ಮನೆ ಮನರಂಜನೆ ಮತ್ತೊಮ್ಮೆ ತೆರೆ ಮೇಲೆ ʻಬೆಳ್ಳಿ ಕಾಲುಂಗುರʼಸಿನಿಮಾ

ಮತ್ತೊಮ್ಮೆ ತೆರೆ ಮೇಲೆ ʻಬೆಳ್ಳಿ ಕಾಲುಂಗುರʼಸಿನಿಮಾ

0

ಬೆಂಗಳೂರು (Bengaluru): ಕನ್ನಡ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳಲ್ಲಿ, ಎಲ್ಲರ ನೆಚ್ಚಿನ ಸಿನಿಮಾದಲ್ಲಿ ಬೆಳ್ಳಿ ಕಾಲುಂಗುರವು ಒಂದು. ಸಿನಿಮಾ ಅಷ್ಟರ ಮಟ್ಟಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದೀಗ 30 ವರ್ಷಗಳ ಬಳಿಕ ಬೆಳ್ಳಿ ತೆರೆ ಮೇಲೆ ʻಬೆಳ್ಳಿ ಕಾಲುಂಗುರʼ ಸಿನಿಮಾ ಬರುತ್ತಿದೆ. ಆದರೆ ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರ ಮೊಮ್ಮಗಳು ರಾಮ್ ಕುಮಾರ್ ಮತ್ತು ಪೂರ್ಣಿಮಾ ಅವರ ಪುತ್ರಿ ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಚಿತ್ರಕ್ಕೆ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಮುಹೂರ್ತ ನೆರವೇರಿತು. ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಚಿತ್ರಕ್ಕೆ ಕ್ಲಾಪ್ ನೀಡಿದರು. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿತ್ರಕ್ಕೆ ಕ್ಲಾಪ್ ಮಾಡಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಾ.ರಾ.ಗೋವಿಂದ್ ಅವರು ನಮ್ಮ ಜಿಲ್ಲೆಯವರು, ಆತ್ಮೀಯರು. ಅವರು ಪ್ರೀತಿಯಿಂದ ಕರೆದಿದ್ದಕ್ಕೆ ಬಂದು ಮುಹೂರ್ತ ನೆರವೇರಿಸಿದೆ. ಚಿತ್ರಕ್ಕೆ ಗೆಲುವಾಗಲಿ ಎಂದು ಹಾರೈಸಿದರು.

ಚಿತ್ರದ ಹೀರೋ ಸಮರ್ಥ್ ಮತ್ತು ಹೀರೋಯಿನ್ ಧನ್ಯ ಅವರಿಗೆ ಚಿತ್ರದಿಂದ ಯಶಸ್ಸು ಸಿಗಲಿ. ಈ ಶೀರ್ಷಿಕೆ ಹೆಸರಿನಲ್ಲಿ ಮೂವತ್ತು ವರ್ಷಗಳ ಹಿಂದೆ ಚಿತ್ರ ತೆರೆಕಂಡು ಯಶಸ್ಸು ಆಗಿತ್ತು. ಈಗ ಮತ್ತೆ ಬೆಳ್ಳಿಕಾಲುಂಗುರ ತೆರೆಯ ಮೇಲೆ ಬರಲು ಸಿದ್ಧತೆ ನಡೆಯುತ್ತಿದೆ ಎಂದರು.

ಮುಹೂರ್ತ ಸಮಾರಂಭದಲ್ಲಿ ಇಡೀ ರಾಜ್ ಕುಮಾರ್ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಚಿತ್ರಕ್ಕೆ ಸಾ.ರಾ.ಗೋವಿಂದ್ ಅವರು ಬಂಡವಾಳ ಹೂಡುತ್ತಿದ್ದು ಎಚ್.ವಾಸು ನಿರ್ದೇಶನ ಮಾಡುತ್ತಿದ್ದಾರೆ.