ಮನೆ ರಾಜ್ಯ ತುಮಕೂರು: ಮೂರನೇ ದಿನದ ಭಾರತ್ ಜೋಡೋ ಪಾದಯಾತ್ರೆ ಪ್ರಾರಂಭ

ತುಮಕೂರು: ಮೂರನೇ ದಿನದ ಭಾರತ್ ಜೋಡೋ ಪಾದಯಾತ್ರೆ ಪ್ರಾರಂಭ

0

ತುಮಕೂರು(Tumkur): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾಗಿರುವ ಭಾರತ್ ಜೋಡೊ ಪಾದಯಾತ್ರೆಯು ಜಿಲ್ಲೆಯಲ್ಲಿ ಮೂರನೇ ದಿನ ಯಶಸ್ವಿಯಾಗಿ ಮುಂದುವರೆದಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಪೋಚಕಟ್ಟೆಯಿಂದ ಬೆಳಿಗ್ಗೆ 6 ಗಂಟೆಗೆ ಯಾತ್ರೆ ಆರಂಭವಾಯಿತು. ಹುಳಿಯಾರು ಪಟ್ಟಣದ ಮುಖಾಂತರ ಕೆಂಕೆರೆಯರೆಗೆ ಪಾದಯಾತ್ರೆ ಸಾಗಿತು. ಕೆಂಕೆರೆಯಿಂದ ವಾಹನದ ಮೂಲಕ ಹಿರಿಯೂರು ಕಡೆಗೆ ತೆರಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,‌ ಶಾಸಕ ಡಾ.ಜಿ.ಪರಮೇಶ್ವರ ಸೇರಿದಂತೆ ಇತರೆ ಮುಖಂಡರು ಯಾತ್ರೆಯಲ್ಲಿ ಭಾಗವಹಿಸಿದ್ದರು.