ಮನೆ ಅಪರಾಧ ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಖಾತೆ ಬದಲಾವಣೆ ಜಂಟಿ ಆಯುಕ್ತ

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಖಾತೆ ಬದಲಾವಣೆ ಜಂಟಿ ಆಯುಕ್ತ

0

ಬೆಂಗಳೂರು(Bengaluru): ಆಪ್ತ ಸಹಾಯಕನ ಮೂಲಕ 4 ಲಕ್ಷ ರೂ. ಲಂಚ ಪಡೆಯುತ್ತಿದ್ದ ಬಿಬಿಎಂಪಿ ಖಾತೆ ಬದಲಾವಣೆ ಜಂಟಿ ಆಯುಕ್ತ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಬಿಬಿಎಂಪಿ ಪಶ್ಚಿಮ ವಿಭಾಗ ಜಂಟಿ ಆಯುಕ್ತ ಶ್ರೀನಿವಾಸ್, ಪಿಎ ಉಮೇಶ್ ಮೂಲಕ ಹಣ ಪಡೆಯುತ್ತಿದ್ದಾಗ ಬಂಧನ ಮಾಡಲಾಗಿದೆ. ಮಂಜುನಾಥ್​ ಎಂಬುವರ ಬಳಿ ಸೈಟುಗಳ ಖಾತೆ ಬದಲಾವಣೆಗೆ 12 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಮಲ್ಲೇಶ್ವರಂ ಬಿಬಿಎಂಪಿ ಕಚೇರಿ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಎಸ್.ಪಿ ಶ್ರೀನಾಥ್ ಮಹದೇವ ಜೋಶಿ, ಜಂಟಿ ಆಯುಕ್ತ ಮತ್ತು ಆಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆರೋಗ್ಯ ತಪಾಸಣೆ ಬಳಿಕ ಜಡ್ಜ್​​ ಮುಂದೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.