ಮನೆ ಸುದ್ದಿ ಜಾಲ ವಿಶ್ರಾಂತ ಕುಲಪತಿಗಳಿಗೆ ಸನ್ಮಾನ

ವಿಶ್ರಾಂತ ಕುಲಪತಿಗಳಿಗೆ ಸನ್ಮಾನ

0

ಮೈಸೂರು(Mysuru): ವಿಶ್ರಾಂತ ಕುಲಪತಿಗಳ ಒಕ್ಕೂಟದ ಸಭೆಯಲ್ಲಿ ಶಿಕ್ಷಕರ ದಿನದ ನೆನಪಿಗೆ ಮೂವರು ವಿಶ್ರಾಂತ ಕುಲಪತಿಗಳನ್ನು ಇಂದು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಮೈಸೂರು ವಿಶ್ವ ವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ ವಿಶ್ರಾಂತ ಕುಲಪತಿಗಳಾದ ಪ್ರೊ. ಬಲವೀರರೆಡ್ಡಿ, ಪ್ರೊ.ಎನ್.ಎಸ್. ರಾಮೇಗೌಡ, ಪ್ರೊ.ಎಸ್.ಎನ್. ಹೆಗ್ಡೆ ಅವರನ್ನು ಒಕ್ಕೂಟದ ಅಧ್ಯಕ್ಷ ಪ್ರೊ.ಕೆ.ಎಸ್. ರಂಗಪ್ಪ ಸನ್ಮಾನಿಸಿದರು.
ಒಕ್ಕೂಟದ ಡಾ.ಚಂದ್ರಶೇಖರಶೆಟ್ಟಿ, ಪ್ರೊ. ಇ.ಟಿ.ಪುಟ್ಟಯ್ಯ,ಪ್ರೊ. ಎಸ್.ಆರ್.ನಿರಂಜನ, ಪ್ರೊ.ಪದ್ಮ ಶೇಖರ್, ಪ್ರೊ. ಬಿ.ಜಿ.ಸಂಗಮೇಶ್ವರ,ಪ್ರೊ. ಸರ್ವಮಂಗಳಾ ಶಂಕರ್ ಮತ್ತಿತರರು ಹಾಜರಿದ್ದರು.