ಮನೆ ರಾಜ್ಯ ಮೈಸೂರು: ಕಾಮಾಕ್ಷಿ ಆಸ್ಪತ್ರೆಯಲ್ಲಿ ಓಣಂ ಆಚರಣೆ

ಮೈಸೂರು: ಕಾಮಾಕ್ಷಿ ಆಸ್ಪತ್ರೆಯಲ್ಲಿ ಓಣಂ ಆಚರಣೆ

0

ಮೈಸೂರು(Mysuru): ಕುವೆಂಪು ನಗರದಲ್ಲಿರುವ ಕಾಮಾಕ್ಷಿ ಆಸ್ಪತ್ರೆ ಆವರಣದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಹೂಗಳಿಂದ ಆಕರ್ಷಕ ರಂಗೋಲಿ ಬಿಡಿಸಿ ಓಣಂ ಕಾರ್ಯಕ್ರಮವನ್ನು ಇಂದು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿ ಮಹೇಶ್ ಶೆಣೈ, ಓಣಂ ಹಬ್ಬದ ಆಚರಣೆಯ ಮೂಲಕ ಸಮಾಜವನ್ನು ಬೆಸೆಯುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವುದು ಕೇರಳ ರಾಜ್ಯಕ್ಕೆ ಹೆಮ್ಮೆಯ ವಿಚಾರ. ಕೇರಳದವರು ಪ್ರಪಂಚದ ಯಾವುದೇ ಮೂಲೆಯಲ್ಲೂ ಕಾಣಸಿಗುತ್ತಾರೆ. ಧಾರ್ಮಿಕ, ದೇವಾಲಯಗಳ ನಾಡು ಕೂಡ ಹೌದು ಎಂದರು.

ಓಣಂ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ನಾನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಆಸ್ಪತ್ರೆಯ ಅಶೋಕ್ ಶೆಣೈ, ಡಾ.ರೂಪಾ ಪ್ರಕಾಶ್, ಡಾ.ಉಮೇಶ್ ಕಾಮತ್, ಡಾ.ಪ್ರಸನ್ನಕುಮಾರ್, ಡಾ.ವಿಜಯ್ ಕುಮಾರ್, ಡಾ.ಪುಷ್ಪಲತಾ, ಡಾ.ಧನ್ಯ, ಡಾ.ಜನಾರ್ಧನ್, ಡಾ.ರವಿಕುಮಾರ್, ಡಾ.ನಳಿನಿ, ಡಾ.ಶ್ರುತಿ, ಡಾ.ದಿವ್ಯಾ ಇದ್ದಾರೆ.