ಇಂದಿನ ನಿಮ್ಮ ದಿನ ಹೇಗಿರಲಿದೆ ಎಂಬುದನ್ನು ರಾಶಿ ಭವಿಷ್ಯ ನೋಡಿ ತಿಳಿದುಕೊಳ್ಳಿ.
ಮೇಷ ರಾಶಿ
ನಿಮ್ಮ ಸ್ವಾರ್ಥಕ್ಕಾಗಿ ಆಲೋಚನೆ ಮಾಡಿ, ಇತರರ ಎದುರು ಸಣ್ಣವರಾಗುವ ಸಾಧ್ಯತೆ ಇದೆ. ಇದರಿಂದ ಮುಜುಗರ ಎದುರಿಸುವಂತಾಗುತ್ತದೆ. ಸಣ್ಣ ಸುಳಿವು ಸಹ ನೀಡದೆ ಉದ್ಯೋಗ ಸ್ಥಳದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಹೊಸ ಸವಾಲನ್ನು ಎದುರಿಸಬೇಕಾಗುತ್ತದೆ.
ವೃಷಭ ರಾಶಿ
ಡೇರಿ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸಲು ಮಾತುಕತೆ ನಡೆಸಲಿದ್ದೀರಿ. ದೀರ್ಘ ಕಾಲದ ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ಬಂಧುಗಳು ಸಹಾಯ ಕೇಳಿಕೊಂಡು ಬರಬಹುದು.
ಮಿಥುನ ರಾಶಿ
ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದ ಕೆಲಸ- ಕಾರ್ಯಗಳನ್ನು ಒಂದೊಂದಾಗಿ ಮಾಡಿ, ಮುಗಿಸಲಿದ್ದೀರಿ. ಯಾರದೋ ಬಲವಂತಕ್ಕೆ ನಿಮಗೆ ಇಷ್ಟವಿಲ್ಲದ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ದೇಹಾಯಾಸದಿಂದ ಆರೋಗ್ಯದ ಮೇಲೆ ಪರಿಣಾಮ ಆಗಲಿದೆ. ಒಪ್ಪಂದ ದಂತೆ ನಿಮಗೆ ಬರಬೇಕಾದ ಹಣವನ್ನು ನೀಡಬೇಕಾದವರು ಸತಾಯಿಸುತ್ತಾರೆ.
ಕರ್ಕಾಟಕ ರಾಶಿ
ಸ್ಥೂಲಕಾಯದ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಾಲಗಾರರ ಬಾಧೆ ಹೆಚ್ಚಾಗುವ ಸಾಧ್ಯತೆ ಇದೆ. ಮೊದಲ ಉತ್ಸಾಹದಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ಕಷ್ಟವಾಗಲಿದೆ. ಮೇಲಧಿಕಾರಿಗಳಿಂದ ಕಿರುಕುಳ ಆಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ನೆರವು ಅಗತ್ಯ ಬಿದ್ದಲ್ಲಿ ಪಡೆದುಕೊಳ್ಳಿ.
ಸಿಂಹ ರಾಶಿ
ಭೂಮಿ, ಆಸ್ತಿ ಖರೀದಿ ವ್ಯವಹಾರ ಮಾಡಬೇಕು ಅಂತಿರುವವರು ಸೂಕ್ತವಾದ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಉಳಿತಾಯದ ಹಣವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸ್ಪಷ್ಟತೆ ಇರಲಿ. ನಿಮ್ಮ ನಿರ್ಧಾರವನ್ನು ಇತರರು ಪ್ರಶ್ನಿಸಿದಲ್ಲಿ ಅವರ ಮೇಲೆ ಸಿಟ್ಟಾಗುವ ಬದಲಿಗೆ ಸರಿ- ತಪ್ಪುಗಳ ವಿವೇಚನೆ ಮಾಡಿ.
ಕನ್ಯಾ ರಾಶಿ
ಷೇರು ವ್ಯವಹಾರ ಮಾಡುತ್ತಿರುವವರಿಗೆ ಬಹಳ ಒತ್ತಡದ ದಿನವಾಗಿರುತ್ತದೆ. ಬೇರೆಯವರಿಂದ ಸಾಲ ಪಡೆದು ಹೂಡಿಕೆ ಮಾಡಿದ್ದಲ್ಲಿ, ಇಂತಿಷ್ಠೇ ರಿಟರ್ನ್ಸ್ ಕೊಡಿಸುವ ಭರವಸೆ ನೀಡಿದ್ದಲ್ಲಿ ಮನಸ್ತಾಪ ಅಥವಾ ಭಿನ್ನಾಭಿಪ್ರಾಯ ಉದ್ಭವಿಸುವ ಸಾಧ್ಯತೆ ಇದೆ. ರಕ್ತದೊತ್ತಡದ ಸಮಸ್ಯೆ ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು.
ತುಲಾ ರಾಶಿ
ಲೇವಾದೇವಿ ವ್ಯವಹಾರ ಮಾಡುತ್ತಿರುವವರು ಈಗ ಆಗುತ್ತಿರುವ ಬೆಳವಣಿಗೆಯಿಂದ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮಗಳ ಕಡೆಗೆ ಕಣ್ಣು ನೆಟ್ಟಿರಬೇಕು. ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ಕಿರಿಯ ಸಹೋದ್ಯೋಗಿಗಳಿಂದ ಮುಜುಗರದ ಸನ್ನಿವೇಶ ಎದುರಿಸುವಂತೆ ಆಗುತ್ತದೆ.
ವೃಶ್ಚಿಕ ರಾಶಿ
ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಬಹಳ ಸವಾಲುಗಳು ಎದುರಾಗುತ್ತವೆ. ನಿಮ್ಮ ಬದ್ಧತೆ, ನಿಷ್ಠೆ, ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗುತ್ತದೆ. ಸರ್ಕಾರದ ಆಯಕಟ್ಟಿನ ಹುದ್ದೆಯಲ್ಲಿರುವವರು ಇತರರ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ. ದೂರ ಪ್ರಯಾಣ ಮಾಡುವಂತಿದ್ದರೆ ಸೂಕ್ತ ಸಿದ್ಧತೆ ಮಾಡಿಕೊಳ್ಳಿ.
ಧನುಸ್ಸು ರಾಶಿ
ಹೇಳಿದ್ದೇ ಹೇಳಿ, ಕೇಳಿದ್ದೇ ಕೇಳಿ ನಿಮಗೆ ಹಿಂಸೆ ಮಾಡುವಂತೆ ಮನೆಯಲ್ಲಿ ನಡೆದುಕೊಳ್ಳುತ್ತಾರೆ. ಹಣಕಾಸಿನ ವಿಚಾರದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ವೃತ್ತಿಪರರಿಗೆ ಅನುಭವಿಗಳ ಸಹಾಯದ ಅಗತ್ಯ ಬರಬಹುದು.ನೀರಿನಿಂದ ಎಚ್ಚರಿಕೆ ವಹಿಸಬೇಕು. ನೀವು ಮಾಡಿದ್ದೆಲ್ಲ ಸರಿ ಎಂಬ ಭಾವನೆಯಿಂದ ನಷ್ಟ ಅನುಭವಿಸುವಂತಾಗುತ್ತದೆ. ಆದ್ದರಿಂದ ಗುರು- ಹಿರಿಯರ ಮಾರ್ಗದರ್ಶನ ಪಡೆದು, ಮುಂದಕ್ಕೆ ಹೆಜ್ಜೆ ಇಡಿ. ಭೂಮಿ ಖರೀದಿ ವ್ಯವಹಾರ ಪ್ರಗತಿ ಇದ್ದಲ್ಲಿ ಕಮಿಷನ್ ವಿಚಾರಕ್ಕೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಆಗಬಹುದು.
ಮಕರ ರಾಶಿ
ಒಲ್ಲದ ವಿಚಾರಗಳು, ವ್ಯಕ್ತಿಗಳ ಮಧ್ಯೆ ಸಿಲುಕಿ ನಾನಾ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಮನೆ ಕಟ್ಟುವುದು, ಸೈಟ್ ಖರೀದಿಸುವುದು ಇಂಥ ವಿಚಾರಗಳು ಗೊಂದಲದ ಗೂಡಾಗುವ ಸಾಧ್ಯತೆ ಇದೆ. ಯಾವುದೇ ಖರೀದಿ, ಹೂಡಿಕೆಯಾದರೂ ಪೂರ್ತಿ ಸಾಲ ಮಾಡುವುದು ಒಳ್ಳೆಯದಲ್ಲ.
ಕುಂಭ ರಾಶಿ
ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ನಾನಾ ಅವಕಾಶಗಳು ಕಾಣಿಸಿಕೊಳ್ಳುತ್ತವೆ. ಆದರೆ ಆಯ್ಕೆ ವಿಚಾರದಲ್ಲಿ ಸ್ಪಷ್ಟತೆ ಬಹಳ ಮುಖ್ಯ. ನಿಮ್ಮದೇ ನೇತೃತ್ವದಲ್ಲಿ ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ. ಸ್ನೇಹಿತರು, ಬಂಧುಗಳು ಹಣಕಾಸಿನ ನೆರವು ಕೇಳಿಕೊಂಡು ಬರಬಹುದು.
ಮೀನ ರಾಶಿ
ಈ ಹಿಂದಿನ ನಿಮ್ಮ ಪರಿಶ್ರಮಕ್ಕೆ ಫಲಿತಾಂಶ ದೊರೆಯುವ ಸಮಯ ಇದು. ಸಾಮರ್ಥ್ಯವನ್ನು ಮೆಚ್ಚಿಕೊಂಡು, ಮೇಲಧಿಕಾರಿಗಳು ಹೆಚ್ಚಿನ ಜವಾಬ್ದಾರಿಗಳನ್ನು ವಹಿಸುವ ಸಾಧ್ಯತೆ ಇದೆ. ಇದರ ಜತೆಗೆ ವರ್ಗಾವಣೆ, ಬಡ್ತಿ ಹಾಗೂ ಪರಸ್ಥಳ ವಾಸದ ವಿಚಾರವಾಗಿ ಮನೆಯಲ್ಲಿ ಚರ್ಚೆ ಆಗಲಿದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.