ದೇವಸ್ಥಾನಗಳಿಗೆ ಸಂಬಂಧಿಸಿದ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾಗುತ್ತಿರುವ ಪ್ರಕರಣಗಳಿಂದಲೇ ನ್ಯಾಯಾಲಯಗಳು ತುಂಬಿ ಹೋಗುತ್ತಿರುವುದಕ್ಕೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿತು.
[ಎಂ ಶೇಖರ್ ಮತ್ತು ಜಿಲ್ಲಾಧಿಕಾರಿ ನಡುವಣ ಪ್ರಕರಣ].
ದೇವಸ್ಥಾನಗಳು ಭಕ್ತರ ಪಾಲಿಗೆ ಶಾಂತಿ ಅರಸುವ ತಾಣಗಳಾಗಿದ್ದು, ದುರದೃಷ್ಟವಶಾತ್ ಅನೇಕ ಸಂದರ್ಭಗಳಲ್ಲಿ, ಅವು ಕಾನೂನು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಪರಿಣಾಮ, ದೇಗುಲಗಳ ಸಂಪೂರ್ಣ ಉದ್ದೇಶ ಕಾಣೆಯಾಗಿದೆ ಎಂದು ನ್ಯಾ. ಎನ್ ಆನಂದ ವೆಂಕಟೇಶ್ ಅಭಿಪ್ರಾಯಪಟ್ಟರು.
“ಅಂತಹ ಸಂದರ್ಭಗಳಲ್ಲಿ, ಆ ರೀತಿಯ ದೇವಾಲಯ ಮುಚ್ಚುವುದು ಉತ್ತಮ . ಇದರಿಂದಾಗಿ ಅಂತಹ ಪ್ರದೇಶದಲ್ಲಿ ಶಾಂತಿ, ಸಹಜ ಸ್ಥಿತಿ ಮತ್ತೆ ನೆಲೆಸುತ್ತದೆ” ಎಂದ ನ್ಯಾಯಾಲಯ “ದೇವಾಲಯ ಮುಚ್ಚುವುದರಿಂದ ಶಾಂತಿ ನೆಲೆಸುತ್ತದೆ ಎಂಬುದು ವೈರುಧ್ಯದ ಸಂಗತಿ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.
ತಮ್ಮ ಕುಲದೇವತೆಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ತೆರಳಲಿರುವ ಅರ್ಜಿದಾರರು ಹಾಗೂ ಇತರರಿಗೆ ರಕ್ಷಣೆ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ವ್ಯಕ್ತಿಗಳು ಪ್ರತಿಪಾದಿಸುವ ಪೂಜಾ ಹಕ್ಕಿನಿಂದಾಗಿ ದೇವಸ್ಥಾನದಲ್ಲಿ ಘರ್ಷಣೆಗಳು ಏರ್ಪಡುತ್ತವೆ.
ದೇಗುಲದ ಆಡಳಿತವನ್ನು ಸೂಕ್ತ ವ್ಯಕ್ತಿಗೆ ವಹಿಸಿದರೆ ಅಹಮಿನ ಘರ್ಷಣೆ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ ಯಾರಲ್ಲೂ ಮೇಲರಿಮೆ ಬೆಳೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಅಂತಹ ವ್ಯಕ್ತಿಯ ನೇಮಕಾತಿ ಹತ್ತು ದಿನಗಳಲ್ಲಿ ಪೂರ್ಣಗೊಳ್ಳಬೇಕು ಮತ್ತು ನೇಮಕಾತಿ ಬಳಿಕವೇ ದೇಗುಲದ ಬಾಗಿಲು ತೆರೆಯಬೇಕು ಎಂದು ಪೀಠ ಸೂಚಿಸಿತು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.