ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ನಭೋಮಂಡಲದಲ್ಲಿ ಕೌತುಕ ಸೃಷ್ಟಿಸುವ ಘಟನೆಗಳಲ್ಲಿ ಗ್ರಹಣ ಕೂಡ ಒಂದು. ಇಂದು ಚಂದ್ರಗ್ರಹಣ. ಗ್ರಹಣ ಎಂದ ಮೇಲೆ ಒಂದಷ್ಟು ನೀತಿ ನಿಯಮಗಳು, ಶಾಸ್ತ್ರ, ಪೂಜೆ ಎಲ್ಲವೂ ನಮ್ಮ ಆಚರಣೆಯಲ್ಲಿದೆ.
ಅದೇ ರೀತಿ ಗ್ರಹಣದ ಸಮಯದಲ್ಲಿ ಆಹಾರ ಸೇವನೆ, ನೀರಿನ ಸೇವನೆ, ಹೊರಗಡೆ ಓಡಾಟ ಎಲ್ಲವೂ ನಿಷಿದ್ಧ. ನಮ್ಮ ಪೂರ್ವಜರು ಆರೋಗ್ಯದ ದೃಷ್ಟಿಯಿಂದ ಇವೆಲ್ಲ ಆಚರಣೆಗೆ ತಂದಿರುವುದು ತಿಳಿದೇ ಇದೆ.
ಗ್ರಹಣ ಕಾಲ ದೀರ್ಘವಾಗಿದ್ದಾಗ ಹೊಟ್ಟೆಗೆ ಏನು ತಿನ್ನದೆ ಖಾಲಿ ಇರುತ್ತದೆ. ಆಗ ಆಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಅನೇಕರಿಗೆ ಕಾಡುತ್ತದೆ. ಹೀಗಾಗಿ ಗ್ರಹಣದ ಬಳಿಕದ ಆಹಾರ ಆರೋಗ್ಯ ದೃಷ್ಟಿಯಿಂದ ಬಹಳ ಮುಖ್ಯವಾಗಿರುತ್ತದೆ. ದೀರ್ಘಕಾಲದ ಉಪವಾಸದ ಬಳಿಕ ಎಂತಹ ಆಹಾರ ಸೇವನೆ ಮಾಡಬೇಕು ಎನ್ನುವ ಬಗ್ಗೆ ಡಾ. ಶರದ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
ಆರೋಗ್ಯದ ಮೇಲೆ ಗ್ರಹಣದ ಪರಿಣಾಮ
ಗ್ರಹಣದ ಸಮಯದಲ್ಲಿ ಪರಿಸರ ಪರಿಸರವು ಕಲುಷಿತಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಉಸಿರಾಟದ ಮೂಲಕ ಅನೇಕ ರೀತಿಯ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸುವ ಅಪಾಯವೂ ಇದೆ.
ಚಂದ್ರಗ್ರಹಣದ ಸಂದರ್ಭದಲ್ಲಿ ಊಟ, ನಿದ್ದೆ ಬಿಟ್ಟರೆ ದೈಹಿಕ ಸಂಬಂಧ ಬೇಡ ಎಂಬ ನಂಬಿಕೆ ಇದೆ. ಇದಲ್ಲದೇ ಕೆಲವರು ಮೂತ್ರ ವಿಸರ್ಜನೆ ಮಾಡದಂತಹ ನಂಬಿಕೆಗಳನ್ನೂ ಅನುಸರಿಸುತ್ತಾರೆ. ಇದರೊಂದಿಗೆ ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡದಿರುವುದು ಒಳ್ಳೆಯದು.
ಗ್ರಹಣದ ಸಮಯದಲ್ಲಿ ಪರಿಸರ ಮಾಲಿನ್ಯವಾಗಿರುತ್ತದೆ ಅಂತಹ ಸಂದರ್ಭದಲ್ಲಿ ಅಡುಗೆ ಮತ್ತು ತಿನ್ನುವುದರಿಂದ ಜೀರ್ಣಕ್ರಿಯೆ ಹದಗೆಡುವ ಅಪಾಯವಿದೆ. ಇದಲ್ಲದೆ, ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮ ಬೀರಬಹುದು.
ಗ್ರಹಣದ ಮೊದಲಿನ ಆಹಾರ
ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣದ ಮೊದಲು ಶುದ್ಧ ಮತ್ತು ಸಾತ್ವಿಕ ಆಹಾರವನ್ನು ಸೇವಿಸಬೇಕು. ಆದರೆ, ಆಯುರ್ವೇದ ಅಥವಾ ಯಾವುದೇ ಸಂಶೋಧನಾ ಅಧ್ಯಯನದಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಗ್ರಹಣದ ನಂತರ
• ದೀರ್ಘಕಾಲದವರೆಗೆ ನೀರು ಅಥವಾ ಆಹಾರ ಸೇವನೆ ಮಾಡದೇ ಇರುವುದರಿಂದ ಗ್ರಹಣದ ನಂತರ ಆಹಾರ ಸೇವನೆ ಪ್ರಮುಖವಾಗಿರುತ್ತದೆ. ಏಕೆಂದರೆ ಗ್ಯಾಸ್ಟ್ರಿಕ್, ಆಸಡಿಟಿಯ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
• ಹೀಗಾಗಿ ಗ್ರಹಣದ ಉಪವಾಸದ ಬಳಿಕ ಲಘು ಆಹಾರದ ಸೇವನೆ ಮಾಡಬೇಕು. ಉದಾಹರಣೆಗೆ ಗಂಜಿ ಹಾಗೂ ತುಪ್ಪದ ಸೇವನೆ ಮಡುವುದು.
• ಇನ್ನು ಆದಷ್ಟು ಬೇಗನೆ ಜೀರ್ಣ ಆಗುವಂತಹ ಆಹಾರಗಳಿದ್ದರೆ ಒಳ್ಳೆಯದು. ರೊಟ್ಟಿ, ಚಪಾತಿಯಂತಹ ಒಣ ಆಹಾರಗಳನ್ನು ಆದಷ್ಟು ಅವೈಡ್ ಮಾಡಿ.
• ಸಾಕಷ್ಟು ನೀರನ್ನು ಸೇವನೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡುತ್ತಾರೆ ವೈದ್ಯರು.