ೫ ಲಕ್ಷ ರೂ.‌ಮೌಲ್ಯದ  ಚಿನ್ನಾಭರಣ, ೩ ದ್ವಿಚಕ್ರ...

ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳರ ಬಂಧನ: ೫ ಲಕ್ಷ ರೂ.‌ಮೌಲ್ಯದ  ಚಿನ್ನಾಭರಣ, ೩ ದ್ವಿಚಕ್ರ ವಾಹನ ವಶಕ್ಕೆ

0

ಮೈಸೂರ(Mysuru): ಸರಗಳ್ಳತನ ಮತ್ತು ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು  ನರಸಿಂಹರಾಜ ವಿಭಾಗದ ಎಸಿಪಿ ಸ್ಕ್ವಾಡ್ ಮತ್ತು ನರಸಿಂಹರಾಜ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದು, ರೂ. 5 ಲಕ್ಷ ಮೌಲ್ಯದ ಒಟ್ಟು 127 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು ರೂ 1,50,000 ಮೌಲ್ಯದ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಜುಲೈ ೨೨ ರಂದು ಸರಗಳ್ಳತನ ಮತ್ತು ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇನ್ನಿಬ್ಬರ ಸಹಚರರೊಂದಿಗೆ ಸೇರಿ ಕಳ್ಳತನ ಮಾಡುತ್ತಿದ್ದುದ್ದಾಗಿ ನೀಡಿದ್ದಾನೆ.
ಈ ಮಾಹಿತಿ ಮೇರೆಗೆ, ಜು. ೨೬ ರಂದು ಕಾರಾಗೃಹದಲ್ಲಿದ್ದ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರೋಪಿಗಳು ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿದ್ದ 5,00,000 ರೂ. ಮೌಲ್ಯದ ಒಟ್ಟು 127 ಗ್ರಾಂ ತೂಕದ 5 ಚಿನ್ನದ ಸರಗಳು ಮತ್ತು 1.50,000 ರೂ ಮೌಲ್ಯದ ಮೂರು ದ್ವಿಚಕ್ರ ವಾಹಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪತ್ತೆ ಕಾರ್ಯದಿಂದ ಮೈಸೂರು ನಗರ ನರಸಿಂಹರಾಜ-1, ಜ್ಞಾನ ಭಾರತಿ ಠಾಣೆ, ಬ್ಯಾಡರಹಳ್ಳಿ ಠಾಣೆ-1, ತಾವರಕೆರೆ ಠಾಣೆ, ಕನಕಪುರ ಠಾಣೆ, ಕೆ.ಆರ್.ಎಸ್ ಠಾಣೆ, ನಂಜನಗೂಡು ಗ್ರಾಮಾಂತರ ಠಾಣೆ, ಪಾಂಡವಪುರ ಠಾಣಿ-1, ಕಿರುಗಾವಲು ಠಾಣೆಯ-1 ದ್ವಿ ಚಕ್ರ ವಾಹನ ಮತ್ತು ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಮೈಸೂರು ನಗರದ ಡಿ.ಸಿ.ಪಿ ಪ್ರದೀಪ್‌ ಗುಂಟಿ, ಮತ್ತು ಡಿ.ಸಿ.ಪಿ  ಗೀತಾ ಎಂ.ಎಸ್,  ಹಾಗೂ ನರಸಿಂಹರಾಜ ವಿಭಾಗದ ಎ.ಸಿ.ಪಿ. ಎಂ ಶಿವಶಂಕರ ಅವರ ಮಾರ್ಗದರ್ಶನದಲ್ಲಿ  ನಡೆದ ಈ ಪತ್ತೆ ಕಾರ್ಯದಲ್ಲಿ ನರಸಿಂಹರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್. ಅಜರುದ್ದೀನ್, ಪಿ.ಎಸ್.ಐ. ಗಂಗಾಧರ್ ಕೆ.ಎಸ್ ಎ.ಎಸ್.ಐ ರವಿ,   ಎ.ಎಸ್.ಐ ಅನಿಲ್ ಕೆ ಶಂಕಪಾಲ್ ಮತ್ತು ಸಿಬ್ಬಂದಿಗಳಾದ ಎ.ಸಿ.ಪಿ ಸ್ಕ್ವಾಡ್‌ ನ ಅಂಗರಾಜಪ್ಪ, ರಮೇಶ್, ಸುರೇಶ್, ಮಂಜುನಾಥ ಆರ್.ಆರ್. ಹನುಮಂತ ಕಲ್ಲೇದ, ಮಹೇಶ್ ವೈ.ಟಿ. ದೊಡ್ಡಗೌಡ ಮತ್ತಿತ್ತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.