ಮನೆ ಆರೋಗ್ಯ ಜ್ವರ ಮತ್ತು ಶೀತ ಕಡಿಮೆ ಮಾಡುವ ಮೂರು ಅತ್ಯದ್ಭುತ ಆಯುರ್ವೇದ ಪರಿಹಾರಗಳು

ಜ್ವರ ಮತ್ತು ಶೀತ ಕಡಿಮೆ ಮಾಡುವ ಮೂರು ಅತ್ಯದ್ಭುತ ಆಯುರ್ವೇದ ಪರಿಹಾರಗಳು

0

ಚಳಿಗಾಲದಲ್ಲಿ ಕೇವಲ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಾದ ನಮಗೂ ಸಹ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಶೀತ, ನೆಗಡಿ, ಕೆಮ್ಮು ಕಾಮನ್! ಕೆಲವರಿಗೆ ಇದಕ್ಕೂ ಮೀರಿದಂತೆ ಜ್ವರ ಮತ್ತು ಗಂಟಲು ನೋವು ಕೂಡ ಬರಬಹುದು. ಈ ರೀತಿ ಆದಾಗ ನಮ್ಮ ಮನಸ್ಸು ಮೊದಲು ಆಲೋಚನೆ ಮಾಡುವುದು ಇದಕ್ಕೆ ಸಂಬಂಧಪಟ್ಟ ಇಂಗ್ಲಿಷ್ ಔಷಧಿಗಳನ್ನು ಅಂದರೆ ಮಾತ್ರೆಗಳನ್ನು. ಅದನ್ನು ಬಿಟ್ಟರೆ ಡಾಕ್ಟರ್ ಶಾಪ್.

ಆದರೆ ಕೇವಲ ಇದೇ ಏಕೆ ಪರಿಹಾರ ಎಂದುಕೊಳ್ಳಬೇಕು? ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಹಾಗೆ ನಾವು ಮನೆಯಲ್ಲಿ ಬಳಸುವ ಬಹುತೇಕ ಅಡುಗೆ ಸಾಮಾಗ್ರಿಗಳು ನಮ್ಮ ಇಂತಹ ತೊಂದರೆ ಗಳಿಗೆ ಮನೆ ಔಷಧಿಗಳಾಗಿ ಕೆಲಸ ಮಾಡುತ್ತವೆ. ಆದರೆ ಅವುಗಳನ್ನು ಹೇಗೆ ಬಳಸಬೇಕು ಎಂಬುದು ನಮಗೆ ಗೊತ್ತಿರಬೇಕು ಅಷ್ಟೇ.

ತುಳಸಿ ಎಲೆಗಳು ಮತ್ತು ಲವಂಗ

• ಚಳಿಗಾಲದಲ್ಲಿ ಕೆಲವರಿಗೆ ಜ್ವರ ಸಾಮಾನ್ಯವಾಗಿ ಬರುತ್ತದೆ. ಅವರೇ ಹೇಳುವ ಪ್ರಕಾರ ವರ್ಷಕ್ಕೊಂದು ಬಾರಿ ಇದೇ ಸಮಯಕ್ಕೆ ಜ್ವರ ಫಿಕ್ಸ್!

• ಸ್ವಾಮಿ ರಾಮದೇವ್ ಗುರೂಜಿ ಪ್ರಕಾರ ಒಳ್ಳೆಯ ಆರೋಗ್ಯಕ್ಕೆ ಭಾರತೀಯ ಗಿಡಮೂಲಿಕೆಗಳ ರಹಸ್ಯಗಳು ಎಂಬ ಪುಸ್ತಕದಲ್ಲಿ ಚಳಿಗಾಲದಲ್ಲಿ ಬರುವ ಜ್ವರ ಮತ್ತು ಶೀತಕ್ಕೆ ತುಳಸಿ ಎಲೆಗಳು ಮತ್ತು ಲವಂಗ ಹೇಗೆ ಪರಿಹಾರವಾಗುತ್ತದೆ ಎಂಬುದನ್ನು ತಿಳಿಸಲಾಗಿದೆ.

ಮಾಹಿತಿಯ ಪ್ರಕಾರ

ಅಲ್ಲಿರುವ ಮಾಹಿತಿಯ ಪ್ರಕಾರ ನಿಮಗೆ ಒಂದು ವೇಳೆ ಇಂತಹ ಆರೋಗ್ಯ ಸಮಸ್ಯೆ ಎದುರಾದರೆ, ನೀವು ಏಳೆಂಟು ಹಸಿ ತುಳಸಿ ಎಲೆಗಳನ್ನು ತೆಗೆದುಕೊಂಡು ಜೊತೆಗೆ ಐದು ಲವಂಗ ಸೇರಿಸಿ ಎರಡನ್ನು ಚೆನ್ನಾಗಿ ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ನೀರು ಅರ್ಧಕ್ಕೆ ಬರುವವರೆಗೆ ಚೆನ್ನಾಗಿ ಕುದಿಸಬೇಕು. ಇದಕ್ಕೆ ಸ್ವಲ್ಪ ಕಲ್ಲುಪ್ಪು ಸೇರಿಸಿ. ಇದನ್ನು ದಿನಕ್ಕೆ ಎರಡು ಬಾರಿಯಂತೆ 2 ರಿಂದ 3 ದಿನಗಳು ಕುಡಿಯಿರಿ.

ಒಣಶುಂಠಿ, ಕಪ್ಪು ಮೆಣಸು ಮತ್ತು ಜೇನುತುಪ್ಪ

• ಚಳಿಗಾಲದ ಶೀತ, ಕೆಮ್ಮು, ನೆಗಡಿ, ಜ್ವರಕ್ಕೆ ರಾಮಬಾಣವಾಗಿ ಒಣಶುಂಠಿ, ಕಪ್ಪು ಕಾಳುಮೆಣಸು ಮತ್ತು ಜೇನುತುಪ್ಪ ಕೆಲಸ ಮಾಡುತ್ತದೆ. ಹೀಗೆಂದು ಆಯುರ್ವೇದ ಅಡುಗೆ ಪುಸ್ತಕದ ಲೇಖಕರು ಮತ್ತು ಕೈರಾಲಿ ಆಯುರ್ವೇದಿಕ್ ಗ್ರೂಪ್ ಜಂಟಿ ನಿರ್ವಹಣಾಧಿಕಾರಿ ಆಗಿರುವ ಗೀತಾ ರಮೇಶ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

• ಅವರೇ ಹೇಳುವ ಪ್ರಕಾರ ಶುಂಠಿ ಮತ್ತು ಕಾಳುಮೆಣಸು ಗಾಢವಾದ ರುಚಿಯನ್ನು ಹೊಂದಿದ್ದು, ಇದು ದೇಹದ ಜೀರ್ಣಶಕ್ತಿಯನ್ನು ಮತ್ತು ದೇಹದಲ್ಲಿ ರಕ್ತ ಸಂಚಾರವನ್ನು ವೃದ್ಧಿಸುವ ಕೆಲಸ ಮಾಡು ವುದರ ಜೊತೆಗೆ ಆರೋಗ್ಯಕರವಾದ ಉಸಿರಾಟ ವ್ಯವಸ್ಥೆಯನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒಣಗಿರುವ ಶುಂಠಿ ಮತ್ತು ಕಾಳು ಮೆಣಸು

• ಇದು ದೇಹದಲ್ಲಿ ಹೆಚ್ಚುವರಿ ಉಷ್ಣಾಂಶವನ್ನು ಉಂಟಾಗುವಂತೆ ಮಾಡಿ ಶೀತ ಸಂಬಂಧಿ ಸಮಸ್ಯೆಯನ್ನು ವಾಸಿ ಮಾಡುತ್ತದೆ. ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ.

• ಒಂದು ಲೋಟ ನೀರಿನಲ್ಲಿ ಒಣಗಿರುವ ಶುಂಠಿ ಮತ್ತು ಕಾಳು ಮೆಣಸು ಹಾಕಿ ಚೆನ್ನಾಗಿ ಕುದಿಸಬೇಕು. ನೀವು ತೆಗೆದುಕೊಂಡು ನೀರು ಅರ್ಧಕ್ಕೆ ಬರುವವರೆಗೆ ಕುದಿಸಿ ಆರಿಸಿ ಅದಕ್ಕೆ ಜೇನುತುಪ್ಪ ಮಿಶ್ರಣ ಮಾಡಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸುತ್ತಾ ಬರಬೇಕು. ಹೀಗೆ ಮಾಡುವುದರಿಂದ ಚಳಿಗಾಲದಲ್ಲಿ ನೆಗಡಿ, ಕೆಮ್ಮು ದೂರವಾಗುತ್ತದೆ.

ಪಲಾವ್ ಎಲೆಗಳು

• ರೈಸ್ ಬಾತ್ ತಯಾರು ಮಾಡುವಾಗ ಹಾಕುವ ಪಲಾವ್ ಎಲೆಗಳು ನಿಮ್ಮ ಕೆಮ್ಮು ಮತ್ತು ಗಂಟಲು ನೋವು ಸಮಸ್ಯೆಯನ್ನು ಪರಿಹಾರ ಮಾಡುತ್ತದೆ.

• ಆಯುರ್ವೇದ ಶಾಸ್ತ್ರದ ಪ್ರಕಾರ ಆಯುರ್ವೇದ ತಜ್ಞರಾದ ರಮಣ ಮಿಶ್ರ ಹೇಳುವ ಹಾಗೆ ನೀವು ಇವುಗಳಿಂದ ಚಹಾ ತಯಾರು ಮಾಡಿ ಕುಡಿಯಬಹುದು. ಈ ಎಲೆಗಳ ಗಾಢವಾದ ವಾಸನೆಗೆ ಬೇಕೆಂದರೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ ರುಚಿ ಹೆಚ್ಚಿಸಿ ಕುಡಿಯಬಹುದು.