ಪತಿ ಪತ್ನಿಯ ಸಂಬಂಧವೇ ಇರಲಿ ಅಥವಾ ಪ್ರೇಮಿಗಳೇ ಇರಲೀ, ಪ್ರತಿಯೊಂದು ಸಂಬಂಧದಲ್ಲಿ ಇಬ್ಬರ ನಡುವಿನ ತಿಳುವಳಿಕೆ ಹಾಗೂ ತಪ್ಪುಗ್ರಹಿಕೆಯಿಂದಾಗಿಯೇ ಹೆಚ್ಚಿನ ಸಂಸಾರಗಳು, ಸಂಬಂಧಗಳು ಹಾಳಾಗುವುದು. ನಿಮ್ಮ ಸಂಗಾತಿಯನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳದೇ ಇದ್ದಾಗ ಉತ್ತಮ ಸಂಬಂಧದಲ್ಲಿ ಕಹಿ ಹಿಂಡುವುದು.
ಕೆಲವೊಮ್ಮೆ ನೀವು ಅವರನ್ನು ಅರ್ಥಮಾಡಿಕೊಳ್ಳುವುದಿಲ್ಲ, ಕೆಲವೊಮ್ಮೆ ಅವರು ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ. ಹಾಗಾಗಿ ನಿಮ್ಮ ಸಂಗಾತಿಯಲ್ಲಿ ನಿಮ್ಮ ಬಗೆಗಿನ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವುದು ಬಹಳ ಮುಖ್ಯ. ಇಲ್ಲವಾದರೆ ಸಂಬಂಧ ಹಾಳಾಗುವುದು ಖಂಡಿತ. ನಿಮ್ಮ ಸಂಬಂಧವನ್ನು ಸರಿಪಡಿಸಲು ಈ ಟಿಪ್ಸ್ಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸಬಹುದು.
ಸಂಗಾತಿಯ ಫೀಲಿಂಗ್ ಅರ್ಥಮಾಡಿಕೊಳ್ಳಿ
ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಪ್ರತಿಯೊಬ್ಬರ ವಿಧಾನವು ವಿಭಿನ್ನವಾಗಿರುತ್ತದೆ. ಕೆಲವರು ವಿಪರೀತ ಪ್ರೀತಿ ತೋರಿಸಿದರೆ ಇನ್ನೂ ಕೆಲವರು ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ. ಅನೇಕ ಬಾರಿ ಗಂಡ-ಹೆಂಡತಿ ತಮ್ಮ ಸಂಗಾತಿ ತಮ್ಮನ್ನು ಪ್ರೀತಿಸುವುದಿಲ್ಲ ಎಂದು ಭಾವಿಸುತ್ತಾರೆ ಹಾಗಾಗಿ ಈ ತಪ್ಪು ತಿಳುವಳಿಕೆ ಹೆಚ್ಚುತ್ತಲೇ ಹೋಗುತ್ತದೆ.
ಮೊದಲಿಗೆ ನಿಮ್ಮ ಸಂಗಾತಿಯ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಿ. ಅವರು ನಿಮ್ಮನ್ನು ಯಾವುದೇ ವಿಷ್ಯಕ್ಕೆ ತಪ್ಪು ತಿಳಿದಿದ್ದರೆ ಅವರ ಬಳಿ ಮಾತನಾಡಿ ಅವರ ತಪ್ಪು ಗ್ರಹಿಕೆಯನ್ನು ದೂರವಾಗಿಸಿ. ನಿಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ಇರುವ ಭಾವನೆಗಳನ್ನು ತಿಳಿಸಿ. ನಿಮ್ಮ ಸಂಗಾತಿಯು ನಿಮ್ಮನ್ನು ಪ್ರೀತಿಸುತ್ತಿದ್ದರೆ, ಅವರ ಭಾವನೆಗಳನ್ನು ಗೌರವಿಸಿ ಮತ್ತು ಯಾವಾಗಲೂ ಗಾಸಿಪ್ ಮಾಡಬೇಡಿ.
ನಿಮ್ಮ ಅಹಂಕಾರವನ್ನು ಬದಿಗಿಡಿ
ಹೆಚ್ಚಿನ ಸಂಬಂಧಗಳು ಹಾಳಾಗುವುದು ಅವರ ಒಳಗಿರುವ ಅಹಂಕಾರದ ಕಾರಣದಿಂದ. ಪತಿ-ಪತ್ನಿ ಯಾವುದೇ ವಿಷ್ಯಕ್ಕೆ ಗಲಾಟೆ ಮಾಡಿದ್ದರೂ ಅದನ್ನು ಮಾತಾಡಿ ಬಗೆಹರಿಸಬಹುದು, ಇಲ್ಲವಾದರೆ ಪರಸ್ಪರ ಕ್ಷಮೆಯನ್ನು ಕೇಳಬಹುದು. ಅದನ್ನು ಬಿಟ್ಟು ಕ್ಷಮೆ ಕೇಳಲು ನಿಮ್ಮ ಮನಸ್ಸು ಒಪ್ಪದಿದ್ದರೂ ನಿಮ್ಮ ಅಹಂನ್ನು ಬದಿಗಿಟ್ಟು ಕ್ಷಮೆ ಕೇಳಿ.
ಒಂದು ಕ್ಷಮೆ ಕೇಳುವುದರಿಂದ ನಿಮ್ಮ ನಡುವಿನ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ. ಒಂದು ವೇಳೆ ಇಬ್ಬರಲ್ಲಿ ಯಾರೋಬ್ಬರೂ ಕ್ಷಮೆ ಕೇಳದಿದ್ದರೆ ಸಣ್ಣ ವಿಷ್ಯ ದೊಡ್ಡದಾಗುತ್ತಾ ಎರಡು ಮನಸುಗಳ ನಡುವೆ ಅಂತರ ಹೆಚ್ಚುತ್ತದೆ. ನಿಮ್ಮ ಸಂಗಾತಿಯನ್ನು ನೀವು ನಿಜವಾಗಿಯೂ ಪ್ರೀತಿಸಿದಾಗ, ನಿಮ್ಮ ಅಹಂಕಾರಕ್ಕೆ ಅಡ್ಡಿಯಾಗಲು ಬಿಡಬೇಡಿ, ಇಲ್ಲದಿದ್ದರೆ ಅವರ ಮನಸ್ಸಿನಲ್ಲಿ ತಪ್ಪು ತಪ್ಪುಗ್ರಹಿಕೆಗಳು ಪ್ರಾರಂಭವಾಗುತ್ತವೆ.
ಕಮೀಟ್ಮೆಂಟ್ನ್ನು ಗಂಭೀರವಾಗಿ ತೆಗೆದುಕೊಳ್ಳಿ
ಅನೇಕ ದಂಪತಿಗಳು ಮದುವೆಯ ಮೊದಲು ಬದ್ಧರಾಗಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಸಂಗಾತಿಯ ಮನಸ್ಸಿನಲ್ಲಿ ವಿಭಿನ್ನ ವಿಷಯಗಳು ಬರುತ್ತವೆ ಮತ್ತು ಈ ತಪ್ಪು ತಿಳುವಳಿಕೆಯಿಂದಾಗಿ, ಸಂಬಂಧವನ್ನು ಮುರಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮತ್ತೊಂದೆಡೆ, ಮದುವೆಯ ನಂತರ ಗಂಡ ಮತ್ತು ಹೆಂಡತಿ ಪರಸ್ಪರ ಸಂಪೂರ್ಣವಾಗಿ ಬದ್ಧರಾಗಿರದಿದ್ದರೆ ನಂತರ ಇಬ್ಬರ ನಡುವೆ ತಪ್ಪು ತಿಳುವಳಿಕೆಗಳು ಹೆಚ್ಚಾಗುತ್ತವೆ.
ನೀವು ಪರಸ್ಪರ ಬದ್ಧರಾಗಿಲ್ಲದಿದ್ದರೆ ಇಬ್ಬರ ನಡುವೆ ಅನುಮಾನವನ್ನು ಹುಟ್ಟುಹಾಕುತ್ತದೆ. ಇದರಿಂದಾಗಿ ಒಬ್ಬರು ಇನ್ನೊಬ್ಬರ ಮೊಬೈಲ್ನ್ನು ಪರಿಶೀಲಿಸಲು ಮುಂದಾಗುತ್ತಾರೆ. ನಿಮ್ಮ ವಿಭಿನ್ನ ನಡವಳಿಕೆಯು ನಿಮ್ಮ ಸಂಗಾತಿಯನ್ನು ಅನುಮಾನಿಸಲು ಒತ್ತಾಯಿಸುತ್ತದೆ. ನಿಮ್ಮ ಸಂಗಾತಿಯ ಬಗ್ಗೆ ಗಂಭೀರವಾಗಿರುವುದು, ಅವರ ಭಾವನೆಗಳನ್ನು ಗೌರವಿಸುವುದು ಮುಖ್ಯ. ನೀವು ಸಿಂಗಲ್ ಆಗಿದ್ದಾಗಿನ ಜೀವನವೇ ಬೇರೆ, ಮದುವೆಯಾದ ನಂತರ ಜೀವನವೇ ಬೇರೆಯಾಗಿರುತ್ತದೆ. ಅದನ್ನು ಒಪ್ಪಿಕೊಳ್ಳಲು ಸಿದ್ಧರಾಗಿ.
ಜವಾಬ್ದಾರಿಗಳಿಂದ ದೂರ ಸರಿಯಬೇಡಿ
ವೈವಾಹಿಕ ಜೀವನದಲ್ಲಿ, ಪತಿ ಮತ್ತು ಹೆಂಡತಿ ಇಬ್ಬರೂ ತಮ್ಮದೇ ಆದ ಜವಾಬ್ದಾರಿಗಳನ್ನು ಹೊಂದಿರುತ್ತಾರೆ, ಅವರು ಅದನ್ನು ಪೂರೈಸಲು ಹಿಂಜರಿಯಬಾರದು. ನಿಮ್ಮ ಜವಾಬ್ದಾರಿಯಿಂದ ನೀವು ಓಡಿಹೋಗಲು ಪ್ರಾರಂಭಿಸಿದಾಗ, ನಿಮ್ಮ ಸಂಗಾತಿಯು ನೀವು ಹೊರಗೆ ಅನೈತಿಕ ಸಂಬಂಧವನ್ನು ಹೊಂದಿದ್ದೀರಿ ಎಂದು ಭಾವಿಸಲು ಪ್ರಾರಂಭಿಸುತ್ತಾರೆ.
ಅದಕ್ಕಾಗಿ ಆರಾಮವಾಗಿ ಕುಳಿತು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ. ಯಾವುದೇ ಜವಾಬ್ದಾರಿಯು ಅವರ ಮೇಲೆ ಹೊರೆಯಾಗುತ್ತಿದೆಯೇ ಎಂದು ಅವರನ್ನು ಕೇಳಿ. ಏಕೆಂದರೆ ಪ್ರತಿಯೊಂದು ವಿಷಯಕ್ಕೂ ಹಲವಾರು ಕಾರಣಗಳಿರಬಹುದು. ನಿಮ್ಮ ನಡುವೆ ತಪ್ಪು ತಿಳುವಳಿಕೆ ಬಾರದಂತೆ ನಿಮ್ಮ ಕರ್ತವ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.