ಮನೆ ರಾಜ್ಯ ಮುರುಘಾ ಮಠದ ಪ್ರಕರಣ ‘ಸಿಬಿಐ’ಗೆ ಪ್ರಕರಣ ವಹಿಸಲು ಒತ್ತಾಯ

ಮುರುಘಾ ಮಠದ ಪ್ರಕರಣ ‘ಸಿಬಿಐ’ಗೆ ಪ್ರಕರಣ ವಹಿಸಲು ಒತ್ತಾಯ

0

ಮೈಸೂರು(Mysuru): ಮುರುಘಾ ಶರಣರ ವಿರುದ್ಧದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ‘ಮೈಸೂರು ಕನ್ನಡ ವೇದಿಕೆ’ ಆಗ್ರಹಿಸಿದೆ.

ಜಿಲ್ಲಾಧಿಕಾರಿ ಕಚೇರಿ ಸಮೀಪ ಶುಕ್ರವಾರ ಜಮಾಯಿಸಿದ ವೇದಿಕೆಯ ಸದಸ್ಯರು ಗೃಹ ಇಲಾಖೆ, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ ಮಾತನಾಡಿ, ‘ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಚುನಾವಣೆ ಕಾರಣಕ್ಕೆ ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ತನಿಖೆಯನ್ನು ಸಿಬಿಐಗೆ ವಹಿಸಿದರೆ ಸಂತ್ರಸ್ತ ಬಾಲಕಿಯರಿಗೆ ನ್ಯಾಯ ಸಿಗಲಿದೆ  ಎಂದು ಹೇಳಿದರು.

ಮುಖಂಡರಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಮಾಲಿನಿ, ಮಹದೇವಸ್ವಾಮಿ, ಅರವಿಂದ್, ರಾಧಾಕೃಷ್ಣ, ಗೋವಿಂದರಾಜ್‌, ಸುನಿಲ್‌ ಇದ್ದರು.