ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಮೈಸೂರು(Mysuru): ಆಲನಹಳ್ಳಿಯ ಸರ್ವೇ ನಂ.41ರ ಗಿರಿದರ್ಶಿಸಿ ಎಕ್ಸ್’ಟೆನ್ಷನ್’ನಲ್ಲಿ ಮೈಸೂರು ರಾಜಮನೆತನಕ್ಕೆ ಸೇರಿದ ಜಾಗದಲ್ಲಿ ಎನ್. ಸೂರ್ಯನಾರಾಯಣ್ ಎಂಬುವರು 55 ಗುಂಟೆ ಜಾಗದಲ್ಲಿ ಅತಿಕ್ರಮಣವಾಗಿ ಪ್ರವೇಶಿಸಿ ಅನಧಿಕೃತ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಮೈಸೂರು ಅರಮನೆಯ ಸಂಪರ್ಕ ಅಧಿಕಾರಿ ಶಿವೇಂದ್ರ ಅರಸ್ ಆಲನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಲನಹಳ್ಳಿ ಸರ್ವೆ ನಂ.41 178 ಎಕರೆ 38 ಗುಂಟೆ ಜಮೀನಿನ ವಿಚಾರವಾಗಿ ಹೈಕೋರ್ಟ್ನಲ್ಲಿ ವಿಚಾರ ನಡೆದು ಮಹಾರಾಜರ ಖಾಸಗಿ ಸ್ವತ್ತು ಎಂದು ಘೋಷಿಸಿದೆ.ಇದಾದ ಬಳಿಕ ಮೈಸೂರಿನ ತಹಶೀಲ್ದಾರ್ ಆರ್’ಟಿಸಿ ಸಲ್ಲಿಸಿದ್ದು, ಸರ್ವೆ ನಂ.41ರಲ್ಲಿ 125 ಎಕರೆ ವಿಸ್ತೀರ್ಣವನ್ನು ‘ಅರಮನೆ ಕಾವಲು ಸ್ವಾಧೀನ’ದಲ್ಲಿ ಇರುತ್ತದೆ ಎಂದು ತೋರಿಸಿದ್ದಾರೆ.
ಆದರೆ, ಇದು ಮಹಾರಾಜರ ಖಾಸಗಿ ಸ್ವತ್ತು ಎಂದು ಹೈಕೋರ್ಟ್ ತೀರ್ಪಿನ ಅನ್ವಯ, ಅರಮನೆ ಕಾವಲು ತೆಗೆದುಹಾಕುವಂತೆ ಪ್ರಮೋದಾ ದೇವಿ ಅವರು ಮನವಿ ಸಲ್ಲಿಸಿದ್ದರು.
2022ರ ಜೂನ್ 13ರಂದು ಈ ವಿಚಾರವಾಗಿ ಅರ್ಜಿ ಸಲ್ಲಿಸಿರುವ ಅವರು, ತಮ್ಮ ಹೆಸರು, ಸರ್ವೆ, ಪೋಡಿ ಹಾಗೂ ದುರಸ್ತಿ ಮಾಡಲು ಕೋರಿರುತ್ತಾರೆ. ಈ ಮಧ್ಯದಲ್ಲಿ ಈ ಸ್ವತ್ತಿನಲ್ಲಿ 55 ಗುಂಟೆ ಜಾಗದಲ್ಲಿ ಎನ್.ಸೂರ್ಯ ನಾರಾಯಣ್ ಮತ್ತು ಸಹಚರರು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ ವೇಳೆ, ಬೆದರಿಕೆ ಒಡ್ಡಿದ್ದು, ಕೆಲಸ ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.