ಮನೆ ಪ್ರವಾಸ ಮೈಸೂರಿನ ಈ ತಾಣಗಳ ಪ್ರವಾಸ ಮಾಡಿ

ಮೈಸೂರಿನ ಈ ತಾಣಗಳ ಪ್ರವಾಸ ಮಾಡಿ

0

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಸ್ತುತ ನವರಾತ್ರಿಯ ಸಂಭ್ರಮ ಮನೆಮಾಡಿದೆ. ನಾಡ ಹಬ್ಬ ದಸರಾವನ್ನು ಪ್ರತ್ಯೇಕವಾಗಿ ಮೈಸೂರಿನ ರಾಜ ಕುಟುಂಬದಲ್ಲಿ ವೈಭವಯುತವಾಗಿ ನಡೆಯುತ್ತದೆ. ಇಂತಹ ಅದ್ಭುತವನ್ನು ನೋಡಲು ದೇಶದ ನಾನಾ ಭಾಗಗಳಿಂದ ಮತ್ತು ವಿದೇಶಗಳಿಂದಲೂ ಪ್ರವಾಸಿಗರು ಭೇಟಿ ನೀಡುತ್ತಾರೆ.

ಮೈಸೂರಿನ ದಸರಾವನ್ನು ನೋಡಿ ಹಿಂದಿರುಗುವ ಮೊದಲು ಮೈಸೂರಿನ ಆಸುಪಾಸಿನಲ್ಲಿ ನೋಡಬೇಕಾದ ಹಲವಾರು ಪ್ರವಾಸಿ ತಾಣಗಳಿವೆ. ನೀವು ಅಂತಹ ತಾಣಗಳನ್ನು ತಪ್ಪದೇ ಕುಟುಂಬದ ಜೊತೆ ಸಂದರ್ಶಿಸಲೇ ಬೇಕು. ಹಾಗಾದರೆ ಮೈಸೂರಿನಿಂದ 100 ಕಿ.ಮೀ ಆಸುಪಾಸಿನ ಪ್ರೇಕ್ಷಣೀಯ ಸ್ಥಳಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

ಶ್ರೀರಂಗ ಪಟ್ಟಣ

ಮೈಸೂರಿನಿಂದ 19 ಕಿ.ಮೀ ಮತ್ತು ಮಂಡ್ಯದಿಂದ 26 ಕಿ.ಮೀ ದೂರದಲ್ಲಿರುವ ಶ್ರೀ ರಂಗಪಟ್ಟಣ ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಐತಿಹಾಸಿಕ ಸ್ಥಳದಲ್ಲಿ ಕಣ್ಮನ ಸೆಳೆಯುವ ಪ್ರವಾಸಿ ತಾಣಗಳಿವೆ. ಮೈಸೂರಿನ ದಸರಾ ನೋಡಿದ ಬಳಿಕ ಶ್ರೀರಂಗ ಪಟ್ಟಣದತ್ತ ಪ್ರವಾಸ ಬೆಳೆಸಿ.ಇಲ್ಲಿನ ಪ್ರಮುಖ ಪ್ರವಾಸ ಆಕರ್ಷಣೆಗಳು ಹೀಗಿವೆ.

ಶ್ರೀರಂಗನಾಥಸ್ವಾಮಿ ದೇವಾಲಯ: ಇಲ್ಲಿ ಮಹಾ ವಿಷ್ಣುವಿನ ಅವತಾರಗಳಲ್ಲಿ ಒಂದಾದ ಶ್ರೀರಂಗನಾಥಸ್ವಾಮಿ ದೇವಾಲಯವಿದೆ. ಆಲಯದ ಸುತ್ತ ಕಾವೇರಿ ನದಿ ಸುತ್ತವರೆದಿದ್ದು, ಆಹ್ಲಾದಕರವಾಗಿದೆ.

ದರಿಯಾ ದೌಲತ್ ಬಾಗ್: ಈ ಐತಿಹಾಸಿಕ ಸ್ಮಾರಕವು ಟಿಪ್ಪು ಸುಲ್ತಾನರ ಬೇಸಿಗೆ ಅರಮನೆಯಾಗಿತ್ತು. ಇದನ್ನು 1784 ರಲ್ಲಿ ನಿರ್ಮಿಸಲಾಯಿತು. ಅರಮನೆಯು ಉದ್ಯಾನವನ, ಹೂವಿನ ಹಾಸಿಗೆಗಳನ್ನು ಒಳಗೊಂಡಿದೆ.

ನಿಮಿಷಾಂಭ ದೇವಾಲಯ: ಶ್ರೀರಂಗ ಪಟ್ಟಣದಲ್ಲಿ ಮತ್ತೊಂದು ಪ್ರಮುಖವಾದ ಆಕರ್ಷಣೆ ಎಂದರೆ ನಿಮಿಷಾಂಭ ದೇವಾಲಯ.ಕಷ್ಟದಲ್ಲಿರುವವರಿಗೆ ನಿಮಿಷದಲ್ಲಿ ಪರಿಹಾರ ನೀಡುವ ಮಾಹಿಮಾನ್ವಿತವಾದ ದೇವಿ ಎಂದೇ ಸುಪ್ರಸಿದ್ಧಳಾಗಿದ್ದಾಳೆ.

ಶ್ರೀರಂಗ ಪಟ್ಟಣ ಕೋಟೆ: ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಹೊಂದಿರುವ ಈ ಭದ್ರವಾದ ಕೋಟೆಯನ್ನು 1537 ರಲ್ಲಿ ಕೆಂಪೇಗೌಡರು ನಿರ್ಮಿಸಿದರು.

ಶ್ರವಣಬೆಳಗೊಳ

ಮೈಸೂರಿನಿಂದ ಸುಮಾರು 83 ಕಿ.ಮೀ ದೂರದಲ್ಲಿ ಶ್ರವಣಬೆಳಗೊಳವಿದೆ. ಜೈನರಿಗೆ ಇದೊಂದು ಪವಿತ್ರವಾದ ಯಾತ್ರಾಸ್ಥಳವು ಹೌದು. ಮೈಸೂರಿನಿಂದ ಒಂದು ದಿನದ ಪ್ರವಾಸಕ್ಕೆ ಶ್ರವಣಬೆಳಗೊಳಕ್ಕೆ ಹೋಗಬಹುದು. ಈ ಧಾರ್ಮಿಕ ಸ್ಥಳವನ್ನು 4 ನೇ ರಾಚಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯ ನಿರ್ಮಿಸಿದರು ಎನ್ನಲಾಗಿದೆ. 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ಇಲ್ಲಿ ನಡೆಯುತ್ತದೆ.

ಶ್ರವಣಬೆಳಗೊಳದ ಪ್ರವಾಸಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಈ ರಜೆ ದಿನಗಳು ಸೂಕ್ತ ಎಂದೇ ಹೇಳಬಹುದು.

ಶಿವನ ಸಮುದ್ರ ಜಲಪಾತ

ಮೈಸೂರು ದಸರಾ ಮುಗಿಸಿ ಜಲಪಾತದ ಸೌಂದರ್ಯವನ್ನು ವೀಕ್ಷಿಸಲು ನೀವು ಬಯಸಿದರೆ ಶಿವನಸಮುದ್ರಕ್ಕೆ ಭೇಟಿ ಕೊಡಿ. ಇದು ಮೈಸೂರಿನಿಂದ ಕೇವಲ 81 ಕಿ.ಮೀ ದೂರದಲ್ಲಿದೆ. ಕರ್ನಾಟಕದ ಜನಪ್ರಿಯವಾದ ಜಲಪಾತಗಳಲ್ಲಿ ಶಿವನಸಮುದ್ರ ಕೂಡ ಒಂದು.

ಅವುಗಳನ್ನು ಗಗನಚುಕ್ಕಿ ಮತ್ತು ಭರಚುಕ್ಕಿ ಎಂದು ಕರೆಯುತ್ತಾರೆ. ಉಸಿರುಗಟ್ಟಿಸುವ ವಾತಾವರಣದಲ್ಲಿ ಅಡಗಿರುವ ಈ ಗುಪ್ತ ರತ್ನಗಳು ಅತ್ಯುತ್ತಮ ಪಿಕ್ನಿಕ್ ತಾಣವಾಗಿದೆ. ಮಳೆಗಾಲದ ಸಮಯದಲ್ಲಿ ಮೈದುಂಬಿ ಹರಿಯುವ ದೃಶ್ಯವನ್ನು ನೋಡುವುದೇ ಸೋಜಿಗ.

ಸೋಮನಾಥಪುರ

ಮೈಸೂರಿನಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಐತಿಹಾಸಿಕ ಸ್ಥಳ ಸೋಮನಾಥಪುರಕ್ಕೆ ನೀವು ಹೋಗಲೇಬೇಕು. ಇಲ್ಲಿ ಅತ್ಯಂತ ಸೊಗಸಾದ ಕೆತ್ತನೆಗಳುಳ್ಳ ಚೆನ್ನಕೇಶವ ದೇವಾಲಯವಿದೆ. ಈ ಅದ್ಭುತವಾದ ಆಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಇನ್ನು ಹೊಯ್ಸಳರ ಮನೋಹರವಾದ ವಾಸ್ತುಶಿಲ್ಪವನ್ನು ನೋಡಲು ನೀವು ಬಯಸಿದರೆ ಈ ದೇವಾಲಯಕ್ಕೆ ಹೋಗಿ. ಪ್ರತಿಯೊಂದು ವಿನ್ಯಾಸವು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಅಲ್ಲದೆ, ಮೈಸೂರು ಮತ್ತು ಬೆಂಗಳೂರಿಗರಿಗೆ ಇದೊಂದು ವಿಶೇಷವಾದ ವಾರಾಂತ್ಯ ತಾಣವು ಹೌದು.

ತಲಕಾಡು

ತಲಕಾಡು ಸೋಮನಾಥಪುರಂನಿಂದ ಸುಮಾರು 25 ಕಿ.ಮೀ ದೂರದಲ್ಲಿ ಮತ್ತು ಮೈಸೂರಿನಿಂದ 50 ಕಿ.ಮೀ ದೂರದಲ್ಲಿ ಇದೆ. ಮೈಸೂರಿನ ಪ್ರವಾಸದಲ್ಲಿ ಕೈಬಿಡಬಾರದ ತಾಣಗಳಲ್ಲಿ ಇದು ಕೂಡ ಒಂದಾಗಿದೆ.

ಇಲ್ಲಿ ಶಿವನಿಗೆ ಮುಡಿಪಾದ 5 ದೇವಾಲಯಗಳಿಗೆ ನೆಲೆಯಾಗಿದೆ. ಹಲವಾರು ರಾಜವಂಶಗಳ ವಾಸ್ತುಶಿಲ್ಪ ಅಭಿರುಚಿಗಳ ಸಮ್ಮಿಶ್ರಣವನ್ನು ನೀವು ತಲಕಾಡುವಿನಲ್ಲಿ ನೋಡಬಹುದು.