ಮೈಸೂರು(Mysuru): ಮೈಸೂರು ದಸರಾ ಮಹೋತ್ಸವ-2022 ಹಾಗೂ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಮೈಸೂರು ದಸರಾ ಪ್ರಯುಕ್ತ ಅರಮನೆ ವೇದಿಕೆಯಲ್ಲಿ 2022 ರ ಸೆಪ್ಟಂಬರ್ 26 ರಿಂದ ಅಕ್ಟೋಬರ್ 3 ರವರೆಗೆ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೆ.26 ರ ಕಾರ್ಯಕ್ರಮಗಳು: ಸಂಜೆ 5:30 ರಿಂದ 6:00 ಗಂಟೆಯವರೆಗೆ ನಾದಸ್ವರ ಯದುನಾಥ್ ಮತ್ತು ಗುರುರಾಜ್ ತಂಡದವರಿಂದ ವೀರಭದ್ರ ಕುಣಿತ- ಕಿರಾಳು ಮಹೇಶ ಮತ್ತು ತಂಡದವರಿಂದ, ಸಂಜೆ 6 ಗಂಟೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಎಸ್ ಬೊಮ್ಮಾಯಿರವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭ,. ಸಂಜೆ 7 ರಿಂದ 8 ಗಂಟೆವರೆಗೆ ಅಮೃತ ಭಾರತಿಗೆ ಕನ್ನಡದಾರತಿ ಸಪ್ತಸ್ವರ ಆರ್ಟ್ಸ್ ಮತ್ತು ಕ್ರಿಯೇಷನ್ ಬೆಂಗಳೂರು ರವರಿಂದ ನೃತ್ಯರೂಪಕ, ಸಂಜೆ 8 ರಿಂದ 9:30 ವರೆಗೆ ಹೆಚ್.ಆರ್. ಲೀಲಾವತಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ.
ಸೆ. 27- ಸಂಜೆ 5:30 ರಿಂದ 6:00 ಕಂಸಾಳೆ ಮಹೇಶ್ ಮತ್ತು ತಂಡ ಅವರಿಂದ ಕಂಸಾಳೆ, 6 ರಿಂದ 7 ಇಂದೂ ನಾಗರಾಜು ಮತ್ತು ಲಕ್ಷ್ಮೀನಾಗರಾಜು ತಂಡದಿAದ ಭಕ್ತಿ ಸಂಗೀತ, 7 ರಿಂದ 8 ಲಯಾಭಿನಯ ಕಲ್ಚರಲ್ ಫೌಂಡೆಷನ್ ಅವರಿಂದ ನೃತ್ಯರೂಪಕ-ಲಲಿತಾರ್ಣವ ಹಾಗೂ 8 ರಿಂದ 9:30 ವಿದ್ವಾನ್ ಸಂದೀಪ್ ನಾರಾಯಣ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ.
2022 ರ ಸೆ- 28 ರಂದು ಸಂಜೆ 5:30 ರಿಂದ 6:00 ಗಂಟೆಯವರೆಗೆ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಸಿ.ರಾಮದಾಸ್ ಬೆಂಗಳೂರು ಅವರಿಂದ ಹಾರ್ಮೋನಿಯಂ, ಸಂಜೆ 6 ರಿಂದ 7 ಪಂಡಿತ ಗಣಪತಿ ಭಟ್ ಹಾಸಣಗಿ ಯಲ್ಲಾಪುರ ಅವರಿಂದ ದಾಸರ ಪದ, ಸಂಜೆ 7 ಗಂಟೆಯಿಂದ 8 ಕರ್ನಾಟಕ ಕಲಾ ಶ್ರೀ ಸತ್ಯನಾರಾಯಣರಾಜು ಮತ್ತು ತಂಡದವರಿAದ ಭರತನಾಟ್ಯ, ಸಂಜೆ 8 ರಿಂದ 9:30 ಗಂಟೆವರೆಗೆ ಉಸ್ತಾದ್ ಫಜಲ್ ಖುರೇಷಿ ಮುಂಬೈ ಅವರಿಂದ ತಬಲ ವಾದನ ಕಾರ್ಯಕ್ರಮ.
2020ರ ಸೆ- 29 ರಂದು ಸಂಜೆ 5:30 ರಿಂದ 6 ರವರೆಗೆ ಕರ್ನಾಟಿಕ್ ಮತ್ತು ಇಂಗ್ಲಿಷ್ ಬ್ಯಾಂಡ್ ಪೊಲೀಸ್ ಬ್ಯಾಂಡ್, ಸಂಜೆ 6 ರಿಂದ 7 ಗಂಟೆಯವರೆಗೆ ಪಂಡಿತ್ ವೆಂಕಟೇಶ್ ಕುಮಾರ್ ಧಾರವಾಡ ವಚನ ಗಾಯನ, ಸಂಜೆ 7 ರಿಂದ 8 ರವರೆಗೆ ಮಧುಲಿತ ಮಹೋಪಾತ್ರ ಮತ್ತು ತಂಡದವರಿAದ ಓಡಿಸ್ಸಿ ನೃತ್ಯ, ಸಂಜೆ 8 ರಿಂದ 9.30 ಗಂಟೆಯವರೆಗೂ ಚಕ್ರ ಫೋನಿಕ್ಸ್ ತಂಡ ಬೆಂಗಳೂರು, ವಿಶ್ವ ಸಂಗೀತ (ಕರ್ನಾಟಕ ವಾದ್ಯ ಸಂಗೀತಗಳ ಸಮ್ಮಿಲನ) ಕಾರ್ಯಕ್ರಮ.
2022 ರ ಸೆ- 30 ರಂದು ಸಂಜೆ 5:30 ರಿಂದ 6 ಗಂಟೆಯವರೆಗೆ ಜ್ಞಾನಮೂರ್ತಿ ಮತ್ತು ತಂಡ ದವರಿಂದ ಭಕ್ತಿ ಸಂಗೀತ, ಸಂಜೆ 6 ರಿಂದ 7 ಗಂಟೆಯವರೆಗೆ ಡಾ. ಸುಕನ್ಯಾ ಪ್ರಭಾಕರ್ ಮತ್ತು ತಂಡ ವಾಧ್ಯಗಳಲ್ಲಿ ಒಡೆಯರ ಕೃತಿಗಳು, ಸಂಜೆ 7 ರಿಂದ 8 ಗಂಟೆಯವರೆಗೂ ಕರ್ನಾಟಕ ಕಲಾಶ್ರೀ ರೂಪ ರಾಜೇಶ ಮತ್ತು ತಂಡ ಬೆಂಗಳೂರು ಕುಚುಪುಡಿ ನೃತ್ಯ, ಸಂಜೆ 8 ರಿಂದ 9.30 ಗಂಟೆಯವರೆಗೂ ವಿಧೂಷಿ ಕೌಶಿಕಿ ಚಕ್ರವರ್ತಿ ಕಲ್ಕತ್ತಾ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ.
2022ರ ಅಕ್ಟೋಬರ್ 1 ರಂದು ಪನ್ನಗಾ ವಿಜಯಕುಮಾರ್, ವೇದವ್ಯಾಸ ಸೇವಾ ಟ್ರಸ್ಟ್ ಅವರಿಂದ ಜಾನಪದ ಗಾಯನ, ಸಂಜೆ 6 ರಿಂದ 7 ಗಂಟೆಯವರೆಗೆ ಟಿ.ಎಸ್.ನಾಗಭರಣ, ಬೆನಕ ತಂಡ ಬೆಂಗಳೂರು ಅವರಿಂದ ರಂಗಗೀತೆಗಳು, ಸಂಜೆ 7 ರಿಂದ 8 ಗಂಟೆಯವರೆಗೂ ಪೊಲೀಸ್ ಬ್ಯಾಂಡ್ ಮಾಸ್ ಬ್ಯಾಂಡ್, ಸಂಜೆ 8 ರಿಂದ 9.30 ಗಂಟೆಯವರೆಗೂ ಮನೋ ಮ್ಯೂಸಿಕ್ ಲೈನ್ಸ್, ಬೆಂಗಳೂರು ಸಿತಾರ್ ಸಿಂಪೋನಿ.
2022ರ ಅ-2 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ, ಸಂಜೆ 6 ರಿಂದ 7 ಗಂಟೆಯವರೆಗೆ ಕಂಬದ ರಂಗಯ್ಯ ನೇತೃತ್ವದಲ್ಲಿ ವಿವಿಧ ಕಲಾವಿದರಿಂದ ಜನಪದ ಸಂಗೀತ, ಸಂಜೆ 7 ರಿಂದ 8 ಗಂಟೆಯವರೆಗೂ ಕಿರುತೆರೆ ಕಲಾವಿದರಾದ ರೂಪಿಕ ಮತ್ತು ವಂದನ ಸಾರಥ್ಯದಲ್ಲಿ ನೃತ್ಯರೂಪಕ ನವಶಕ್ತಿ ವೈಭವ, ಸಂಜೆ 8 ರಿಂದ 9.30 ಗಂಟೆಯವರೆಗೂ ಮನೋಜ್ ವಶಿಷ್ಠ ಮತ್ತು ಅರುಂಧತಿ ವಶಿಷ್ಠ ತಂಡದವರಿAದ ಸಂಗೀತ ವೈವಿಧ್ಯ.
2022ರ ಅ-3 ರಂದು ಸಂಜೆ 5:30 ರಿಂದ 6 ಗಂಟೆಯವರೆಗೆ ವಿಶೇಷ ವಿಕಲಚೇತನ ಕಲಾವಿದರಿಂದ ಕಾರ್ಯಕ್ರಮ, ಸಂಜೆ 6 ರಿಂದ 7 ಗಂಟೆಯವರೆಗೆ ಗಡುಬಗೆರೆ ಮುನಿರಾಜು ಅವರಿಂದ ಜನಪದ ಸಂಗೀತ, ಸಂಜೆ 7 ರಿಂದ 8 ಗಂಟೆಯವರೆಗೂ ಸ್ಥಳೀಯ ಕಲಾವಿದರಿಂದ ಪಾರಂಪರಿಕ ನೃತ್ಯ ಸಮ್ಮಿಲನ, ಸಂಜೆ 8 ರಿಂದ 9.30 ಗಂಟೆಯವರೆಗೂ ಭಜನ್ ಸಾಮ್ರಾಟ್ ಪದ್ಮಶ್ರೀ ಅನುಪ್ ಜಲೋಟ ಮುಂಬೈ ಅವರಿಂದ ಗಜಲ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.